Monday, December 31, 2012

ಒಮ್ಮೆ

ಗುರು ಸಾಕ್ಷಾತ್ ಪರಬ್ರಹ್ಮ
ವಿದ್ಯಾರ್ಥಿಯ ಅಧ್ಯಯನದಿ ಒಮ್ಮೆ
ಭಕ್ತಿಯ ನವ್ಯ ಚಿಂತನ !!

ಭವತಿ ಭಿಕ್ಷಾಂ ದೇಹಿ
ಭಿಕ್ಷಾರ್ಥಿಯ ಉದರದಲ್ಲಿ ಒಮ್ಮೆ
ಬಯಕೆಯ ಭವ್ಯ ಭೋಜನ !!

ಮಾಂಗಲ್ಯಂ ತಂತುನಾನೇನ
ಕನ್ಯಾರ್ಥಿಯ ಕನಸಲ್ಲಿ  ಒಮ್ಮೆ
ಸಂಕೋಚದ ನವ್ಯ ನರ್ತನ !!

ಭಜ ಗೋವಿಂದಂ ಭಜ ಗೋವಿಂದಂ
ಮೋಕ್ಷಾರ್ಥಿಯ ಮನಸಲ್ಲಿ ಒಮ್ಮೆ
ಸಂಸಾರದ ನಿತ್ಯ ಜೀವನ !!


Wednesday, December 26, 2012

ನಯನ




ಅಕ್ಕ ಪಕ್ಕವೇ ಮನೆ ಮಾಡಿರುವ
ಒಂದರಂತೆ ಇನ್ನೊಂದು ಕಂಗೊಳಿಸುವ
ಅನ್ಯೋನ್ಯತೆಗೆ ಬೆರಗಾಗಿ ನಾನೇನ ಕರೆಯಲಿ ?

ಬಾಹ್ಯ ಸೌಂದರ್ಯಕ್ಕೆ ನೀನೆ ಸಾಕ್ಷಿ
ಮನಸಿನ ಆಂತರ್ಯಕ್ಕೆ ನೀನಲ್ಲವೇ ಅಕ್ಷಿ 
ಸುಖ ದುಃಖದಲ್ಲೂ ನೀನು ಸಾಮಾನ್ಯ ಪಕ್ಷಿ   !!

ನಕ್ಕಾಗ ಶೋಬಿಸುವ ಅತ್ತಾಗ ಮರಗುವ
ಸುತ್ತಲೂ ನೋಡುವ ನಿನ್ನಯ ಹೊಳಪಿನ ಕಾಂತಿಯ
ತುಂಟ ಕಣ್ಣಿನ ನೋಟಕ್ಕೆ ತಟ್ಟನೆ ಮನಸೋಲದವರಾರು ?

Saturday, December 15, 2012

ಮೊದಲರಾತ್ರಿ

ನನ್ನದೇ ಮಂಚದಲಿ 
ನಮ್ಮನೆಯ ಹಾಸಿಗೆಯಲಿ 
ಮಲ್ಲಿಗೆಯ ಬೆಳಸಿದವರಾರು ?
 
ನವಿಲಿನ ನಡಿಗೆಯಲಿ
ನುಡಿಮುತ್ತು ಸುರಿಸುತ್ತ
ಮೊದಲರಾತ್ರಿಗೆ ಬಂದವಳಾರು? 
 
ನನ್ನುಸಿರ ತೇರಿನಲಿ 
ನನ್ನಾಕೆಯ ಬೆವರಿನಲಿ 
ಸುಗಂಧವ ಸುರಿಸಿದವರಾರು ?
 
ನಾನೊಂದು ಕೇಳಿರಲು
ನೂರೊಂದು ಕೊಟ್ಟವಳ
ಮೈ ಬಿಸಿಮಾಡಿಸಿದವರಾರು ?
 
ನೂರಾರು ಕನಸಿನಲಿ  
ನಗುತ ಬಂದವಳ ಬಳಿಯಲಿ
ಸುಮ್ಮನೆ ಮಲಗುವವರಾರು ?
 
 
 

Monday, December 10, 2012

ಘಟನೆಗಳು

ಕಾಲದ ಪರಿಧಿಯಲಿ ಮರೆತೇ ಹೋದ
ಕೆಲವೊಂದು ದಿನಗಳು ಚಿಟ್ಟೆಯಂತೆ
ಹಾರಿ ಬಂದು ನೆನಪಿಸಿ ಹೃದಯವನ್ನೇ
ಎಡಬಿಡದೆ ಘಾಸಿಗೊಳಿಸುತಿದೆ ಕಾಣ !!

ಹೆಜ್ಜೆ ಹೆಜ್ಜೆಯಲ್ಲೂ ಅವಳ ಗೆಜ್ಜೆ ಸದ್ದು
ಕ್ಷಣ  ಕ್ಷಣಕ್ಕೂ ಬೀಳುವ ಬಳೆಗಳ ಗುದ್ದು
ಹತ್ತಿರ ಬಂದಾಗ ಬಿಸಿ ಉಸಿರ  ಮುದ್ದು
ಕಣ್ಣುಗಳೇ ವಂಚಿಸಿ ನೋಡುತಿತ್ತು ಕದ್ದು !!

ಪ್ರೇಮಕಾವ್ಯದಲ್ಲೂ ಇರಲಾರದ ವಿರಹ
ಇರುವೆಗೂ ತಿಳಿಯದ ನಮ್ಮ ಕಲರವ
ಮುಂಜಾವಿನ ಮಂಜಿನಂತೆ ಹನಿಗಳು
ಮುಖದ ತುಂಬಾ ಜೇನಿನ ಇಬ್ಬನಿಗಳು !!

ಒಂದೇ ಎರೆಡೆ ಅನುದಿನ ಇಂಥಹವು
ಅನೇಕ ಸಿಹಿನೆನಪುಗಳ ಮೆರವಣಿಗೆಯು
ವಾಸ್ತವಕ್ಕೂ,ಕಲ್ಪನೆಗೂ ಮಧ್ಯೆ ಅನಂತ
ವ್ಯತ್ಯಾಸ ತಂದು ಸಾಗುತಿರೆ ದಿಗಂತಕೆ !!

Thursday, December 6, 2012

ಮುಪ್ಪು




ಬಾಳ ಇಳಿ ಸಂಜೆಯಲಿ
ಮೂಡಿದೊಂದೊಂದು ಕನಸು
ಮನಸಿನ ಸುಪ್ತ ಭಾವನೆಯ
ಅಲ್ಲೋಲ ಕಲ್ಲೋಲ ಗೊಳಿಸಿತೇಕೆ ?

ತುಂಬಿದ ಮನೆಗೆ ಕತ್ತರಿ
ನುಂಗಲಾರದ ತುತ್ತು ತಟ್ಟೆಯಲಿ
ಆಳುವ ನನ್ನೀ ಕೈಗಳೇ ಅಂದೇಕೆ
ಅಳುವ ಕಣ್ಣಿನ ಮೇಲೆ ನರ್ತಿಸುತಿದೆ ?

ಆರದ ಆಸ್ತಿಯ ಬಯಸದೆ
ಕೊಟ್ಟಮೆಲೂ, ತೀರದ ಆಯುಷ್ಯಕ್ಕೆ
ಜರಿದು ಮೂಲೆಗುಂಪಾಗಿಸುವ ಪ್ರಯತ್ನಕೆ
ಹಿರಿಯ ಜೀವವದು ಕುಗ್ಗಿ ನೊಂದಿತೇಕೆ ?

ಮುಪ್ಪಿನ ಬಂದನಕ್ಕೆ ನೆಚ್ಚಿ
ಮಕ್ಕಳ ಪ್ರೀತಿಯ ಆರೈಕೆಯಲಿ
ಉಳಿದ ನಾಲ್ಕುದಿನ ಕಳೆಯುವ
ಸದ್ಬಯಕೆಗೆ ತಿಲಾಂಜಲಿ ಬಿಟ್ಟಿರಬೇಕೆ ?

Tuesday, December 4, 2012

ಸಂಸ್ಕೃತಿ



ಯುಗವೊಂದು ಕಳೆದಂತೆ ಕಾಣಿಪುದು ನೋಡಿರ
ಮಗುತಾನು ಬದಲಾಗಿಪುದು ವೇಷಭೂಷಣದಲಿ
ನಡುನಡುವೆ ಸುಳಿದಾಡುವ ಆಂಗ್ಲಪದ ಪುಂಜದಲಿ
ಹೆತ್ತವರ ದೂರಮಾಡಲು ಹೇಸದ ಕಾಲಘಟ್ಟದಲಿ !

ವ್ಯಕ್ತಿ ವ್ಯಕ್ತಿಯ ಮಧ್ಯೆ ನಂಬಲಾರದ ಬದಲಾವಣೆ
ಸಾಗುತಿಹ ಪಾಶ್ಚಿಮಾತ್ಯಕ್ಕೆ ನಮ್ಮ ಹೊಂದಾಣಿಕೆ
ಮನೆಯ ಗೋಡೆಯ ತುಂಬಾ ವಾಸ್ತು ಲಾಂಛನ
ಕಾಣದಾಗಿದೆ ಪ್ರೀತಿ ಪಾತ್ರರ ಛಾಯಚಿತ್ರ ಪ್ರದರ್ಶನ !

ದೇವರಿಗೂ ಸಿಗದಾಗಿದೆ ಮನೆಯ ಮೂಲೆಯ ಜಾಗ
ಶೌಚಾಲಯಕ್ಕೆ ಮಾತ್ರ ಪ್ರತಿ ಕೋಣೆಯಲ್ಲೂ ವ್ಯವಸ್ತೆ
ಮನೆಯ ಹಿಂದಿನ ಹಿತ್ತಲು ಕತೆಗೆ ಮಾತ್ರ ಸೀಮಿತ
ತುಳಸಿ ಗಿಡಕ್ಕೆ ಜಾಗ ಸಿಗುವುದೇ ಒಂದು ಸೋಜಿಗ !

ಸದಾ ವಿಚಿತ್ರವೆನಿಸುವ ಜೀವನ ಪಂಜರವಿದು ಕಾಣ
ಅನುಕಂಪ ಆತ್ಮೀಯತೆ ತಿಳಿಯದ ಮನುಜ ಗಣ
ಕಾಂಚಾಣದ ಹಿಂದೆ ಓಡುತಿದೆ ಮೌಲ್ಯದ ಗುಣ
ಏಂದು ಬದಲಾಗುವುದೋ ಈ ಭಾರತೀಯನ ಮನ !!

Wednesday, November 21, 2012

ಮನಸೆಂಬ ನಿಮ್ಮ ಜೋಗಯ್ಯ

ಕವಲೊಡೆದ ದಾರಿಯಲಿ 
ಸರಿ ತಪ್ಪುಗಳ ಮೂಟೆ ಹೊತ್ತು 
ಸಾಗುವವನು ನಾನಯ್ಯ ನಿಮ್ಮ ಜೋಗಯ್ಯ !!
 
ಅವಶೇಷದ ಹಾದಿಯಲಿ  
ಪಾಪ ಪುಣ್ಯಗಳ ಲೆಕ್ಕ ಕೊಟ್ಟು 
ಕರೆದೊಯ್ಯುವ ನಮ್ಮನ್ನು ನಿಮ್ಮ ಜೋಗಯ್ಯ !!
 
ಜೀವನದ ಜಂಜಾಟದಲಿ
ಅಂತೆ ಕಂತೆಗಳ ಕಣ್ಣು ತಪ್ಪಿಸಿ 
ಮುಕ್ತಿ ತೋರುವನಮ್ಮ ನಿಮ್ಮ ಜೋಗಯ್ಯ !!
 
ನಾಲ್ಕುದಿನದ ಬಾಳಲ್ಲಿ
ಹರಿ ಹರರ ನೆನಪಿಸಿ ಮಾರ್ಗ 
ತೋರುವವನು ನಾನಯ್ಯ ನಿಮ್ಮ ಜೋಗಯ್ಯ !!    
 
 
 

Tuesday, November 20, 2012

ನೋವು

ಕಾದಿರುವ ಪ್ರೀತಿ ಪಾತ್ರರಿಗದುವೆ
ಕೊಡಬಾರದ ನೋವು
ಕೊಟ್ಟ ಮೇಲೆ ತಪ್ಪದೆ ಕಾಡುವುದು 
ಅಪವಾದದ ಕಾವು !!

ಭಾರವಾದ ಮನಸ್ಸಿಗೆ ತಾಳಲಾರದ 
ಅಪಸ್ವರದ ಬೇನೆ
ಸಂಸಾರ ಸಾಗರದಲ್ಲಿ ಆತಂಕಕೆ
ಇನ್ನೆಲ್ಲಿದೆ ಕೊನೆ !!

ಯೋಚನೆಯ ಗೂಡಿನಲ್ಲಿ ಕಾಣದದು
ನೋವಿನ ಧ್ವನಿ  
ನಿರಂತರ ಸುಳಿದಾಡುತಿದೆ ಮೌನದ 
ಕಣ್ಣೀರಿನ ಹನಿ !!

ನಿಷ್ಠೂರದ ಅಗ್ನಿಯ ಜ್ವಾಲೆಯದುವೆ 
ಸದಾ ನನ್ನ ಸುತ್ತಾ
ಇನ್ನಾದರೂ ಕೊನೆಯಾಗಲಿ ಎಂದೂ
ಸಿಗದ ಮುಕ್ತ ಮುಕ್ತಾ !!

Friday, November 16, 2012

ಬಂಧನ


ಸುಲಲಿತ ಮಾತುಗಳ ಮಧ್ಯ
ಅಸ್ಪಷ್ಟ ಚಿತ್ರಣ
ಭಿಗಿಯಾದ ಬಾಹುಗಳ ಮಧ್ಯ
ಅಭಯ ಮುದ್ರಣ

ಕಾರುಣ್ಯ ನಿಧಿಯಂತೆ ಶೋಭಿಸುವ
ನಿನ್ನಯ ನಯನ
ಕುತೂಹಲ ಕೆರಳಿಸುವ ಮೌನ
ಮುದ್ರಿತ ಸಂಭಾಷಣ

ಕಂಪಿಸುವ ಹೃದಯದಿ ಮೆಲ್ಲನೆ
ಬಯಕೆಯ ಆಗಮನ
ಕ್ಲಿಷ್ಟ ಸಮಸ್ಯೆಯ ಬಗೆಹರಿಸುವ
ಪ್ರೀತಿಯ ಆಲಿಂಗನ

ಪ್ರೇಮಾಂಕುರ ಚಿಗುರೋಡೆಯುತಿದೆ
ನಮ್ಮ ನಡುವಣ
ನವಜಾತ ಸತಿಪತಿ ಸಂಬಂಧದ ಈ
ಮಧುರ ಬಂಧನ

ಬಂದಿಹರು

ನೆನಪುಗಳ ತೋಟದಲಿ ನನ್ನೊಡನೆ ಸುಳಿವುವವರು
ನನ್ನವರು, ನನ್ನ ಗೆಳೆಯರಿವರು
ಪ್ರತಿ ದಿನವು, ಪ್ರತಿ ಕ್ಷಣವೂ ನನ್ನೊಡನೆ ಕಳೆಯುವರು !!

ನಗುವರು ಸದಾ ನಗಿಸುವರು ದುಃಖವನು ಮರೆಸುವರು
ನನ್ನ ನೆಚ್ಚಿನ ಗೆಳೆಯರವರು
ಹರಿಸುವರು ಸದಾ ಹಾರೈಸುವರು,ಕಷ್ಟದಲಿ ಕೈ ಜೋಡಿಸುವರು !!

ನನ್ನ ಇಷ್ಟ ಮಿತ್ರರಿವರು ಆಡುವರು ಸದಾ ನಲಿಯುವರು
ಜೀವಕ್ಕೆ ಜೀವ, ಸ್ನೇಹಕ್ಕೆ ಸ್ನೇಹ ಕೊಡುವರಿವರು
ಬರುವವರು ಮರೆಯದೆ ಬಂದಿಹರು
ಕೋಟೇಶ್ವರದಲಿ ನಡೆಯುವ ನನ್ನ ಮದುವೆಗವರು !!

Friday, October 12, 2012

ಪ್ರೇಮಗಾಳಿ

ಅರಳಿದ ಗುಲಾಬಿಯ ಬಣ್ಣದ ಮೋಡಿ
ಪ್ರೇಮ ಕಾವ್ಯಕೆ ಶೃಂಗಾರ ದಾಟಿ
ಸರಳ ನಡಿಗೆಯಲಿ ಆಕೆಯ ನೋಟ
ಕೆರಳಿದ ಸಿಂಹಕ್ಕೂ ಪ್ರೀತಿಯಕಾಟ !

ಅಳುಕು ಬಳುಕು ಆಕೆಯ ಆಗಮನ 
ಕೋಗಿಲೆ ಕಂಠಸಿರಿ ನಿನಗೆ ನಮನ
ನವಿಲೇ ನಾಚುವ ಮೋಹಕ ನರ್ತನ
ತಂಪಾದ ಸಂಜೆಯದು ನಿತ್ಯ ಜೀವನ !

ಮೂಡಣ ರವಿಯ ಸಣ್ಣನೆ ಕಿರಣ
ತಾಗಿತು ಸಖಿಯ ಮೆತ್ತನೆ ಕೆನ್ನೆಯ
ನಲ್ಲೆಯ ಮೊಗದಿ ತಣ್ಣನೆ ಗಾಳಿ
ಇದುವೇ ಪ್ರೇಮದ ಸುಂಟರಗಾಳಿ !!

Tuesday, October 9, 2012

ಪರಿಸರ

ಅಚ್ಚ ಹಸಿರಾಗಿರುವ ಭುವಿಯೇ
ಸ್ವಚ್ಛ ನಿರ್ಮಲೆಯಾಗಿ
ಸದಾ ಸಿರಿಯಂತೆ ಕಂಗೊಳಿಸುವೆ

ಮಳೆಯ ಆರ್ಭಟಕು ಬೆದರದೆ
ಗುಡುಗು ಮಿಂಚಿಗೂ ಅಂಜದೆ
ಅಣಬೆಗೆ ಜನ್ಮವ ನೀ ನೀಡುವೆ

ಹಕ್ಕಿಯ ಚಿಲಿಪಿಲಿ ಜೊತೆ ಮೃಗ
ಪ್ರಾಣಿಗಳಿಗೂ ಆಶ್ರಯದಾತೆ
ಆಹಾರ ಸರಪಳಿಯ ಸೃಷ್ಟಿಕರ್ತೆ

ನೊಂದ ಮನಕೆ ಕೈ ಬೀಸಿ ಕರೆದು
ಸಾಂತ್ವನವ ನೀ ಉಣಿಸುವಾಕೆ
ಕರೆಸಿಕೊಳ್ಳುವೆ ನೀ ಪರಿಸರಮಾತೆ !!

ಸವಿನೆನಪು

ನಿನ್ನ ನೆನಪು ನನ್ನ ಮನದ ಅಂಗಳದಲ್ಲಿ 
ಮೂಡುವ ಒಂದೊಂದು ಕನಸು, ಇಲ್ಲಿ
ನಾನು ನೀನು ವ್ಯತ್ಯಾಸವಿಲ್ಲದ ಮೀನು !!

ನಿನ್ನ ನೆನಪೇ ನನ್ನ ಬಳಿ ಉಳಿದ ಅಸ್ತ್ರವು
ಮರೆತೇ ಹೋಗದ ನೆನಪುಗಳ ಪತ್ರವು
ನಡು ನಡುವೆ ಸುಳಿಯುವ ಅಸ್ಪಷ್ಟ ಚಿತ್ರವು !! 

ಮೊನ್ನೆ ತನಕ ಕಾಡಿತ್ತು ನಿನ್ನ ಸವಿನೆನಪು
ಮರು ಕ್ಷಣವೇ ನಿನ್ನ ಸಂದೇಶ ತಲುಪಿತು
ನಲ್ಮೆಯ ಗೆಳತಿಗೆ ಪ್ರೀತಿಯ ಮುನಿಸು !!

ಮನೆಯಾಕೆಗೆ ಬರಬೇಕೆ ಇಂತಹ ಮುನಿಸು
ನನಗೋ ಮನಸಲ್ಲಿ ಇದೆ ಇರಿಸು ಮುರಿಸು
ನೋವನು ಮರೆಸಲು ಬೇಕು ಹೊಸ ಸರಕು !! 

Wednesday, October 3, 2012

ಸನಿಹ

ನಲ್ಲೆ ನಿನ್ನ ನೋಟದಲ್ಲೇ
ಕೊಲ್ಲಬಹುದೇ ನೀ ಹಲವು ಜೀವ
ಸಲ್ಲ ನಿನ್ನ ಲಲ್ಲೆ ಮಾತು
ಬದುಕಬೇಕು ಪಾಪ ಒಂಟಿ ದೇಹ !!

ಸನಿಹ ನಿಂತ ಇನಿಯನಲ್ಲಿ 
ಮೂಡಿತೊಂದು ಕ್ಷಣದಿ ಮೋಹ 
ಆಹಾ ಇದೇನು ದಾಹ
ಇದೆ ಏನೋ ಪ್ರೇಮಿಗಳ ವಿರಹ !!


ಒಮ್ಮೆ ಕೊಟ್ಟ ಸಲಿಗೆಯಲ್ಲೇ
ಬಂತು ನೋಡು ಅದೇನೋ ನಿನ್ನ ಹುಚ್ಚು
ಕದ್ದೆ ನನ್ನ ಹೃದಯವನ್ನೇ
ನೀನಂತೆ ಅದಕೆ ತುಂಬಾ ಅಚ್ಚು ಮೆಚ್ಚು !!

Sunday, September 30, 2012

Wednesday, September 26, 2012

ಏನು ಗೊತ್ತು

ನಲಿವ ನವಿಲಿಗೇನು ಗೊತ್ತು 
ತನ್ನ ನೃತ್ಯ ನೋಡುವ ಮನಗಳ ಭಾವನೆ
ಕಚ್ಚುವ ಹಾವಿಗೇನು ಗೊತ್ತು
ತನ್ನ ಬಾಯಲ್ಲಿರುವ ವಿಷದ ಕಾರ್ಖಾನೆ !


ಹಾಡುವ ಕೋಗಿಲೆಗೇನು ಗೊತ್ತು
ತನ್ನ ಕಂಟದ ಇಂಪಾದ ಸ್ವರ ಸಂಪತ್ತು
ಓಡುವ ಜಿಂಕೆಗೇನು ಗೊತ್ತು
ತನ್ನ ಜಿಗಿತದಲ್ ಅಡಗಿರುವ ಗಮ್ಮತ್ತು  !


ಗರ್ಜಿಸುವ ಸಿಂಹಕ್ಕೆನು ಗೊತ್ತು
ತನ್ನ ಮನದಲ್ಲಿರುವ ಪ್ರೀತಿಯ ಸ್ವತ್ತು
ಜಿಗಿವ ಮೊಲಕ್ಕೆನು ಗೊತ್ತು
ತನ್ನ ಪ್ರಾಣಕ್ಕೆ ಆಗಲಿರುವ ಆಪತ್ತು  !


ಉಳುವ ರೈತನಿಗೇನು ಗೊತ್ತು
ತನ್ನ ಹೊಲದಲ್ಲಿರುವ ಖನಿಜ ಸಂಪತ್ತು
ಅಳುವ ಕಂದನಿಗೇನು ಗೊತ್ತು
ತನ್ನ ತಾಯಿಯ ಸ್ಪರ್ಶದ ಆ ಮುತ್ತು !!


ಗುಂಯಿಗುಡುವ ಜೇನಿಗೇನು ಗೊತ್ತು 
ತನ್ನ ತುಪ್ಪಕ್ಕಿರುವ ಕಾಸಿನ ಕಿಮ್ಮತ್ತು
ಇವೆಲ್ಲವೂ ಮೊದಲೇ ಗೊತ್ತಿದ್ದರೆ
ಜಗದ ನಿಯಮವೇ ತಲೆಕೆಳಗಾಗುತಿತ್ತು!!

Tuesday, September 25, 2012

ಒಲವು

ಮಂಕಾಗಿದೆ ಈ ಮನವು
ಹಸಿವುತಣಿಸಿದ ಒಲವು
ಮನದಲ್ಲಿನ ಬಯಕೆಯು  
ತಿಳಿಯಬೇಕಿದೆ ಹಲವು
 
ಸ್ವಪ್ನ ನಿಜವಾದರಾಗಿತು
ಚಿನ್ನ ಧುಬಾರಿಯಾಗಿತು
ರತ್ನ ಕೈಸೇರಿದರಾಗಿತು
ನನ್ನದೀ ಮನ ಸಂಪತ್ತು
 
ಕಣ್ಣು ಮಿಟುಕಿಸಿದಂತೆ
ಹಣ್ಣು ಧರೆಗುರುಳಿದಂತೆ
ಮಣ್ಣು ಹಸನಾದಂತೆ
ಹೆಣ್ಣು ತಾ ಒಲಿದಳಂತೆ

Sunday, September 23, 2012

ನಾ ಹೊರಟಿರುವೆ

ಬಲು ಅಮೊಘವೋ ಇದೊಂದು ನನ್ನ ಸುಯೂಗವೋ

ನಾ ತಿಳಿಯುವ ಮೊದಲೇ ಒಪ್ಪಿರುವ
ನಾಚಿ ನನ್ನೊಂದಿಗೆ ನಿಂತಿರುವ
ಮುಂದೆ ನಮ್ಮ ಮನೆ ಬೆಳೆಗಲಿರುವ
ನನ್ನ ಮಡದಿಗೆ ಸರಿಹೊಂದುವ
ಚೆಂದದ ಉಡುಗೊರೆಯ ತರಲು
ನಾ ಹೊರಟಿರುವೆ ನಾ ಹೊರಟಿರುವೆ

ಚಿನ್ನ ತರುವೆನೆನಲು ಬೇಡ ಚಿನ್ನ ಅಂದಿಹಳು

ಸೀರೆ ತರುವೆನೆನಲು ನೀರೆ ಬಲು ನಾಚಿಹಳು
ಮಾಂಗಲ್ಯ ಸೂತ್ರ ತರಲು ಆಕೆ ಕಾದಿಹಳು
ಬಾರೆ ಮಂಟಪಕೆಯನಲು ಹೌ-ಹಾರಿಹೋಗಿಹಳು

ಆಮಂತ್ರಣವ ಹೊತ್ತು ನೆಂಟರಿಷ್ಟರ ಮನೆಯ ಕಂಡು
ಬನ್ನಿ ಮದುವೆಗೆಂದು ಹೊಟ್ಟೆ ತುಂಬುವಷ್ಟು ಉಂಡು
ಹಾರೈಸುವಿರಿಯೆಂದು ಕರೆಯ ಹೊರಟಿರುವೆನಿಂದು
ಬಾವಿಸಿರುವೆ ನೀವು ಅಂದು ಮರೆಯದೆ ಬರುವಿರೆಂದು !!

Wednesday, September 12, 2012

ಮದುವೆ

ಹೇಳುವೆನು ನಿಮಗೊಂದು ಗುಟ್ಟು,
ಆಕೆ ಬರುವಳು ಹೊಸ ಸೀರೆಯುಟ್ಟು,
ಹಣೆಯಲ್ಲಿ ಕೆಂಪು ತಿಲಕವ ನಿಟ್ಟು,
ಮುಡಿಯಲ್ಲಿ ಮಲ್ಲಿಗೆ ಜಡೆಯ ಬಿಟ್ಟು !!

ಕುಲದೇವ ಗುರುನರಸಿಂಹನ ಸ್ಮರಣ,
ಮನದಲ್ಲಿ ಸಂಭ್ರಮದ ಆ ಕ್ಷಣ,
ಬಂಧು ಬಾಂಧವರ ಆಗಮನ,
ಮನೆಯಲ್ಲಿ ಹಬ್ಬದ ವಾತಾವರಣ !!

ಬಾಗಿಲಿಗುಂಟು ತಳಿರು ತೋರಣ,
ಊಟಕ್ಕುಂಟು ಒಬ್ಬಟ್ಟಿನ ಹೂರಣ,
ಮಂಟಪದ ಮುಂದೆ ವರನ ದಿಬ್ಬಣ,
ನಮ್ಮ ಮದುವೆಯೇ ಇದಕ್ಕೆಲ್ಲ ಕಾರಣ !!

ನಮಸ್ಕರಿಸುವೆವು ಗುರುವಿನ ಚರಣ,
ಮೊಳಗಲಿದೆ ವೇದಘೋಷದ ಪಠನ,
ಕೂಡಲಿದೆ ನಮ್ಮಯ ಭಾಗ್ಯದ ಕಂಕಣ,
ಮಿತ್ರ ಬಳಗಕ್ಕೆಲ್ಲ ಇದುವೇ ಆಮಂತ್ರಣ !!

ಅಮ್ಮ

ಕದವ ತೆರೆಯ ಹೋದಾಗ
ನೂಕಿ ಬಂದ ಧ್ವನಿಯದು
"ಅಮ್ಮ" ತಾಯಿ ಭಿಕ್ಷೆ ನೀಡು

ಮನೆಯ ಬಿಟ್ಟು ಹೊರಟಾಗ
ಉಕ್ಕಿ ಬಂದ ಅಳುವದು
"ಅಮ್ಮ" ನಾ ನಿನ್ನ ಬಿಟ್ಟಿರಲಾರೆ

ಅಳುವನೊಮ್ಮೆ ಮರೆತಾಗ
ನಗುತ ಮುತ್ತು ಕೊಡುವ
"ಅಮ್ಮ" ನಿನಗೆ ಸಾಟಿ ಯಾರೆ

ತಪ್ಪುಗಳನು ಮಾಡಿದಾಗ
ಮುದ್ದು ಮಾಡಿ ತಿದ್ದುವೆ
"ಅಮ್ಮ" ನಿನ್ನಲೇನು ಅಡಗಿದೆ

ತ್ಯಾಗ ಪ್ರೀತಿ ಮಮತೆ ಕರುಣೆ
ನೀನು ಕಲಿಸಿದ ದೀಕ್ಷೆಯು
"ಅಮ್ಮ" ನನ್ನೀ ಬಾಳಿನ ಆಸ್ತಿಯು !!
See More

Tuesday, August 28, 2012

ಸದಾ

ಕನಸುಗಳ ಕಲ್ಪನೆಯ ಸುಳಿಯಲ್ಲಿ
ಆಸೆಗಳು ಆಗಸದ ತುದಿಯಲ್ಲಿ 
ಮನಸುಗಳು ನಮ್ಮಿಬ್ಬರ ಬಳಿಯಲ್ಲಿ 
ಸದಾ ಸುತ್ತಲಿ ಉಪಗ್ರಹದಂತೆ !
ಸಂತೋಷವು ಹೀಗೆ ಉಕ್ಕುತಲಿರಲಿ 
ಅಳುವು ಸುಳಿಯದಂತಾಗಲಿ 
ದಿನಗಳು ಉರುಳುತ್ತಲೇ ಬರಲಿ
ಬದುಕುವ ಆಕಾಶ ಭೂಮಿಯಂತೆ !!

 

Thursday, August 16, 2012

ನನ್ನ ನೋವಿನ ವಿಷಯ

ಏಕೆ ಕವಿದಿತ್ತೋ ಬಾನಲ್ಲಿ ಕಪ್ಪು ಕಾರ್ಮೋಡ,
ಮನಸಿನ ತುಂಬಾ ತು೦ಬಿತ್ತು ನೋವಿನ ದುಗುಡ,
ಅಪರಚಿತವಾಗಿತ್ತು ನನ್ನದೇ ಈ ಪುಟ್ಟ ಹೃದಯ,
ಹೇಳುವೆನು ನಾ ನಿಮಗೆ ನನ್ನ ನೋವಿನ ವಿಷಯ !!

ಒಂದು ಸಂಜೆ ನೋಡಿದ್ದೇ ಪ್ರೀತಿಯ ಶೃಂಗಾರ,
ನಮ್ಮಯ ಪ್ರೀತಿಗೆ ಈ ಗೆಳತಿಯೇ ಆಧಾರ,
ನಗುನಗುತ್ತ ಕುತಿದ್ದಳು ನನ್ನೊ೦ದಿಗ೦ದು, 
ಮಾತಿನಮಧ್ಯೆ ಹೇಳಿದ್ದಳು ಪ್ರಿಯ ನಾ ನಿನ್ನವಳೆ೦ದು !!

ಊರ ತು೦ಬಾ ಹಬ್ಬಿತ್ತು ನಮ್ಮದೆ ಗುಸುಗುಸು,
ಮನೆಗೆ ಬ೦ದಾಗ ತಿಳಿದಿತ್ತು ಆಕೆಯ ವಯಸ್ಸು,
ಹೆಚ್ಚು ಕಮ್ಮಿ ಇಟ್ಟಿದ್ದಳು ನನ್ನಲ್ಲೆ ಪೂರ್ಣಮನಸ್ಸು,
ಭಯದಿ೦ದ ಕೇಳಿದ್ದಳು ಪ್ರಿಯ ನೀನು ನನ್ನನ್ನೇ ವರಿಸು !!

ಕೇಳ ಹೂರಟಿದ್ದೆವು ನಾವೆಲ್ಲಾ ಅವಳ ಮನೆಗಿಂದು,
ಓಡಿ ಬರಬೇಕೆ ಕಪ್ಪು ಬೆಕ್ಕು ನಮ್ಮೆದುರಿಗಿಂದು,
ನಾಳೆ ಹೋಗಲು ಸೂಚಿಸಿದರು ಅಪಶಕುನವೆಂದು,
ಹೇಗೆ ಕಳೆಯಲಿ ನಾನೊಬ್ಬನೇ ಈ ಸಂಜೆ ಒಂದು!!

Sunday, August 12, 2012

ಬಡತನ



ಅದು ಸುಮ್ಮನೆ ಹೇಳಿದರೆ ಮನುಜನಿಗೆ ಅರ್ಥವಾಗದು,
ನೊಂದು ಬಂದವನಿಗೆ ಅದನ್ನು ತಡೆದು ಕೊಳ್ಳಲಾಗದು,
ಹಸಿವು ಅರ್ಧ ಬೆಂದ ಜೀವನದಲ್ಲಿ ಉಸಿರಾಗುವುದು,
ಆಸೆಯೆಂಬ ಕನಸಿನ ಗೂಪುರವ ತನ್ನಲ್ಲೇ ಕಟ್ಟುವುದು !!

ಅದು ಬಂದಾಗ ರೋಗ ರುಜಿನವು ಕೂಡ ಅಂಜುವುದು,
ಸಾವು ನೋವುಗಳ ಜೊತೆ ಅನುದಿನ ಹೋರಾಡುವುದು,
ನೆಮ್ಮದಿ ಅದರ ಇರುವಿಕೆಗೆ ಕೊನೆಗೂ ತಿಳಿಯದಾಗದು,
ಮನಸೆಂಬ ನಾಕವನ್ನೇ ಎಂದೋ ದಾಟಿ ಬಂದಿರುವುದು !!   

ಧೈರ್ಯ ಸಾಹಸಗಳಿಗೆ ಅದುವೇ ಪ್ರಥಮ ಪಾಠಶಾಲೆ ,
ಪ್ರಯತ್ನಮಾಡಿ ಗೆದ್ದರೆ ಕಳೆಯುವುದು ಕಷ್ಟಗಳ ಸಂಕೋಲೆ,
ಸೋತವರು ಸೇರುವರು ಜನಸಾಮಾನ್ಯರ ಗುಂಪಿನಲ್ಲೇ,
ಕರೆಯೋ ಇದನ್ನ "ಬಡತನ" ಸಿರಿವಂತನಿಗೆ ಸಿಗದ ಓಲೆ !!

ಚಿನ್ನ

ನಿನ್ನ ಕರೆದೆ ಕನಕಾಂಬರಿ
ನೀ ಮುಡಿದ ಹೂವ ಕಂಡು
ನಿನ್ನ ಕರೆದೆ ಶ್ವೇತಾಂಬರಿ
ನಿನುಟ್ಟ ಸೀರೆಯ ಕಂಡು,

ನಿನ್ನ ಕರೆದೆ ನಯನಮನೋಹರಿ
ನಿನ್ನ ಆ ಕಣ್ಣುಗಳ ಕಂಡು
ನಿನ್ನ ಕರೆದೆ ಚಂದ್ರಚಕೋರಿ
ಚಂದ್ರನು ನಿನ್ನಲಿ ಸೋತಿದ್ದು ಕಂಡು,

ನಿನ್ನ ಕರೆದೆ ಸ್ವಪ್ನ ಸುಂದರಿ
ನೀ ತಂದ ಕನಸ ನೆನೆದು
ನಿನ್ನ ಕರೆದೆ ಮನೋಲ್ಲಾಸಿನಿ
ನೀ ತಂದ ಸಂತೋಷವ ನೆನೆದು,

ನಿನ್ನ ಕರೆದೆ ಭುವನ ಸುಂದರಿ 
ನಿನ್ನಲ್ಲಿಯ ಸೌಂದರ್ಯವ ನೆನೆದು
ಇನ್ನೇನು ನಾ ಕರೆಯಲಿ ನಿನ್ನ 
ಆಗಿರುವೆ ನೀನೆ ನನ್ನ ಬಾಳಿನ ಚಿನ್ನ !! 

ತಾಯೆ ನಿನ್ನ ಮಡಿಲಲಿ



ಏನು ತಾಯೆ ನಿನ್ನ ಮಾಯೆ ಕಣ್ಣ ತೆರೆವ ಕ್ಷಣದಲಿ ತಾಯೆ ನಿನ್ನ ಮಡಿಲಲಿ

ಮನದ ಬಯಕೆ ತೀರಲಿ, ವರುಷ ಮತ್ತೆ ಮರಳಲಿ,
ಹರುಷ ತುಂಬಿ ಹಾಡಲಿ,ತಾಯೆ ನಿನ್ನ ಮಡಿಲಲಿ !!

ಕಮರಿದ ಆಸೆ ಮನಸಲಿ, ಕನಸಿನ ಕೂಸು ಕರುಳಲಿ,
ಚಿಗುರಿದ ಹೂವು ಅರಳಲಿ, ತಾಯೆ ನಿನ್ನ ಮಡಿಲಲಿ !!

ದ್ವೇಷ ಭಾವವು ತೊರೆಯಲಿ, ಸ್ನೇಹ ಹಸ್ತವು ಚಾಚಲಿ,
ಶಾಂತಿ ನೆಮ್ಮದಿ ಬೆಳೆಯಲಿ, ತಾಯೆ ನಿನ್ನ ಮಡಿಲಲಿ !!

ಅಹಂ ಕಾರವು ಅಳಿಯಲಿ, ದುಷ್ಟ ಶಕ್ತಿಯು ನಶಿಸಲಿ,
ಮಮತೆಯೊಂದೆ ಬಾನುಲಿ, ತಾಯೆ ನಿನ್ನ ಮಡಿಲಲಿ !!

ಸ್ವಾತಂತ್ರ್ಯವು ಮೊಳಗಲಿ, ವಿಜಯ ಪತಾಕೆ ಹಾರಲಿ,
ಗೆಲುವು ನಮ್ಮ ಬಳಿಯಲಿ, ತಾಯೆ ನಿನ್ನ ಮಡಿಲಲಿ!!

Friday, August 10, 2012

ಸಿಹಿ ನೆನಪು

ಗೆಳತಿ ನಿನಗೆ ನೆನಪಿದೆಯಾ
ಅಂದು ನಾನಾಡಿದ ತುಂಟ ಮಾತು
ತಟ್ಟನೆ ನಿನ್ನಲಿ ಉಂಟಾದ ನಾಚಿಕೆ
ಸಂಕೋಚದಲಿ ನೀ ಕೊಟ್ಟ ಒಪ್ಪಿಗೆ

ನಿನ್ನ ಕೋಮಲ ಹಸ್ತದಲ್ಲಿ
ನನ್ನ ಮೊದಲ ಮೃದುವಾದ ಸ್ಪರ್ಶ
ಕಣ್ಣು ರೆಪ್ಪೆ ಮುಚ್ಚಿದ ಆ ಸವಿನಿಮಿಷ
ಮೈಮರೆತು ಕಳೆದ ಅದೆಷ್ಟೋ ದಿವಸ

ಆತ್ಮೀಯತೆ ಪ್ರೀತಿಯಾದ ಅಮೃತ ಘಳಿಗೆ 
ಮಂದಹಾಸವನ್ನು ಬೀರುತ್ತ
ಮಧುರ ಹೀರುವ ಜೇನಂತೆ ನಾವು
ಒಬ್ಬರನ್ನೊಬ್ಬರು ಅಗಲದೆ ಕುಳಿತಿದ್ದೆವಲ್ಲಾ !!!

Thursday, August 9, 2012

ಓ ನನ್ನ ಮನಸೇ

ನನ್ನ ಅಂತರಂಗದ ಕೂಗು ಎಲ್ಲಿ ಕೇಳಿಸುವುದೋ,
ಭಾವ ತರಂಗಗಳಲ್ಲಿ ಯಾಕೆ ನುಸುಳುವುದೋ,
ಜೀವನಕ್ಕೆ ಹೊಸ ಅರ್ಥವ ಕಲ್ಪಿಸಲಿರುವುದೋ,
ಸ್ವಾರ್ಥ ಚಿಂತನೆಗೆ ತಿಲಾಂಜಲಿಯಾಗುವುದೋ ?

ವಿಚಾರ ವಿಮರ್ಶೆಗೆ ಸಿಲುಕಿಕೊಂಡಿರುವುದೇ,
ಆಚಾರ ಪದ್ದತಿಯನ್ನು ಮೀರಿ ನಿಂತಿರುವುದೇ,
ನೊಂದ ಜೀವಕೆ ಸಂತ್ವಾನವ ಸುರಿಸುತಲಿರುವುದೇ,
ಹೇಳು ನನ್ನ ಒಳಮನಸ್ಸೇ ಏನು ಸದಾ ಚಿಂತಿಸುತ್ತಲಿರುವೆ ?

ತುಂತುರು ಮಳೆಯಂತೆ ಹೊಯ್ಯುತಿರುವುದೇ,
ಅತ್ತರು ಕಾಣಿಸದಂತೆ ಮರೆಮಾಚುತಲಿರುವುದೇ,
ಸಪ್ತ ಸ್ವರಗಳಲ್ಲಿ ನಾದ ಹೊಮ್ಮಿ ವಿಲೀನವಾಗುವುದೇ,  
ಹೇಗೆ ನಿನ್ನ ನಾ ಅರಿಯಲಿ ಹೇಳು, "ಓ ನನ್ನ ಮನಸೇ" ?

ನಲ್ಲೆ

ಒಮ್ಮೆ ನಲ್ಲೆಯ ಬಳಿಯಲ್ಲಿ ಕೇಳಿದೆ
ಪ್ರಿಯೆ ನಿನಗೆ ಅದೆಷ್ಟು ಪ್ರೀತಿ ನನ್ನಲಿ
ಆಕೆ ಮೌನದಿ ಉತ್ತರಿಸಿದಳು
ದೇಹದಲ್ಲಿರುವ ರಕ್ತದ ಹನಿಗಳಷ್ಟು

ತಕ್ಷಣ ನನಗೂ ಪ್ರಶ್ನೆ ಕೇಳಿದಳು
ಪ್ರಿಯ ನೀನೆಂದು ವರಿಸುವೆ ನನ್ನ
ಆಗ ಯೋಚಿಸಿ ಉತ್ತರಿಸಿದೆ
ನಾವು ಮತ್ತೆ ಬೇಟಿಯಾಗುವ ಸುದಿನ

Thursday, August 2, 2012

ನಿದ್ದೆ

ನನಗೆ ನಿದ್ದೆ ಬಾರದಿದ್ದಾಗ
ಪಕ್ಕದವ ಗೊರಕೆ ಹೊಡೆಯುತಿದ್ದನಾಗ
ಕರ್ಕಶ ದ್ವನಿಯು ಗುಂಗುಡುತಿತ್ತು ಕಿವಿಯಲ್ಲಿ
ತಣ್ಣನೆ ತಂಪು ಬಂದಿತ್ತು ವಾತವರಣದಲ್ಲಿ !!

ನನಗೆ ಕನಸು ಬಿದ್ದಿತ್ತಾಗ
ಪಕ್ಕದವ ಸದ್ದಿಲ್ಲದೇ ತಿರುಗಿ ಮಲಗಿದ್ದಾಗ
ಕೊನೆಗೂ ನಿದ್ದೆ ಬಂದಿತು ನಿಮಿಷಾರ್ದದಲ್ಲಿ
ತಕ್ಷಣ ಎಚ್ಚರ ನೋಡಿದರೆ ಪಂಕ ನಿಂತಿತಲ್ಲಿ !!

ನನಗೆ ಸಹನೆ ಕಳೆದಿತ್ತಾಗ
ಕಿವಿಯ ಪಕ್ಕದಲ್ಲಿ ಸೊಳ್ಳೆ ಕೂಗಿದಾಗ
ಸಮಯ ನೋಡಹೋದೆ, ರಾತ್ರಿ ಕಳೆದಿತ್ತಲ್ಲಿ
ಸಣ್ಣಗೆ ಉಷಾಕಿರಣ ಮೂಡಿತ್ತು ಪೂರ್ವ ದಿಕ್ಕಿನಲ್ಲಿ !!

Wednesday, August 1, 2012

ನಗು



ಸುಂದರಿಯ ಸೌಂದರ್ಯವ ನೀನು ವ್ರದ್ದಿಸುವೆ,
ಆಪ್ತರಲ್ಲಿ ಆತ್ಮೀಯತೆಯ ನೀರೆಳೆದು ಬೆಳೆಸುವೆ,
ಮಡದಿಯಲ್ಲಿ ಪ್ರೀತಿಯ ನೀನು ಪ್ರಚೋದಿಸುವೆ,
ಶತ್ರುಗಳ ಹೃದಯದಲ್ಲೂ ನೀ ಮನೆ ಮಾಡಿರುವೆ !!

ಪ್ರತಿ ಆಗಮನದಲ್ಲೂ ಅಡಗಿದೆ ವಿವಿದ ವಿಶೇಷತೆ,
ಅಪರಿಚತರನ್ನು ಪರಿಚಯಿಸುವ ಶಕ್ತಿ ನಿನ್ನಲ್ಲಿದೆ,
ನೀ ಬಂದಾಗ ಅದೇನೋ ತಿಳಿಯಲಾಗದ ಆಕರ್ಷಣೆ,
ಅನಂತ ಆನಂದದಲ್ಲಿ ತೇಲಾಡಿದ ಬದಲಾವಣೆ !!

ಹಲವು ರೋಗಗಳಿಗೆ ಸಂಜೀವಿನಿ ನೀನಲ್ಲವೇ,
ಬಡವರ ಮನೆಯಲ್ಲೂ ಸಿಗುವ ಮನ್ವಂತರವೆ,
ಭಾಷೆ ಬಲ್ಲದವರ ಮಾತಿನ ಸೇತುವೆ ಆಗಿರುವೆ,
ಮನಸ್ಸು ತುಂಬಿದಾಗ ಕರೆಯದೆ ನೀ ಓಡಿಬರುವೆ!!

ನಗುವೇ ಅದಾವ ಗೂಡಿಂದ ನೀ ಬಂದಿರುವೆ?
ಅಂದದ ಚೆಲುವೆಯ ಮೊಗದಿ ಮಿನುಗುತಿರುವೆ,
ಮುದ್ದಿನ ಕಂದಮ್ಮನ ಮಾತಾಗಿ ಹೊಮ್ಮಿರುವೆ,
ನಿನ್ನ ಅರ್ಥೈಸಲಾಗದೆ ನಾನು ಸೋತಿರುವೆ !!

Monday, July 30, 2012

ಕನಕಾಂಗಿ



ನುಲಿಯುವ ಹುಡಿಗಿಯೇ ನನ್ನ ಕನಕಾಂಗಿ,
ಮನದಲ್ಲಿ ಮಿನುಗುವ ಆಸೆಯ ಪಂಚರಂಗಿ,
ಪ್ರತಿಕ್ಷಣ ನೆನಪಲ್ಲೇ ಕಳೆದೆ ನಾ ಏಕಾಂಗಿ,
ಎಂದಾಗುವೆಯೋ ನೀ ನನ್ನ ಅರ್ಧಾಂಗಿ !!

ಮನದ ಮೂಲೆಯಲ್ಲಿ ಎಂಥದೋ ತಳಮಳ,
ಕಡಲ ಅಲೆಯನು ಮೀರಿ ನಿಲ್ಲುಸುವ ಸಪ್ಪಳ,
ಸರಳ ಸಜ್ಜನ ಸ್ವಭಾವದಲಿ ಮೂಡಿದ ಕಳವಳ,
ಎಂದು ಸಿಗುವುದೋ ಈ ನನ್ನ ಪ್ರೀತಿಯ ಹವಳ !!

ತಡವರಿಸಿದೆ ತನುವು ನಿನ್ನ ಪ್ರೀತಿಯ ಕೇಳಲು,
ಕನವರಿಸಿದೆ ಮನವು ನನ್ನ ಬಯಕೆಯ ಹೇಳಲು,
ಪ್ರತಿಬಾರಿಯೂ ಬಿಡದೆ ಪ್ರಯತ್ನವ ನಾ ಪಡಲು,
ಒಲಿಯುವಳು ಈ ನಾರಿ, ಕಂಕಣ ಕೂಡಿಬರಲು!!

Saturday, July 28, 2012

ಪ್ರಯಾಣ

ರಘು ಎಂದೂ ಇಷ್ಟೊಂದು ವಿಚಲಿತನಾಗಿರಲಿಲ್ಲ, ಅವನ ಕಾರ್ ಡ್ರೈವಿಂಗ್ ಅದೊಂದು ಕೌಶಲ್ಯ, ಅಲ್ಲಿ ಅವಿರತ ಶ್ರದ್ದೆ ಇತ್ತು, ಪ್ರಯಾಣಿಕರ ಜೀವದ ಮೌಲ್ಯ ಮುಖ್ಯವಾಗಿತ್ತು. ರಘು ಒಮ್ಮೆಯೂ ಶಿಸ್ತನ್ನ ಉಲ್ಲಂಗಿಸಿದವನಲ್ಲ. ಕಾನೂನು ಇರುವುದು ಪಾಲನೆಗಾಗಿ ಅನ್ನುವಷ್ಟು ತತ್ವ ಸಿದ್ದಾಂತಕ್ಕೆ ಜೋತು ಬಿದ್ದಿದ್ದ. ಸದಾ ತಾನು ಇನ್ನೊಬ್ಬರಿಗೆ ಮಾರ್ಗದರ್ಶನವಾಗಬೇಕು ಅನ್ನುವಷ್ಟು ಮುಂದೆ ಸಾಗಿದ್ದ. ಅವನ ಜೀವನ ಶೈಲಿ ಈ ಘಟ್ಟಕ್ಕೆ ಬರಲು ತಂದೆಯೇ ಸ್ಪೂರ್ತಿ. ದೇಶದ ರಕ್ಷಣೆಗೆ ತನ್ನ ಜೀವ ಕೊಟ್ಟ ಮಹಾನ್ ದೇಶ ಸೇವಕ. ಅಂದು ಯುದ್ದಕ್ಕೆ ಕರೆ ಬಂದಿತ್ತು, ಮೇಜರ್ ರಾಜೇಶ್ ತನ್ನ ಸಂಸಾರದ ಜೊತೆಗೆ ಕೊಡಗು ನೋಡಲು ಸಿದ್ದರಾಗಿದ್ದರು. ರಘು ಇನ್ನು ಪ್ರಾಥಮಿಕ ಶಾಲೆಗೇ ಹೋಗುವ ಹುಡುಗ ಅವನಿಗೆ ತನ್ನ ರಜೆಯ ಸವಿಯುವ ಕಾತರ. ತಂದೆಗೆ ನಾವು ಹೋಗುವ ಸ್ತಳಗಳ ಕುರಿತು ಅದಾಗಾಲೆ ಹಲವುಬಾರಿ ಕೇಳಿ ತಿಳಿದಿದ್ದ.. ಅಚಾನಕವಾಗಿ ಬಂದ ತಂತಿ ನೋಡಿ ರಾಜೇಶ್ ಧಂಗಾದರು. ಅವರ ಸೇವೆ ಸೈನ್ಯಕ್ಕೆ ತುರ್ತಾಗಿ ಅವಶ್ಯಕವಾಗಿತ್ತು. ದೇಶಸೇವೆಗೆ ಮುಡಿಪಾಗಿಟ್ಟ ಜೀವ, ಧ್ಯೇಯ ಸಾದನೆಗೆ ಪ್ರಾಮುಖ್ಯತೆ ಕೊಟ್ಟಿದ್ದರು. ತಮ್ಮ ಬಹು ನಿರೀಕ್ಷಿತ ಪ್ರವಾಸ ಮೊಟಕು ಗೊಳಿಸಿ ದೇಶ ಸೇವೆಗೆ ಹೋದವರು. ರಘು ಅಳುವನ್ನು ನೋಡಿ ಮತ್ತೆ ಇನ್ನೊಮ್ಮೆ ನಿನ್ನ ಜೊತೆ ಕಂಡಿತ ಹೋಗೋಣವೆಂದು ಆಶ್ವಾಸನೆ ಕೊಟ್ಟಿದ್ದರು. ಹೆಂಡತಿಯ ಭಯವ ನೋಡಿ ಅವರಿಗೆ ಆಶ್ಚರ್ಯವಾಗಿತ್ತು. ಆಕೆಯ ಜೊತೆ ಹತ್ತು ನಿಮಿಷ ಮಾತಾಡಿ.. ಪ್ರೀತಿಯ ಸ್ಪರ್ಶದಿಂದ ಕುಶಿಗೊಳಿಸಿದ್ದರು.

ರಾಜೇಶ್ ಸಂಸಾರ ಊರಿಗೆ ಆದರ್ಶಪ್ರಾಯವಾಗಿತ್ತು. ರಾಜೇಶ್ ವರ್ಷಕ್ಕೊಮ್ಮೆ ಬಂದಾಗ ಊರಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗೆ ಊಟಕ್ಕೆ ಕರೆಯೋದನ್ನ ಮರೆಯುತ್ತಿರಲಿಲ್ಲ. ರಾಜೇಶ್ ಗೂ ಅಷ್ಟೇ ಪ್ರೀತಿ ಊರಜನರ ಮೇಲೆ. ಪ್ರತಿ ಬಾರಿ ಬಂದಾಗ ಯಲ್ಲರ ಜೊತೆ ಸಮಯ ಕಳೆಯುತ್ತಿದ್ದ. ಓಡಿ ಆಡಿದ ಊರು, ತಿದ್ದಿ ಬೆಳೆಸಿದ ಶಾಲೆ, ಸುತ್ತ ಮುತ್ತಲಿನ ಪರಿಸರ ಅವನಿಗೆ ಸದಾ ಪ್ರಿಯವಾಗಿತ್ತು. ತನ್ನ ನಿವ್ರತ್ತಿ ಬದುಕಿನ ಬಗ್ಗೆಯೂ ಸಾಕಷ್ಟು ಕನಸು ಕಂಡಿದ್ದ. ಊರನ್ನ ದಾಟಿ ವೇಗವಾಗಿ ಚಲಿಸುತ್ತಿದ್ದ ಬಸ್ ಬಂದು ತಲುಪಿದ್ದು ರೈಲ್ವೆ ಸ್ಟೇಷನ್ ಗೆ. ಅಲ್ಲಿಂದ ಬೆಂಗಳೂರಿಗೆ ಬಂದು ವಿಮಾನ ನಿಲ್ದಾಣಕ್ಕೆ ಹೋಗುವುದರಲ್ಲಿ ಅವನ ಮನ್ನಸ್ಸು ವಿಚಲಿತ ಗೊಂಡಿತ್ತು. ಮನೆಯನ್ನು ಬಿಟ್ಟು ಹೊರಟಾಗ ರಘು ಕೋಪ ಗೊಂಡಿದ್ದ ಅವನಿಗೆ ಮಾತನಾಡಲು ಸಿಟ್ಟು ಬಂದಿತ್ತು. ಅಪ್ಪ ನನಗೆ ಮೋಸ ಮಾಡಿದರು ಅಂತ ಪಕ್ಕದಮನೆಯಲ್ಲಿ ದೂರು ಕೊಟ್ಟಿದ್ದ. ಅವನ ದುರನ್ನ ಪಡೆದು ವಕೀಲರು ವಿಚಾರಣೆಗೆ ಆಗಮಿಸಿದ್ದರು. ವಿಷಯ ತಿಳಿದು ವಿಷಾದ ವ್ಯಕ್ತ ಪಡಿಸಿದ್ದರು.

ರಾಜೇಶ್ ಸೈನ್ಯದ ಕ್ಯಾಂಪ್ ತಲುಪಿದಾಗ ಅವನಿಗಾಗಿ ಸಾಕಷ್ಟು ಸಂದೇಶಗಳು ಬಂದಿತ್ತು. ಪ್ರತಿಯೊಂದು ಸಂದೆಶಕ್ಕು ಉತ್ತರ ಕೊಟ್ಟು ಅವನು ಸಾಕಾಗಿದ್ದ. ಪ್ರಯಾಣದ ಬೇಗೆ ಅವನನ್ನು ಕುಸಿದು ಕೂಡಿಸಿತ್ತು. ರಾಜೇಶ್ ಗೆ ಸಹಾಯಕನಾಗಿ ಮಂಜುನಾಥ್ ಹೆಸರುವಾಸಿಯಾಗಿದ್ದ. ರಾಜೇಶ್ ನ ಪ್ರತಿಯೊಂದು ಕೆಲೆಸವನ್ನು ತಾ ಕಲಿತಿದ್ದ. ಅದಾಗಲೇ ಶತ್ರು ಸೈನ್ಯ ತುಂಬಾ ಹತ್ತಿರ ಬಂದಿತ್ತು. ಮಂಜುನಾಥ್ ತಾನು ಮಾಡುತಿದ್ದ ಪ್ರತಿಯೊಂದು ಕೆಲೆಸವನ್ನು ರಾಜೇಶ್ ಗೆ ವರದಿ ಒಪ್ಪಿಸಿ, ಮುಂದಿನ ಆದೇಶಕ್ಕೆ ಕಾಯುತ್ತಿರುವ ಬಗ್ಗೆ ಹೇಳುತ್ತಾನೆ. ರಾಜೇಶ್ ಗೆ ಒಮ್ಮೆ ಜೀವ ಕೈಗೆ ಬಂದ ಅನುಭವ. ಶತ್ರು ಸೈನ್ಯ ಅದಾಗಲೇ ನಮ್ಮ ಬಳಿ ಬಂದಾಗಿತ್ತು. ಮೇಲಿನಿಂದ ಇನ್ನು ಆದೇಶ ಬರಲಿಲ್ಲ ಅನ್ನೋದೇ ನೋವಿನ ಸಂಗತಿ. ಮಂಜುನಾಥ್ ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿರಬೇಕು. ಕೂಡಲೇ ರಾಜೇಶ್ ಗೆ ಹೆಡ್ ಆಫೀಸಿಗೆ ಹೋಗಿ ವಿಶ್ರಾಂತಿ ಪಡೆಯಲು ವಿನಂತಿಸಿದ. ರಾಜೇಶ್ ತನ್ನ ಅಸಹಾಯಕತೆ ಕೆಲೆಸದಲ್ಲಿ ಎಂದೂ ತೋರಿಸಿದವನಲ್ಲ. ತಾನು ಚುರುಕಾಗಿ ಏನು ಆಗಿಲ್ಲ ಅನ್ನುವಂತೆ ನಟಿಸಿದ. ಮೇಲಿನ ಅದಿಕಾರಿಗಳಿಗೆ ವಿಷಯ ತಿಳಿಸಿ ಆದೇಶವನ್ನು ಪಡೆದು, ಸದಾ ಸೈನ್ಯಕ್ಕೆ ಆದೇಶ ಕೊಟ್ಟ. ಹಗಲು ರಾತ್ರಿಯನ್ನದೆ ನಿದ್ದೆ ಕೆಟ್ಟು ಕೆಲೆಸ ಮಾಡಬೇಕಾಯಿತು. ಯುದ್ದ ಅಂತಿಮವಾಗಿ ವಿಜಯಲಕ್ಷ್ಮಿ ಬಂದಿದ್ದಳು. ರಾಜೇಶ್ ಸೈನ್ಯದ ತುರ್ತು ಆಸ್ಪತ್ರೆಯಲ್ಲಿ ಬಂದು ಸೇರುತ್ತಾನೆ. ಅವನಿಗೆ ವಿಪರೀತ ಜ್ವರ ಬಾದಿಸಿತ್ತು. ಮರುದಿನ ಪ್ರಜ್ಞೆಯನ್ನು ಕಳೆದುಕೊಂಡು ಮಲಗಿದ್ದ ವಿಷಯ ತಂತಿ ಮುಖೇನ ರಘು ಕೈ ಸೇರುತ್ತೆ. ಅಪ್ಪನಿಗೆ ಹುಷಾರಿಲ್ಲ ಅಂತೆ ಅನ್ನೋದರಲ್ಲೇ ಅಲ್ಲಿ ರಾಜೇಶ್ ನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಘು ತಾಯಿ ಜೊತೆ ಹೊರಡಲು ಸಿದ್ದರಾದಾಗ, ಪಕ್ಕದಮನೆ ವಕೀಲರು ಬಂದು ವಿಷಯ ಹೇಳುತ್ತಾರೆ. ರಘು ಮಹಡಿಯೇ ತನ್ನ ಮೇಲೆ ಬಿದ್ದಂತೆ ಅಳುತ್ತಾನೆ. ತಾಯಿ ಅರೆ ಪ್ರಜ್ನಾವಸ್ಥೆಯಲ್ಲೇ ೨ ತಿಂಗಳು ಹಾಸಿಗೆ ಹಿಡಿಯುತ್ತಾಳೆ. ರಘು ೨ ತಿಂಗಳೊಳಗೆ ತಂದೆ ತಾಯಿಯನ್ನು ಕಳೆದು ಕೊಂಡಿದ್ದ. ಊರ ಜನರ ಆರೈಕೆಯಿಂದನೆ ಅವನು ದೊಡ್ಡವನಾಗಿದ್ದ. ತಂದೆಯಂತೆ ಕೆಲೆಸದಲ್ಲಿ ಶ್ರದ್ದೆ ಇರಬೇಕು ಅನ್ನೋದನ್ನ ಕಲಿತು ಬಿಟ್ಟಿದ್ದ.

ವಿದ್ಯಾಭ್ಯಾಸ ಮೊಟಕು ಗೊಳಿಸಿ ಸ್ವಯಂ ಉದ್ಯೋಗ ಪ್ರಾರಂಬಿಸುವ ಕನಸು ಕಂಡಿದ್ದ. ಅದರಂತೆ ಒಂದು ಕಾರ್ ಕೊಂಡು ಹೆಸರುವಾಸಿಯಾಗಿದ್ದ. ರಘು ಯಾವತ್ತು ಪಡದ ನೋವು ಇಂದು ಅವನ ಕಾಡಿತ್ತು, ಕಾರಣ ಅವರ ಪ್ರಯಾಣ. ಹಿಂದಿನ ಸೀಟ್ ನಲ್ಲಿ ಚಿಕ್ಕ ಸಂಸಾರ ಕೊಡಗು ನೋಡ ಹೊರಟಿತ್ತು. ತಾನು ಚಿಕ್ಕವನಾಗಿದ್ದಾಗ ನಡೆದ ಪ್ರತಿಯೊಂದು ಘಟನೆ ಅವನ ಮನ ಪಟಲವನ್ನು ದಾಟಿ ಸಾಗಿತ್ತು. ಹಿಂದಿನ ಸೀಟ್ ನಲ್ಲಿ ಕೂತ ಮಹೇಶ್ ಕಾರಿನ ವೇಗವನ್ನು ಗಮನಿಸಿ ಸಂಶಯ ಪಡುತ್ತಾನೆ. ಇಲ್ಲಿಯ ತನಕ ತಾನು ಹೆಮ್ಮೆ ಪಟ್ಟ ಚಾಲಕ ಇವನೇನಾ ಅನ್ನುವಷ್ಟು ಗೊಂದಲನಾಗಿದ್ದ. ಕೂಡಲೇ ರಘುವಿಗೆ ಕಾರ್ ಪಕ್ಕಕ್ಕೆ ನಿಲ್ಲಿಸಲು ಸೂಚನೆ ಕೊಟ್ಟ. ರಘು ತಾನು ಏನು ಮಾಡುತ್ತಿರುವೆ ಅನ್ನೋದನ್ನೇ ಮರೆತು ಹೋಗಿದ್ದ. ಅದೃಷ್ಟವಶಾತ್ ಅವರ ಕಾರ್ ಸುರಕ್ಷಿತವಾಗಿ ನಿಂತಿತ್ತು. ಮಹೇಶ್ ರಘುವನ್ನ ಹೊರಗಡೆ ಕರೆದು ವಿಚಾರಿಸುತ್ತಾನೆ. ರಘು ತನಗೇನು ಆಗಲಿಲ್ಲ ಎನ್ನುವಂತೆ ನಟಿಸುತ್ತಾನೆ. ಎಷ್ಟಾದರೂ ರಾಜೇಶ್ ನ ಮಗ ತಾನೇ. ಕೊನೆಗೆ ಮಹೇಶ್ ನ ಆಪ್ತತೆಗೆ ಮನಸೋತು ತನ್ನೆಲ್ಲ ಕಥೆಯನ್ನು ಹೇಳುತ್ತಾನೆ. ಮಹೇಶ್ ಮಾನಸಿಕ ತಜ್ಞ. ಪೂರ್ಣ ಕಥೆಯನ್ನು ಕೇಳಿ ರಘುವಿನ ಮೇಲೆ ಅಂತ ಕರುಣೆ ಹೆಚ್ಚಾಗುತ್ತೆ. ರಘುವನ್ನು ಪಕ್ಕಕ್ಕೆ ಕೂರಿಸಿ ತಾನು ಡ್ರೈವ್ ಮಾಡುತ್ತಾನೆ. ಮಹೇಶ್ ರಘು ತನ್ನ ತಮ್ಮನೇನೋ ಅನ್ನುವಷ್ಟು ಸಲಿಗೆ ಕೊಟ್ಟು ಕೊಡಗಿನ ಸವಿಯನ್ನ ಸವಿಯುತ್ತಾರೆ. ರಘು ಕೇವಲ ಡ್ರೈವರ್ ಆಗಿರಲಿಲ್ಲ ಮಹೇಶ್ ನ ಮೆಚ್ಚಿನ ಗೆಳೆಯನಾಗುತ್ತಾನೆ.

ರಘು ಒಂದು ಕಾಲ್ಪನಿಕ ವ್ಯಕ್ತ್ತಿ, ರಘುವಿನಂತೆ ಸಾವಿರಾರು ನೊಂದ ಜೀವ ನಮ್ಮ ಕಣ್ಣು ಮುಂದಿದ್ದಾರೆ. ಆದರೆ ಮಹೇಶ್ ನಂತಹ ಕೆಲವೇ ಮಂದಿ ಕಾಣಸಿಗುತ್ತಾರೆ. ಮಹೇಶ್ ತಾನು ಅಷ್ಟೊಂದು ದೊಡ್ಡ ಪಧವಿಯಲ್ಲಿದ್ದರು ರಘುವನ್ನು ಕೆಲೆಸದ ಆಳಿನಂತೆ ನೋಡಲಿಲ್ಲ. ಅವನಲ್ಲಿನ ಅಂತ ಕರಣ ಜಾಗ್ರತವಾಗಿತ್ತು. ಪ್ರತಿಯೊಬ್ಬರಿಗೂ ಸ್ಪಂದಿಸುವ ಮನೋಬಾವ ತುಂಬಿತ್ತು. ಪ್ರಿಯರೆ ನಮ್ಮ ಸುತ್ತ ಮುತ್ತ ಅದೆಷ್ಟೋ ಜನರಿದ್ದಾರೆ. ಬರಿ ಪ್ರಿಯವಾದ ಒಂದೆರೆಡು ಮಾತು ನಮ್ಮನ್ನು ಬಡವನಾಗಿಸೋಲ್ಲ. ಸಮಯ ಸಂದರ್ಬ ಸಿಕ್ಕಾಗ ಮೂಕನಂತೆ ಕುಳಿತಿರುವ ಬದಲು ಉಭಯ ಕುಶಲೋಪರಿ ಮಾತನಾಡೋಣ. ಸದಾ ಜೀವನವೆಂಬ ಪ್ರಯಾಣವನ್ನು ಆನಂದಿಸಿ, ಬದುಕುವುದು ಎರೆಡೆ ದಿನವನ್ನಾದರೂ ಅದನ್ನ ಸವಿಯೋಣ ಬನ್ನಿ.


ಈ ಸಾಲುಗಳನ್ನು ಬರೆಯುವಾಗ ನನಗೆ ನೆನಪಾದ ಅದೆಷ್ಟೋ ಮಂದಿ ಡ್ರೈವರ್ಗಳು, ಅದರಲ್ಲೂ ಸದಾ ನೆನೆಪಾಗುವೋರು ಡ್ರೈವರ್ "ಆನಂದ್" ಮತ್ತು "ದೀಪು".

Friday, July 27, 2012

ಹೆಂಡತಿ ಜೀವ ಹಿಂಡುತಿ



ಹೆಜ್ಜೇನ ಹಿಂಡಿಗೆ ಕೈ ಹಾಕಿಯೇನು,
ಹೆಬ್ಬಾವ ಹೆಡೆಯ ನಾ ಮೆಟ್ಟಿಯೇನು,
ಹೆಮ್ಮರವ ಕೈಯಲ್ಲೇ ಮುರಿದೇನು,
ಆದರೆ ಹೆಂಡತಿಯ ಬಾಯನ್ನು ನಾ ಮುಚ್ಚಲಾರೆನು !!

ಮನೆಯ ಕೆಲೆಸವ ನಾ ಮಾಡಿಯೇನು,
ಮನಸು ತುಂಬಿ ನಾ ಹಾಡಿಯೇನು,
ಕಸದ ರಾಶಿಯಲ್ಲೇ ನಾ ಮಲಗಿಯೇನು,
ಆದರೆ ಹೆಂಡದ ಬಾಟಲಿಯ ನಾ ಹಿಡಿಯಲಾರೆನು !!

ಚಾಟಿಯ ಏಟನು ನಾ ತಿಂದೇನು,
ಕುಸ್ತಿಯ ಪಂದ್ಯವ ನಾ ಗೆದ್ದೇನು,
ಕತ್ತಿಯ ಯುದ್ದವ ನಾ ಬಲ್ಲೆನು,
ಆದರೆ ಪತ್ನಿಯ ಪೆಟ್ಟನ್ನು ನಾ ತಾಳಲಾರೆನು !!

ಶ್ರಾವಣದ ವರ್ಷಧಾರೆ






ಬಿರುಸಾಗಿ ಸುರಿಯುತ್ತಿತ್ತು ಶ್ರಾವಣದ ವರ್ಷಧಾರೆ,
ಜುಳಜುಳನೆ ಹರಿಯುತಿತ್ತು ನದಿಯ ಅಮೃತಧಾರೆ,
ಹಸನಾಗಿ ಹೊಳೆಯುತಿತ್ತು ಭುವಿಯ ಸಸ್ಯರಾಶಿ,
ಹೊನ್ನಿನಂತೆ ಮಿಂಚುತಿತ್ತು ಕಲ್ಲು ಮಣ್ಣಿನ ರಾಶಿ !!

ಕಪ್ಪೆ,ಮೀನುಗಳಿಗೆ ಹೊಸವರುಷದ ಕುಶಿ ಬಂದಿತ್ತು ,
ರೆಪ್ಪೆ ಮುಚ್ಚಿ ತೆಗೆಯೋದರಲ್ಲೇ ಅದು ಜಿಗಿಯುತಿತ್ತು,
ಆಗತಾನೆ ಅಲ್ಲಿ ಹನಿ ಹನಿ ಮಳೆ ಬಂದು ನಿಂತಿತ್ತು,
ಸುತ್ತ ಮುತ್ತ ಅರಳಿದ ಹೂವು ಬಾಡಿ ಮುದುಡಿತ್ತು !!

ಹೊಂಬಿಸಿಲು ಮೂಡುತಿತ್ತು ರವಿಯ ಕಣ್ಣಿನಿಂದ,
ಕಾಮನಬಿಲ್ಲು ಕಟ್ಟಿತ್ತು ಮೋಡ ಚಲಿಸಿದರಿಂದ,
ಎಲ್ಲೆಲ್ಲು ಸೊಭಗಿದೆ ವರುಣ ಆಗಮಿಸಿದರಿಂದ,
ಮನೆಯಲ್ಲೂ ಭಯವಿದೆ ಮಿಂಚು ಗುಡುಗುಗಳಿಂದ !!

Wednesday, July 25, 2012

ಅಳು



ನಾನು ಆ ಸಂಜೆ ಅತ್ತಾಗ,
ಕಣ್ಣ ಬಿಂದು ನನ್ನ ಕಾಲಿಗೆ ಬಿದ್ದಾಗ,
ಯಾರು ಬಲ್ಲರು ನನ್ನ ಒಳಮನಸ್ಸಿನ ಕೂಗು
ಮೂಕನಾಗಿ ನೋಡುತಿದ್ದ ದೇವರೇ ನೀ ಬೇಗ ಹೇಳು !!

ಅಂದು ಮಗುವಾಗಿ ಪ್ರತಿದಿನ ಅತ್ತಿದ್ದೆ,
ಅಮ್ಮ ಸಂತೈಸಲು ಎಲ್ಲವನ್ನು ಮರೆತಿದ್ದೆ,
ಅಂದು ಸೋಲಾಗಿ ಪ್ರತಿಕ್ಷಣ ಕೊರಗಿದ್ದೆ,
ಗೆಳತಿ ಪ್ರೋತ್ಸಾಹಿಸಲು ಗೆಲುವನ್ನೇ ಸೋಲಿಸಿದ್ದೆ !!

ಇಂದು ಮಡದಿಯ ತೋಳಲ್ಲಿ ಅತ್ತಿದ್ದೆ,
ಸಾಧನೆಯ ಪಥದಲ್ಲಿ ಕಂಗಾಲಾಗಿ ನಿಂತಿದ್ದೆ,
ಕೊನೆಗೆ ಮಕ್ಕಳ ಮುಂದೂ ಅತ್ತಿದ್ದೆ,
ಅವರ ಚಿಕ್ಕ ಆಸೆಯ ಇಡೆರಿಸಲಾಗದೆ ಮರುಗಿದ್ದೆ !!

ಪ್ರತಿ ಸೋಲಲ್ಲೂ
ಮುಂದೆ ಗೆಲುವೆಯಂಬ ಆಶಾವಾದಿಯಾಗಿದ್ದೆ,
ಪ್ರತಿ ಅಳುವಿನಲ್ಲೂ
ಮುಂದೆ ನಗುವೆಯಂಬ ಸದ್ಬಯಕೆ ಹೊತ್ತಿದ್ದೆ,

ಯಾಕಾದರು ಈ ಅಳುವು ಮತ್ತೆ ಮತ್ತೆ ಬರುತ್ತಿದೆ,
ನನ್ನ ಹಳೆಯ ಕಹಿ ನೆನಪುಗಳ ಕೆದಕುತ್ತಿದೆ,
ಸದಾ ಕಣ್ಣಿಂದ ನದಿಯಾಗಿ ದುಮುಕ್ಕುತ್ತಿದೆ,
ನಗುವನ್ನೇ ಅಳಿಸಿ ಮೈಮರೆಯುತ್ತಿದೆ !! 

Monday, July 23, 2012

ಪ್ರೀತಿ



ಪ್ರೀತಿ ಎಂದೂ ಬರಿದಾಗದ ಬಿಂದಿಗೆ,
ಅದೆಷ್ಟು ಮಾರ್ಗಗಳಲ್ಲಿ ಬಂದಿದೆ,
ಎಲ್ಲೂ ನಶಿಸದಂತೆ ನಿಂತಿದೆ,
ನಮ್ಮ ತನು ಮನಗಳಲ್ಲಿ ಅರಳಿದೆ !!

ಅಕ್ಷಯ ಪಾತ್ರೆಯಂತೆ ತುಂಬಿದೆ,
ತಂದೆಗೆ ಆತ್ಮವಿಶ್ವಾಸ ತಂದಿದೆ,
ತಂಗಿಗೆ ಮನ್ನೋಲ್ಲಾಸ ಕೊಟ್ಟಿದೆ,
ತಾಯಿಗೆ ಮಾತೃವಾತ್ಸಲ್ಯ ಕರುಣಿಸಿದೆ !!

ಅಣ್ಣನ ಬೆಂಗಾವಲಲಿ ಸಿಲುಕಿದೆ,
ಅಕ್ಕನ ಕೃಪಾಕಟಾಕ್ಷ ಸಿಕ್ಕಿದೆ,
ತಮ್ಮನ ತನುವದು ಲಬಿಸಿದೆ,
ಅಷ್ಟ ದಿಕ್ಕುಗಳಲು ಪ್ರೀತಿ ಆವರಿಸಿದೆ !!

ಗುರುಗಳಲಿ ಮೆಚ್ಚುಗೆ ಗಳಿಸಿದೆ,
ಹಿರಿಯರಿಗೆ ಗೌರವ ಕೊಟ್ಟಿದೆ,
ನೆರೆ ಹೊರೆಯರನ್ನು ನಂಬಿಸಿದೆ,
ಮಿತ್ರ ಮಂಡಲದಲ್ಲೇ ಸದಾ ಮಿನುಗಿದೆ!!

ಈ ಪ್ರೀತಿಯಾಕೆ ಇನ್ನೂ ಜೀವಂತವಾಗಿದೆ ?


Friday, July 20, 2012

ಪ್ರೀತಿ-ವಿಶ್ವಾಸ


ನಾನು ಆವಾಗ ತುಂಬಾ ಚಿಕ್ಕವನಿದ್ದೆ,
ಮನೆಯಲ್ಲೆಲ್ಲಾ ಮನಸೋ ಇಚ್ಛೆ ಕುಣಿಯುತಿದ್ದೆ,
ಚೇಷ್ಟೆ ಜಾಸ್ತಿಯಾಗಿ ಬಿಸಿಯಾದ ಪೆಟ್ಟು ತಿನ್ನುತಿದ್ದೆ,
ದೊಣ್ಣೆ ತರಲು ಹೆದರಿ ಹಸಿಯಾದ ಸುಳ್ಳು ಹೇಳುತಿದ್ದೆ,
ಎಷ್ಟೇ ಹೊಡೆದರು ನಮ್ಮವರೆಂದು ಸುಮ್ಮನಾಗುತಿದ್ದೆ,
ಮರು ಕ್ಷಣದಲ್ಲಿ ಎಲ್ಲವನ್ನೂ ಮರೆತು ಬದಲಾಗುತಿದ್ದೆ !!

ಆದರೆ ಇಂದು ನಾನು ದೊಡ್ದವನಾಗಿರುವೆ,
ಮನೆಯಲ್ಲೆಲ್ಲಾ ಸಮಯ ಕಳೆಯಲು ಕಷ್ಟಪಡುತ್ತಿರುವೆ,
ಕಾಸು ಜಾಸ್ತಿ ಮಾಡಲು ಹೊಸ ದಾರಿ ಹುಡುಕುತ್ತಿರುವೆ,
ಮನಸ್ಸು ಬಂದಂತೆ ಜನರೊಂದಿಗೆ ವ್ಯವಹರಿಸುತ್ತಿರುವೆ,
ಯಾರ ಹಂಗೂ ಇಲ್ಲದೆ ಕಷ್ಟ ಪಟ್ಟು ಜೀವನ ಸಾಗಿಸುತ್ತಿರುವೆ,
ಎಷ್ಟೇ ದುಡಿದರು ಆ ಶಾಂತಿ ನೆಮ್ಮದಿಯಿಂದ ವಂಚಿತನಾಗಿರುವೆ !!

ಮುಂದೊಂದು ದಿನ ನಾವೆಲ್ಲರೂ ಮುದುಕರಾಗುವೆವು,
ಮನೆಯಲ್ಲಿ ಮಕ್ಕಳು ಮರಿಗಳಿರಲೆಂದು ಬಯಸುವೆವು,
ಸಮಯವನ್ನು ಆನಂದದಿಂದ ಸವಿಯಲು ತವತವಿಕಿಸುವೆವು,
ಹಿಂದೆ ಇದ್ದಂತೆ ಇರಲಾಗದೆ "ಒಬ್ಬಂಟಿಯಾಗಿ" ಮರುಗುವೆವು,
ನನ್ನಂತೆ ನನ್ನ ಕೂಸು ದೂರಹೊಗಲು ಮನಸ್ಸಿನಲ್ಲೇ ಕೊರಗುವೆವು,
ಬೇಕಾಗಿರುವುದು ಪ್ರೀತಿ-ವಿಶ್ವಾಸವೆಂದು ಕೊನೆಗಾಲದಲಿ ತಿಳಿಯುವೆವು !!

Monday, July 16, 2012

ಅಣ್ಣ


ದೇವಳ್ಳಿಯ ರಾಯರ ಮಗ ಗುಂಡಣ್ಣ,
ಒಂದೊಳ್ಳೆಯ ರಾಗವ ಹಾಡೋ ನನ್ನಣ್ಣ,
ಚಂದುಳ್ಳಿ ಚೆಲುವಿ ನಿನ್ನೊಂದಿಗೆ ಬಂದ್ಲಣ್ಣ,
ನಿಂತಲ್ಲೇ ಶೃಂಗಾರ ಕಾವ್ಯ ನೀ ಹಾಡಣ್ಣ !!

ನಿನ್ನಾಕೆ ಸಮುದ್ರ ಬದಿಗೆ ಒಬ್ಳೆ ಹೋದ್ಲಣ್ಣ,
ಮೋಳಿ ಚಿಪ್ಪು ಚಿಚ್ಚಿತು ಅವ್ಳಿಗೆ ನೋಡಣ್ಣ,
ಸಾಲು ಬಂಗ್ಡಿ ಮೀನಿನ ಅಂಗಡಿ ಬಂತಣ್ಣ,
ಮೂಗುಬಾಯಿ ಮುಚ್ಕಂಡು ಓಡಿ ಹೋಗಣ್ಣ !!

ಮಳೆಗಾಲದಲ್ಲಿ ನಮ್ಮ ಊರತುಂಬ ನೆರೆಯಣ್ಣ,
ಸೆಂಡಿಗೆ, ಹಪ್ಳ ಸುಟ್ಕಂಡ್ ಮನೆಯಲ್ಲೇ ತಿನ್ನಣ್ಣ,
ಕುಂದಾಪ್ರ ಸಂತಿಗೆ ಒಂದ್ಸಲಿ ಬಂದು ನೋಡಣ್ಣ,
ಚೆಂದಚೆಂದ ಹೆಣ್ಣುಮಕ್ಳು ಇದ್ರಂತ ನೀ ಹೇಳಣ್ಣ !!

Saturday, July 14, 2012

ಪರಿಚಯ



ಗೆಳೆಯ ರಾಘವೇಂದ್ರ ಸೇರೆಗಾರ್ ನ ಪರಿಚಯ,
ಡೆಲ್ ಪರಿಸರದಲ್ಲಿ ನಮ್ಮ ಮಾತಿನ ವಿನಿಮಯ,
ತಿಳಿಯಿತು ನಮ್ಮ ಈ ಪುಸ್ತಕ ಪ್ರೇಮಿಯ ವಿಷಯ,
ಈ ಕಾಲದಲಿ ನೋಡಿಲ್ಲ ಎಲ್ಲೂ ಇವನಷ್ಟು ವಿನಯ !!

ಬೆರಗಾಗಿ ನೋಡಿದೆ ನಾನಂದು ನಿಮ್ಮ ನಡೆ ನುಡಿ,
ಮರೆಯಾಗಿ ಹೋಗುವ ನಿರ್ಧಾರವ ನೀವು ಬಿಟ್ಟುಬಿಡಿ,
ಹೆಮ್ಮೆಯ ಭಾರತಾಂಬೆಯ ನೆಚ್ಚಿನ ಕರುಳ ಕುಡಿ,
ಕಟ್ಟುವಿರಿ ನೀವು ಮುಂದೊಂದು ದಿನ ಕನ್ನಡದ ಗುಡಿ !!

ಸದಾ ಗುರುಹಿರಿಯರ ನಮಸ್ಕರಿಸಿ, ನೀವಾಗಿರುವಿರಿ ಹೆಸರುವಾಸಿ,
ಸದ್ಯ ವಿದೇಶದಲ್ಲಿ ವಾಸ, ಕನ್ನಡಕ್ಕೆ ಸೀಮಿತ ನಿಮ್ಮ ವಿಶ್ವಾಸ,
ಉದ್ಯೋಗದಲಿ ಅಭ್ಯಂತರ, ಅಭ್ಯಾಸ ಸಾಗುತಿದೆ ನಿರಂತರ,
ಸಹಾಯ ಮಾಡಲು ನೀವು ಸಿದ್ದ, ಸಮಾಜ ಸೇವೆಗೆ ಕಂಕಣ ಬದ್ದ !!

Friday, July 13, 2012

ಆತ್ಮ ಕತನದಲ್ಲಿ ಒಂದು ಇಣುಕು ನೋಟ

ಆತ್ಮೀಯರೇ,

ಬಾಲ್ಯದಿಂದ ಪ್ರೌಡಾವಸ್ಥೆಗೆ ತಲುಪಿದ ಸಮಯವೂ ಪ್ರತಿಯೊಬ್ಬ ಮನುಷ್ಯನನ್ನು ಬದಲಾವಣೆಯ ಪಥಕ್ಕೆ ಕರೆದೊಯ್ಯುತ್ತೆ ಅನ್ನುತ್ತಾರೆ. ಈ ಸಮಯ ಅಷ್ಟೊಂದು ಮಹತ್ವ ಪಡೆಯಲು ಬಹಳಷ್ಟು ಕಾರಣಗಳಿರಬಹುದು ಆದರೆ ಇದು ಬಹುಮುಖ್ಯವಾಗಿ ನಮ್ಮ ಭವಿಷ್ಯವನ್ನು ನಿರ್ಧರಿಸುವ ,ವಿಧ್ಯಾಬ್ಯಾಸ ಮತ್ತು ಉದ್ಯೋಗ ಪಡೆಯುವ ಮುಖ್ಯ ಘಟ್ಟ. ನಾವು ಕಲಿಯುವ ಅಥವಾ ಮ್ಯಗೂಡಿಸಿಕೊಳ್ಳುವ ಪ್ರತಿಯೊಂದು ಗುಣ ಲಕ್ಷಣವು, ಹಾವ ಭಾವ, ನಡೆ ನುಡಿ ಮತ್ತು ಸಂಸ್ಕಾರ ಇಲ್ಲಿ ನಿರ್ಧರಿಸಲ್ಪಡುತ್ತೆ. ನನ್ನ ಬದುಕಿನ ಈ ನಾಲ್ಕು ವರುಷದ ಸುಮಧುರ ದಿನಗಳನ್ನು ನನ್ನ ನೆನಪಿನ ಗೂಡಿಂದ ಬಿಚ್ಚಿಡುತ್ತಿದ್ದೇನೆ. ವ್ಯಕ್ತಿಗತವಾದ ನನ್ನ ನಿರ್ಧಾರ ನಿಮಗೆ ಸರಿಕಾಣಿಸದಿದ್ದಲ್ಲಿ ಅಥವಾ ಇಷ್ಟವಾಗದಿದ್ದಲ್ಲಿ ಅದನ್ನ ಇಲ್ಲೇ ಮರೆತುಬಿಡಿ. ಇಲ್ಲಿ ಬರೆಯಲ್ಪಡುವ ಪ್ರತಿಯೊಂದು ವಿಷಯವು ನಾ ಕಂಡ ಅಥವಾ ನಾನು ಅರ್ಥೈಸಿಕೊಂಡ ಮಾರ್ಗವಾಗಿರುತ್ತೆ. ಕೆಲವೊಂದು ವಿಚಾರವನ್ನು ನಾನು ಮರೆತಿರಬಹುದು ಅಂತದ್ದು ಮುಂದೆ ನೆನಪಾದಲ್ಲಿ ಕೊಂಡಿ ಹಾಕಿ ಜೋಡಿಸುವ ಪ್ರಯತ್ನ ಮಾಡುತ್ತೇನೆ... ಇದೋ ಸುಮಾರು ಇಂದಿಗೆ ಹತ್ತು ವರ್ಷಗಳ ಹಿಂದೆ..

ನಾನು II PUC/CET ಪರೀಕ್ಷೆಯಲ್ಲಿ ಉತ್ತಿರ್ಣನಾದ ಸಂಭ್ರಮ ಒಂದು ಕಡೆಯಾದರೆ, ಮುಂದೆ ಏನು ಮಾಡೋದು ಅನ್ನುವ ತಳಮಳ. ಕುಂದಾಪುರದ ಪ್ರತಿಷ್ಟಿತ ಪುರೋಹಿತ ವಂಶದಲ್ಲಿ ಜನಿಸಿದ ನನಗೆ ವಂಶಪಾರಂಪರ್ಯದ ಉದ್ಯೋಗದ ಕಡೆಗೆ ಹೊಗೋದ ಅಥವಾ ವ್ರತ್ತಿ ಶಿಕ್ಷಣದ ಕಡೆಗೆ ಹೊಗೋದ ಅನ್ನೋದರಲ್ಲೇ ಗೊಂದಲ. ಒಂದು ಕಡೆ ಅಜ್ಜನಿಗೆ ಕೊಟ್ಟ ಮಾತು, ಇನ್ನೊಂದೆಡೆ ಮುಂದೆ ಓದಬೇಕೆನ್ನುವ ಹಂಬಲ. ಕೋನೆಗೂ ಸರ್ವಸಮ್ಮತದ ನಿರ್ಧಾರ ಹೊರ ಬಂತು, ಬೆಂಗಳೂರಿಗೆ ಹೋಗಿ ಚಿಕ್ಕಪ್ಪನ ಮನೆಯಲ್ಲಿ ಇಂಜಿನಿಯರಿಂಗ್ ಕಲಿಕೆ ಮಾಡುವುದಾಗಿತ್ತು. ನನಗೆ ಬೆಂಗಳೂರು ಹೊಸತು, ಒಂದೇ ತರಹ ಕಾಣಿಸುವ ಗಲ್ಲಿ ರಸ್ತೆಗಳು, ಮನೆಗಳು ಅದೇ ತರಹ ಜನಗಳು. ಒಟ್ಟಾರೆ ಅದೊಂದು ವಿಸ್ಮಯಲೋಕ ಅನ್ನಿಸುವಂತಿತ್ತು, ಹಳ್ಳಿಯಿಂದ ಪಟ್ಟಣಕ್ಕೆ ಬಂದ ನನ್ನಂತಹ ಜನರಿಗೆ ಇದು ಸರ್ವೇಸಾಮಾನ್ಯ. ಮಂಜುನಾಥನಗರದಲ್ಲಿ ನನ್ನ ಚಿಕ್ಕಪ್ಪನ ಮನೆ ಇದೆ, ಮೊದಲನೇ ಮಹಡಿಯಲ್ಲಿರುವ ಎರೆಡು ವಿಶಾಲವಾದ ಕೊಟಡಿಯಿರುವ ಸುಂದರ ಮನೆ ಅದಾಗಿತ್ತು. ಚಿಕ್ಕದಾದ ದೇವರ ಕೋಣೆ ಅದರ ಎದರುಗಡೆ ವಿಶಾಲವಾದ ಜಾಗ, ಟಿವಿ,ಸೋಫಾ,ಕಪಾಟು,ಕಂಪ್ಯೂಟರ್ ಇನ್ನಿತರ ಗ್ರಹೋಪಯೋಗಿ ವಸ್ತುಗಳ ತಾಣ ಅದಾಗಿತ್ತು. ಬಿ.ಮ್.ಸ್ ಇಂಜಿನಿಯರಿಂಗ್ ಕಾಲೇಜ್ ಗೆ ಸೇರಿದೆ, ಅಲ್ಲೇ ನನ್ನ ಅತ್ತೆಯ ಮಗ ಶೇಷ ಪ್ರಸಾದ್ ಮಯ್ಯ ಓದುತ್ತಾಯಿದ್ದಿದ್ದ, ಅದೇ ನನ್ನ ಧೈರ್ಯಕ್ಕೆ ಗಜಬಲ ಸಿಕ್ಕಂತಾಗಿತ್ತು ಅವನ ಕೆಲ ಸ್ನೇಹಿತರ ಪರಿಚಯವೂ ಆಗಿತ್ತು .( ಕಾಲೇಜ್ ಜೀವನವನ್ನು ಪ್ರತ್ಯೇಕವಾಗಿ ಬರೆಯುವ ಇರಾದೆ ನನ್ನದು) ಕೊನೆಗೆ ಕುಂದಾಪುರ ಕನ್ನಡ ಮಾತ್ರ ಮಾತನಾಡಲು ಬಲ್ಲವನಾಗಿದ್ದ ನನಗೆ ಅಸಂಖ್ಯಾತ ಗೆಳೆಯರು ಪರಿಚಿತರಾದರು, ಅವರ ಜೊತೆ ಸಂಬಾಷಣೆ ಮಾಡುತ್ತಾ ಮಾಡುತ್ತಾ ಬೆಂಗಳೂರು ಜನರಂತೆ ಮಾತನಾಡಲು ಸಾಧ್ಯವಾಯಿತು.




ಊರಿನಲ್ಲಿ ಸಂಜೆಯಾಗುತ್ತಿದ್ದಂತೆ ಕ್ರಿಕೆಟ್ ಆಡುತ್ತಾಯಿದ್ದಿದ್ದೆ, ಬೆಂಗಳೂರಿಗೆ ಬಂದಮೇಲೆ ಅದು ಮರೀಚಿಕೆ ಆಯಿತು. ಯಾಂತ್ರಿಕ ಜೀವನ ಶೈಲಿ ನನಗೆ ಸ್ವಲ್ಪ ಕಸಿವಿಸಿ ಆನ್ನಿಸ್ತಾಯಿತ್ತು. ಮೊದಮೊದಲು ಹಳೆಯದನ್ನು ಯೋಚಿಸುತ್ತಿದ್ದ ಮನಸ್ಸು ಆನಂತರದ ದಿನದಲ್ಲಿ ಸಂಪೂರ್ಣವಾಗಿ ಪರಿವರ್ತನೆ ಆಯಿತು. ಚಿಕ್ಕಪ್ಪನ ಮಕ್ಕಳ ಜೊತೆ ಆಗೊಮ್ಮೆ ಈಗೊಮ್ಮೆ ಆಡುತ್ತಾಯಿದ್ವಿ. ಒಮ್ಮೊಮ್ಮೆ ನಾವೆಲ್ಲಾ ಕ್ಯಾರಂ ಇಲ್ಲಾ ಪಗಡೆ ಆಡ್ತಾಯಿದ್ದಿದ್ವಿ. ಚಿಕ್ಕಮ್ಮನೂ(ಚಿಕ್ಕಿ) ನಮಗೆ ಸಾತ್ ಕೊಡ್ತಾಯಿದ್ದಿದ್ರು, ಚಿಕ್ಕಪ್ಪ ಪಗಡೆ ಆಡೋಕೆ ಸ್ವಲ್ಪ ಕಡಿಮೆ ಬರ್ತಾಯಿದ್ದದ್ದು. ಅವರಿಗೆ ಕೆಲಸದ ಒತ್ತಡ ಜಾಸ್ತಿ ಇರುತಿತ್ತು. ನಾನು ಬೆಂಗಳೂರಿಗೆ ಬಂದಾಗ ಚಿಕ್ಕಪ್ಪನ ಮಕ್ಕಳು ಸ್ವಲ್ಪ ಚಿಕ್ಕವರಿದ್ದಿದ್ರು, ಚಿಕ್ಕಪ್ಪ ಅಂದ್ರೆ ನನಗೆ ಅಷ್ಟೊಂದು ಸಲಿಗೆ ಇರಲಿಲ್ಲ.. ಇವಾಗ್ಲೂ ಸ್ವಲ್ಪ ಕಡಿಮೇನೆ, ಚಿಕ್ಕಪ್ಪನ ಏನೆ ಕೆಳಬೇಕಾದ್ರು ನನ್ನ ಮಾಧ್ಯಮ "ಚಿಕ್ಕಿ". ನನಗೆ ಕಾಲೇಜ್ ಫೀಸ್ ಕಟ್ಟೋಕೆ ನಾನು ಮೊದಲು ಚಿಕ್ಕಿ ಹತ್ರಾನೆ ಅಪ್ಲಿಕೇಶನ್ ಹಾಕ್ತ ಇದ್ದಿದ್ದೆ. ಚಿಕ್ಕಿ ನನಗೆ ಮೊದಮೊದಲು ಅಷ್ಟೊಂದು ಸಲಿಗೆ ಇರಲಿಲ್ಲ. ದಿನ ಕಳೆದಂತೆ ಚಿಕ್ಕಿ ತುಂಬ ಆತ್ಮೀಯರಾಗಿದ್ರು. ಅದೆಷ್ಟೋ ಬಾರಿ ಜಗಳ ಆಡಿದ್ವಿ ಆಮೇಲೆ ಫ್ರೆಂಡ್ಸ್ ಆಗೋದು ಸ್ವಲ್ಪ ಮುನಿಸ್ಕೊಂಡಿರೋದು, ಮರುದಿನ ಏನು ಆಗಿಲ್ಲ ಅನ್ನೋತರ ಇರ್ತಾ ಇದ್ವಿ. ಇನ್ನು ನೆನಪಿರೋದೆನಂದ್ರೆ ಚಿಕ್ಕಿ ಅಡಿಗೆ ಮನೇಲಿ ಕೆಲಸ ಮಾಡ್ತಿರ್ಬೇಕದ್ರೆ ಹಿಂದಿನಿಂದ ಹೋಗಿ ಕುತ್ತಿಗೆನೋ,ಕಣ್ಣೋ ಮುಚ್ಚಿ ಹೆದರಿಸ್ತಾಯಿದ್ದೆ. ಅಡಿಗೆ ವಿಷಯದಲ್ಲಿ ಚಿಕ್ಕಿನ ಮೀರಿಸೋ ಗೃಹಿಣಿ ಯಾರು ಇಲ್ಲಾ.. ಏನೆ ಹೊಸರುಚಿ ಕಲಿತರು ಅದು ಅಷ್ಟೊಂದು ಅಚ್ಚುಕಟ್ಟಾಗಿ ಮಾಡ್ತಾಯಿದ್ರು, ಎಲ್ಲಾದರು ಸ್ವಲ್ಪ ರುಚಿ ಚೆನ್ನಾಗಿ ಬರ್ಲಿಲ್ಲ ಅಂದ್ರೆ ಅದನ್ನೇ ಯೋಚಿಸ್ತಾ ಇರೋರು, ಮತ್ತೊಮ್ಮೆ ಅಂದ್ಕೊಂಡದನ್ನ ಮಾಡಿ ಕುಶಿ ಪಡ್ತಾಯಿದ್ರು. ಪರಿಪಕ್ವತೆ ಅಂತ ಕರೆಯೋದು ಇದನ್ನೇ, ನಾನು ಯಾವಾಗ್ಲೂ ಅದರ ರುಚಿ ನೋಡೋ ಅದೃಷ್ಟವಂತ, ನನಗಂತೂ ಏನ್ ಮಾಡಿದ್ರು ರುಚಿಯಾಗೆ ಇರ್ತಾಯಿತ್ತು. ಯಾಕೆ ಇವರು ಎಷ್ಟೊಂದು ಕೊರಗುತ್ತಾರೆ ಅನ್ನಿಸೋದು.

ನನಗೆ ಬೆಳಿಗ್ಗೆ ೭ ಗಂಟೆಗೆ ಕಾಲೇಜ್ ಶುರು ಆಗ್ತಾಯಿತ್ತು, ಏನಿಲ್ಲ ಅಂದ್ರು ಬೆಳಿಗ್ಗೆ ೬:೩೦ಕ್ಕೆ ಹೊರಡಬೇಕಿತ್ತು, ದಿನಾ ಹೋಗಿ ಚಿಕ್ಕಿ ನಿದ್ರೆ ಹಾಳ್ ಮಾಡ್ತಾಯಿದ್ದೆ, ಪಾಪ ನಿದ್ದೆಯಿಂದ ಎದ್ದು ತಿಂಡಿ ಮಾಡಿ ಕೊಡೋವುರು. ಒಂದು ದಿನಾನು ಆಗಲ್ಲ ಅಂತ ಹೇಳಿಲ್ಲ. ಭಾನುವಾರ ಬಂತು ಅಂದ್ರೆ ಅವ್ರಿಗೆ ಕುಶಿ. ಆದ್ರೆ ಚಿಕ್ಕಪ್ಪನ ದಿನಚರಿನೆ ಬೇರೆ ಬೇಗ ಎದ್ದು ವಾಕಿಂಗ್ ಹೋಗೋರು. ಮನೇಲಿ ಪ್ರಾಣಾಯಾಮ ಮಾಡೋದು, ದಿನಪತ್ರಿಕೆಯ ಪ್ರತಿಯೊಂದು ಸಾಲನ್ನು ಓದುತ್ತಾ ಇದ್ರು. ಅವ್ರಿಗೆ ಪುಸ್ತಕ ಓದೋದ್ರಲ್ಲು ತುಂಬಾ ಆಸಕ್ತಿ, ಇವಾಗ ಅವ್ರ ಮನೇಲಿ ಒಂದು ಚಿಕ್ಕ ಗ್ರಂಥಾಲಯವಿದೆ. ಚಿಕ್ಕಪ್ಪ ಚಿಕ್ಕಮ್ಮಂದು ಸುಖಿಸಂಸಾರ, ಇಬ್ಬರಲ್ಲೂ ತುಂಬಾ ಅನ್ಯೋನ್ಯತೆ, "ಗ್ರಹಿಣಿ ಗ್ರಹಮುಚ್ಯತೆ" ಅಂತಾರಲ್ಲ ಅದಕ್ಕೆ ನನ್ನ ಚಿಕ್ಕಿ ಹೇಳಿ ಮಾಡಿಸಿದಂತಿದೆ. ಊರಿಂದ ಯಾರೇ ಬರಲಿ ಅವರ ಆತಿಥ್ಯ ಸ್ವಲ್ಪಾನು ಬೇಜಾರಿಲ್ಲದೆ ಮಾಡ್ತಾರೆ ಇವಾಗ್ಲೂ ಅಷ್ಟೇ. ಒಂದು ವಿಷಯ ಹೇಳಲೇಬೇಕು ಚಿಕ್ಕಿಗೆ ತುಂಬಾನೆ ತಲೆನೋವು, ಯಾವಗ್ಲಂದೆ ಆವಾಗ ಬರೋದು. ನಾಮ್ಮ ಹತ್ರ ಮಾತ್ರೆ ತರೋಕೆ ದುಡ್ಡು ಕೊಟ್ಟು ಕಲಿಸೋಳು. ಅವರನ್ನ ಯಾರಾದ್ರೂ ನೋಡಿದ್ರೆ ಏನು ಆಗಿಲ್ಲ ಅನ್ನೋತರಹ ನಟಿಸೋಳು ಆದ್ರೆ ಪಾಪ ಅದೆಷ್ಟು ಸಂಕಟ ಪಡ್ತಾಯಿದ್ರು ಅಂತ ನಮಗೆ ಗೊತ್ತು. ಅವ್ರು ಒಂದು ತರಹ MBBS ಮಾಡದೆಯಿರೋ ಡಾಕ್ಟರ. ಯಾರಾದ್ರೂ ಒಂದು ಮಾತ್ರೆ ಇದೆ ಅಂದ್ರೆ ಕಿವಿ ನೆಟ್ಟಗೆ ಮಾಡ್ಕೊಂಡು ಕೇಳೋರು, ಅರ್ಥಾತ್ ಅಷ್ಟು ಕುತೂಹಲ.

ಪಾನಿ ಪೂರಿ,ಮಸಾಲ್ ಪೂರಿ ಅಂದ್ರೆ ಒಂದು ಮಾರು ದೂರ ಓಡಿ ಹೋಗ್ತಾಯಿದ್ದ ನಾನು ಕಾಲಕ್ರಮೇಣ ಬೆಂಗಳೂರಿನ ಶೈಲಿಗೆ ಬದಲಾದೆ. ಮೊದಮೊದಲು ಇರುಳ್ಳಿ,ಬೆಳ್ಳುಳ್ಳಿ ತಿನ್ನುತ್ತಾಯಿರಲಿಲ್ಲ, ಮನೆಲು ಅಷ್ಟೇ ನನಗೆ ಬೇರೆ ಪದಾರ್ಥ ತೆಗೆದಿಡಬೇಕಿತ್ತು. ಆಮೇಲೆ ಒಮ್ಮೆ ಅದರ ರುಚಿ ನಾಲಿಗೆಗೆ ತಿಳಿದಿರಬೇಕು, ಮತ್ತೆ ಎಂದೂ ಬೇಡ ಅನ್ನುತ್ತಾಯಿಲ್ಲ ನೋಡಿ. ಚಿಕ್ಕಪ್ಪ ಸಂಜೆ ಮನೆಗೆ ಬಂದಾಗ ಅವರ ಮನಸ್ಥಿತಿ ನೋಡಿ ಹೊರಗೆ ಹೋಗೋ ಪ್ರೊಗ್ರಾಮ್ ತಯರಾಗ್ತಯಿತ್ತು. ನಾನು ಬಂದ ಹೊಸತರಲ್ಲಿ ಹೋಗ್ತಾ ಇರಲಿಲ್ಲ ಆಮೇಲೆ ನಿದಾನವಾಗಿ ಅಭ್ಯಾಸ ಅಗೋಯಿತು. ಭಸವೇಶ್ವರ ನಗರದ ಪಾನಿ ಪೂರಿ ಅಂಗಡಿ,ಬೆಣ್ಣೆ ದೋಸೆ ಅಂಗಡಿ ಇನ್ನು ಹಲವಾರು ಹೋಟೆಲ್ ರುಚಿ ನೋಡಿದೆ. ಏನೆ ಹೇಳಿ ಅಲ್ಲಿಂದ ಇಂದಿನ ತನಕ ಅದೆಷ್ಟೋ ಹೋಟೆಲ್ ಊಟ ತಿಂಡಿ ಮಾಡಿದ್ದೇನೆ. ಆದರೆ ಚಿಕ್ಕಿ ಕೈ ಊಟಕ್ಕಿಂತ ಯಾವುದು ರುಚಿಯಿಲ್ಲ. ನಮ್ಮ ಮನೆಗೆ ಯಾರಾದ್ರೂ ಬಂದ್ರೆ ಮುಗಿತು, ಬಗೆ ಬಗೆ ತಿಂಡಿ ತಿನಿಸು ಮನೆಯಲ್ಲೇ ತಯಾರಾಗ್ತಾಯಿತ್ತು.

ಒಮ್ಮೆ ನನ್ನ ಹುಟ್ಟಿದಹಬ್ಬ, ಮನೇಲಿ ಯಾರಿಗೂ ಗೊತ್ತಿಲ್ಲ, ಸಂಜೆ ಅದು ಹೇಗೋ ಚಿಕ್ಕಿಗೆ ಗೊತ್ತಾಯಿತು, ಎಲ್ಲೊ ಹೊರಗೆ ಹೋಗೋಕೆ ಇದ್ದಿತ್ತು, ನಾನೊಬ್ಬನೇ ಮನೇಲಿ ಊಟ ಮಡ್ಬೇಕಾಗಿರೋದಾಗಿತ್ತು. ಹೊರಡೋಕೆ ಸ್ವಲ್ಪ ಮುಂಚೆ ಗೊತ್ತಾದ್ರು, ಹಾಗೆ ಹೋಗೋಕೆ ಮನಸಾಗಿಲ್ಲ. ಬೇಳೆ ಪಾಯಸ ಮಾಡಿದ್ರು. ಅದು ಚೆಂದಾಗಿಲ್ಲ( ಬೇಳೆ ಬುಡ ಸುಟ್ಟಿತ್ತು) ಅಂತ ಅವ್ರೆ ಬೇಜಾರ್ಮಡ್ಕೊಂಡು ಹೋಗಿದ್ರು. ಚಿಕ್ಕಿಗೆ ಹಾಲು ಕಾಯಿಸೋದು ಅಂದ್ರೆ ತುಂಬಾ ಕಷ್ಟದ ಕೆಲೆಸ, ದಿನಕ್ಕೆ ಒಮ್ಮೆಯಾದರು ಹಾಲು ಒಕ್ಕೊದು ಮಾಮೂಲಿ. ಒಂದೇ ಕಡೆ ಸುಮ್ಮನೆ ನಿಲ್ಲೋ ಜಾಯಮಾನವಲ್ಲ ಅವರದ್ದು. ಮುಂದಿನ ವರ್ಷದ ಹುಟ್ಟು ಹಬ್ಬ ನನಗೆ ತಿಳಿದಂತೆ ತುಂಬಾನೆ ವಿಜ್ರಂಭಣೆಯಿಂದಾಯಿತು. ಶಾವಿಗೆ, ಕಾಯಿ ಕಡಬು,ಉಂಡ್ಳುಕಾಯಿ, ಬೋಂಡ ಮತ್ತು ಪಾಯಸ ಮಾಡಿದ್ರು.ಹಬ್ಬ ಹರಿದಿನಗಳು ಬಂದ್ರೆ ನಮಗೆ ಸಡಗರ. ಏನು ವಿಶೇಷ ಮಾಡ್ತಾರೆ ಅನ್ನೋ ಕುತೂಹಲ, ಒಮ್ಮೊಮ್ಮೆ ಏನು ಹೆಸರು ಅಂತ ನಿರ್ಧಾರವಾಗೋದು ತಿನ್ನೋ ಸಮಯ ಬಂದಾಗ. ( ಹ ಹ ಹ ). ದೀಪಾವಳಿ ಆಚರಣೆ ಎಂದೂ ಮರೆಯದ ನೆನಪು. ನಮಗೆಲ್ಲ ಹೊಸಬಟ್ಟೆ ಕೊಡಿಸೂರು. ಬೆಳಿಗ್ಗೆ ಬೇಗ ಅಭ್ಯಾಂಗ ಸ್ನಾನ ಆಗೋದು, ನಮಗೆಲ್ಲ ಎಣ್ಣೆ ಹಚ್ಚಿ ಬೆನ್ನುಜ್ಜಿ ಸ್ನಾನ ಮಾಡಿಸೋರು. ಚಿಕ್ಕಮ್ಮನ ವಾತ್ಸಲ್ಯಕ್ಕೆ ಸಾಟಿಯಿಲ್ಲ. ಲಕ್ಷಿ ಪೂಜೆ ದಿನ ಚಿಕ್ಕಪ್ಪನ ಆಫೀಸ್ ಪೂಜೆ. ಮಧ್ಯಾಹ್ನ್ನ ಮನೇಲಿ ಗಡಜ್ ಊಟ, ಸಂಬಂದಿಕರೆಲ್ಲರನ್ನು ಕರೆಯುತ್ತಿದ್ರು. ಇವಾಗ್ಲೂ ಅಷ್ಟೇ.

ಸಂಜೆಯ ಸಮಯ ಸವಿಯಾದ ಟೀ ಕುಡಿಯುತ್ತ ಚಿಕ್ಕಿ ಮತ್ತೆ ಸೋದರತ್ತೆ ಹತ್ರ ಹರಟೆ ಹೊಡಿತಾಯಿದ್ದೆ. ನನಗೋ ಕಾಲೇಜ್ ಲಿ ನಡಿಯೋ ಪ್ರತಿಯೊಂದು ಘಟನೆ ಹೇಳೋಕೆ ಆಸಕ್ತಿ. ನಾನು ತಿಳಿದಂತೆ ನನ್ನ ಗೆಳೆಯರೆಲ್ಲರ ಬಗ್ಗೆನು ಚಿಕ್ಕಿಗೆ ಗೊತ್ತು. ನಾನು ಏನಾದ್ರು ತಪ್ಪು ಮಾಡಿದ್ರೆ ನನ್ನ ತಿದ್ದಿದ್ದು ಅವ್ರೆ ಅಂದ್ರೆ ತಪ್ಪಲ್ಲ. ನನಗೆ ಏನಾದ್ರು ನಿರ್ಧಾರ ತಗೊಳ್ಳೋಕೆ ಗೊಂದಲವಾದ್ರೆ ಚಿಕ್ಕಿನೆ ಜಡ್ಜಮ್ಮ. ಕೆಲವೊಮ್ಮೆ ಮಾವ ಬೇಗ ಬರೋರು, ಅವರ ಮನೇನು ಹತ್ರಾನೆ ಇದ್ದಿತ್ತು. ಮಾವ ಬಂದ್ರೆ ಹಳೆಕಾಲದಿಂದ ಕಥೆ ಶುರು ಮಾಡೋರು, ಸಮಯ ಹೋಗೋದೇ ತಿಳಿತಾಯಿರಲಿಲ್ಲ.ಕ್ರಿಕೆಟ್,ರಾಜಕೀಯ ಮತ್ತು ದೈನಂದಿನ ಜೀವನದ ಸಮಾಚಾರ ನಮಗೆ ಚರ್ಚೆಯ ವಿಷಯ.

ನಾನು ಮೊದಲಬಾರಿ ತಿರುಪತಿಗೆ ಭೇಟಿ ಕೊಟ್ಟಿದ್ದು ಅದೇ ಸಮಯದಲ್ಲಿ, ಚಿಕ್ಕಿಯ ಹರಕೆ ಇತ್ತು ಬೆಟ್ಟ ಹತ್ಕೊಂಡೆ ಹೋಗೋದು ಅಂತ. ಚಿಕ್ಕಿ ಯಾವಾಗ್ಲೂ ಹರಕೆ ಹೊರೋದ್ರಲ್ಲಿ ಮುಂದೆ. ನಾವೆಲ್ಲಾರು ನಡ್ಕೊಂಡು ಹೋಗಿದ್ದು. ಅದೊಂದು ಅವಿಸ್ಮರಣೀಯ ದಿನ. ಮೇಲೆ ವೆಂಕಟೇಶನ ದರ್ಶನ ಮಾತ್ರ ತುಂಬಾ ದುಸ್ತರವಾಗಿತ್ತು, ೬ ಗಂಟೆ ಸಾಲಲ್ಲಿ ನಿಲ್ಲೋದ್ರಲ್ಲಿ ನಾವೆಲ್ಲಾ ಸುಸ್ತು. ಇನ್ನೊಮ್ಮೆ ಭನಶಂಕರಿ ದೇವಸ್ತಾನಕ್ಕೆ ಹರಕೆ ತೀರಿಸೋಕೆ ಹೋಗಿದ್ವಿ. 205 ನಂಬರ್ ಬಸ್ಸಲ್ಲಿ ಹೋಗಿ ದರ್ಶನ ಮಾಡಿ, ಪೂಜೆ ಕೊಟ್ವಿ, ವಾಪಸ್ ನಾನು ಬೇರೆ ಎಲ್ಲೊ ಹೋಗಬೇಕಿತ್ತು, ಯಾವತ್ತು ಒಬ್ರೇ ಬಸ್ಸಲ್ಲಿ ಹೋಗದ ಚಿಕ್ಕಿ ಆವತ್ತು 205a ನಂಬರ್ ಬಸ್ ಹತ್ತಿ ಹೊರಟರು, ಅವರ ದುರಾದ್ರುಷ್ಟ ಅದು ಬೆಂಗಳೂರಿಗೆ ಒಂದು ಸುತ್ತು ಹಾಕಿ ಬಂತು. ನನಗೆ ತುಂಬಾ ಬೇಜಾರಾಗಿತು. ನಾನು ಸ್ವಲ್ಪ ವಿಚಾರಿಸಬಹುದಿತ್ತು ಅಂತಾ ಆಮೇಲೆ ಕಲಿತೆ.

ನನಗೆ ಇಂಜಿನಿಯರಿಂಗ್ ಮುಗಿದು Perot systems (ಡೆಲ್ ಸೇರ್ವಿಸೆಸ್) ಕಂಪನಿಯಲ್ಲಿ ಕೆಲಸ ಸಿಕ್ಕಿತು. ಆಫೀಸ್ ಹತ್ರಾನೆ ಮನೆ ಬದಲಾಯಿಸೋ ಚಿಂತನೆಗಳು ಪ್ರಾರಂಬವಾದವು. ಇಷ್ಟೊಂದು ಸುಮಧುರ ನೆನಪುಗಳ ಗೂಡಿಂದ ಹೊರಹೋಗಲು ಯಾವ ಹಕ್ಕಿಯೂ ಇಷ್ಟಪಟ್ಟಿರಲಿಕ್ಕಿಲ್ಲ.ಸಿಹಿಯಾದ ಜೀನುಗೂಡಿಂದ ಹಾರಿ ಹೋಗುವ ಕಾಲ.ಬ್ರಹ್ಮಚಾರಿಯ ಹೊಸ ಕುಟೀರದ ಉದ್ಗಾಟನೆ. ಸಿದ್ದಾಪುರದಲ್ಲಿ ೩ನೆ ಅಂತಸ್ತಿನಲ್ಲಿ ಒಂದು ಚಿಕ್ಕ ಮನೆ ಹುಡುಕಿದೆವು. ನೋಡ ನೋಡುತಿದ್ದಂತೆ ಮನೆಗೆ ಹೋಗುವ ದಿನ ಬಂದಿತು, ಅಲ್ಲೋಲ ಕಲ್ಲೋಲವಾದ ಮನಸ್ಸು ಕಲ್ಲಾಗಿ ಪರಿವರ್ತನೆಯಾಗ ಬಯಸಿತು, ಎಷ್ಟಾದರೂ ಅನ್ನದ ಋಣ, ರಕ್ತಸಂಬಂದದ ಆಕರ್ಷಣೆ. ಮನವು ತಾ ಬರಲಾರೆ ಅನ್ನಲು ಕಣ್ಣು ತಾ ಒಂದುಹನಿ ಸಿಂಚನ ಮಾಡಿರಲು. ಹೋರಾಟ ಮಾಡಿ ಬದುಕುವ ಆಲೋಚನೆಗೆ ಹಿನ್ನಡೆ.  ಮನೆಯಿಂದ ನನ್ನ ಸಾಮಾನುಗಳ ಹೊತ್ತು ಹೊರಡುವ ಸಮಯ. ನಾನು ಚಿಕ್ಕಪ್ಪ,ಚಿಕ್ಕಮ್ಮನಿಗೆ ನಮಸ್ಕರಿಸಿ ಹೊರಟೆ. ನಿಮ್ಮ ಆಶೀರ್ವಾದದ ಬಲವೊಂದಿದ್ದರೆ ಆಶಾ ಗೋಪುರವ ಕಟ್ಟೇನು ಅನ್ನುವ ಛಲ. ಬಾಗಿಲ ಬಳಿ ನಿಂತು ದೂರದ ಬೆಟ್ಟವ ನೋಡಿ ನಾ ಬರುವೆ ಅನ್ನಲು ಹೇಳಲಾಗದ ನೋವು. ಅತ್ತ ಚಿಕ್ಕಿ ನನ್ನ ಅಕ್ಕನಿಗೆ ಫೋನ್ ಮಾಡಿ ನನಗೆ ದೈರ್ಯ ತುಂಬಲು ಹೇಳ್ತಾ ಇದ್ರು. ಮದ್ಯದಲ್ಲಿ ಚಿಕ್ಕಿಯ ದ್ವನಿ ನಿಂತಿತು ಕಣ್ಣಿನಲ್ಲಿ ಮೌನವಾಗಿ ನರ್ಮದೆ ಸುರಿಯುತ್ತಿದ್ದಿದಳು. ನಾಲ್ಕು ವರ್ಷ ತನ್ನ ಮಕ್ಕಳಂತೆ ನೋಡಿಕೊಂಡ ಹೃದಯ, ಹೋಗುವುದು ಮೊದಲೇ ತಿಳಿದಿದ್ದರೂ ಸಹಿಸಲಾರದ ವೇದನೆ. ನಿಮಿಶಾರ್ದದಲಿ ಬಂದಿರಬಹುದಾದ ಯೋಚನಾ ಲಹರಿ ಆ ನಾಲ್ಕು ವರುಷದ ಸಿಹಿ ಕಹಿ ನೆನಪನ್ನ ಮೇಳೈಸಿದೆ. ಇತ್ತ ಹೊರಟ ನಾನು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನನ್ನನು" ಅಂತ ಕಣ್ಣನ್ನು ತೇವ ಮಾಡಿಕೊಂಡು ಬಾರವಾದ ಹೆಜ್ಜೆಯನಿಟ್ಟು ಮುಂದೆ ಸಾಗಿದೆ.ನನ್ನೆರಡು ಕಾಲುಗಳು ನೀ ಮುಂದೆಸಾಗು ಅಂತ ಕಿತ್ತಾಡುತ್ತಿವೆ, ಪ್ರತಿದಿನ ಸಾಗುವ ರಸ್ತೆಯು ಇಂದು ನನ್ನ ಮೌನಕ್ಕೆ ನೊಂದು ಕೊರಗುತ್ತಿದೆ. ತಂಪುಗಾಳಿಯು ನನ್ನನ್ನು ಬಿಗಿದಪ್ಪಿ ಸಂತೈಸುತ್ತಿದೆ. ಸೂರ್ಯ ತಾ ನೋಡಲಾರದೆ ಮೋಡದಲ್ಲಿ ಮರೆಯಾಗಿದ್ದಾನೆ.

ನನ್ನಿಂದ ಅದೆಷ್ಟೋ ಬಾರಿ ನೊಂದು, ಆಪಾದನೆ ಕೇಳಿರುವ ತಾಯಿ ಹೃದಯ. ನನಗಾಗಿ ಒಮ್ಮೆ ಮಿಡಿದಿರುವುದನ್ನ ಗಮನಿಸಿ ಆನಂದ ಪಡಲೇ ? ಇಲ್ಲ ನನ್ನಿಂದ ಒಂದು ಹನಿ ಕಣ್ಣೀರು ಸುರಿಯಿತಲ್ಲಾ ಅಂತ ವೇದನೆ ಪಡಲೇ ? ನನಗೆ ಕೆಲವು ಸಂದರ್ಭದಲ್ಲಿ ಅನ್ನಿಸೋದು, ಎಷ್ಟೊಂದು ಸಹಾಯ ಮಾಡಿದ, ಇಂದು ನಾನು ಈ ಹಂತಕ್ಕೆ ಬರೋಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿದವರಿಗೆ ಏನಾದ್ರು ಕೊಡಬೇಕು ಅಂತ. ಯೋಚಿಸಿ ಯೋಚಿಸಿ ಸಮಯ ಸಂದಿಸಿದೆ ಹೊರತಾಗಿ ಯಾವುದೇ ಪ್ರಯೋಜನವಾಗಿಲ್ಲ. ಶಿಲೆ ತಾನು ಶಿಲ್ಪವಾಗಿ ಮಾರ್ಪಡಲು ಶಿಲ್ಪಿ ಕಾರಣನಾಗುತ್ತಾನೆ ಇಲ್ಲ ಅಂದಿದ್ರೆ ಅದೊಂದು ಬರಿ ಕಲ್ಲಾಗಿರುತ್ತಿತ್ತು. ಶ್ರೇಷ್ಠತೆ ಶಿಲ್ಪಿಗೆ ಸೇರಬೇಕು.

:- Sridhar Aithal D

Wednesday, July 11, 2012

ಚಿಕ್ಕಿ



ಮಾಸದ ನೆನಪು ಚಿಕ್ಕಪ್ಪನ ಮನೆಯಲ್ಲಿನ ದಿನವು,
ಮೋಸವೇ ಇಲ್ಲದ ಪ್ರೀತಿಯ ಚಿಕ್ಕಮ್ಮನ ಮನವು,
ತಮ್ಮಂದಿರ ಜೊತೆಗೆ ನನ್ನ ವಿದ್ಯಾಭ್ಯಾಸದ ಹಸಿವು,
ನಂದಗೋಕುಲದಲ್ಲಿ ಕಳೆದ ಆ ನಾಲ್ಕು ವರುಷವು !!

ನೆನಪಿನ ಪುಟಗಳ ಮಧ್ಯದಿ ಸಾಲಾಗಿ ಸೇರಿದೆ,
ಕನಸಿನ ಕಲ್ಪನೆಗೆ ಒಂದಷ್ಟು ಸೆಲೆಯಾಗಿ ಸಿಗದೆ,
ಮನಸಿನ ಬಾವನೆಯ ನೆಲೆಯಾಗಿ ಸಂಬಂದಿಸಿದೆ,
ಬದುಕಿನ ಸರಪಳಿಯ ಸಿಹಿಜೇನ ಹನಿಗಳಾಗಿದೆ !!

ಹಾಲಿನಂತಹ ಮನಸ್ಸು ಹೇಳಲೇನಿದೆ ಹೊಸತು,
ಕಣ್ಣ ಮೇಲಿನ ಕಾಂತಿ ವೈಮನಸ್ಸಿಗೆ ವಿಶ್ರಾಂತಿ,
ಸಣ್ಣ ತನವು ನಾಸ್ತಿ, ಪ್ರೀತಿ ವಿಶ್ವಾಸವೇ ಜಾಸ್ತಿ,
ನನ್ನ ಚಿಕ್ಕಿಯ ಆಸ್ತಿ ಮುಗುಳ್ನಗುವಿನೊಂದಿಗೆ ಕುಸ್ತಿ !!

ಮರೆಯಲಾಗದು ಚಿಕ್ಕಿ ನೀ ಕೊಟ್ಟ ಅಕ್ಕರೆ,
ಮೀರಿಸಲಾಗದು ಯಾರೂ,ನಿನ್ನ ನುಡಿ ಸಕ್ಕರೆ,
ಸಹಿಸಲಾರೆವು ಎಂದಿಗೂ ಇನ್ನು ನೀನು ಅತ್ತರೆ,
ನೋಡುವೆವು ಸ್ವರ್ಗವ ಸದಾ ನೀನು ನಗುತಿರೆ !!

ಶಾಂತಲ



ಮನಸ್ಸು ನಿನ್ನದು ಬಹಳ ವಿಶಾಲ,
ನಿರ್ಧಾರದಲ್ಲಿ ನೀನಿರುವೆ ಬಲು ಅಚಲ,
ಹಸನ್ಮುಖಿ ನೀನೆಂದೂ ಇರಲಾರೆ ಚಂಚಲ,
ಅದಕ್ಕೆ ಕರೆಯುವರು ನಿನ್ನನು “ಶಾಂತಲ” !!

ಅಪರೂಪಕೆ ಚಿಮ್ಮುವ ಚೆಲುವು,
ಮನಮೋಹಕ ಕಾಂತಿಯ ನಿಲುವು,
ಮೈಮನ ರೋಮಾಂಚನ ಸ್ವರವು,
ಸದಾ ಕೆಳಬಯಸಿದೆ ನಮ್ಮೀ ಮನವು !!

ನೋಡಿಲ್ಲ ಯಾರಲ್ಲೂ ನಿನ್ನಯ ಹಗೆತನ,
ಸ್ತ್ಯರ್ಯಳಿಗೆ ಒಲಿದಿದೆ ನಿನ್ನಯ ತಾಯ್ತನ,
“ಹರಿ”ಗೆ ಲಬಿಸಿದೆ ನಿನ್ನಯ ಒಡೆತನ,
ಸದಾ ಬೆಳಗಲಿ ನಿಮ್ಮ ಈ ಮನೆತನ !!

ನಾವಿರೋದೆ ಹೀಗೆ



ಇದು ನನಗು ನಿನಗೂ ತಿಳಿಯದೆ ಆದ ಪ್ರೀತಿ,
ಒಂದರ ಮೇಲೆ ಒಂದು ಬಯಕೆ ಬಂದ ರೀತಿ,
ತಡವಾಗಿ ಬಂದಾಗ ನೀನು ಕೊಟ್ಟ ರಿಯಾಯಿತಿ,
ಮರೆತೇ ಹೋಗಬೇಕೆ ಮರುದಿನ ಈ ನನ್ನ ಮತಿ !!

ಎಷ್ಟಾದರೂ ನೀನಲ್ಲವೇ ನನ್ನ ಪ್ರೀತಿಯ ಸತಿ,
ಅದಕೆ ಕಾಡಿದೆ ನಿನ್ನನು ಪ್ರತಿಯೊಂದು ಸರ್ತಿ,
ಮೊದ ಮೊದಲು ಅಂಜಿಕೆ ತಂದದ್ದು ನನ್ನ ಕೀರ್ತಿ,
ಆಮೇಲೆ ಬಿಡದೆ ಕೊಟ್ಟೆಯಲ್ಲ ಮುದ್ದಿಸುವ ಸ್ಫೂರ್ತಿ !!

ಮರೆಯದೆ ನೆನೆಯಬೇಕು ನೀನ್ನೊಂದಿಗಿನ ಆ ಕ್ಷಣ,
ಅರಿತರೆ ಆಗುವುದು ಮನದಲ್ಲೇ ಒಂತರಾ ತಲ್ಲಣ,
ಅಚ್ಚರಿ ತರುವ ಜಗಳವೇ ಸಾಮಾನ್ಯ ನಮ್ಮ ನಡುವಣ,
ಮದುವೆ ಆದರೂ ಬದಲಾಗದು ನಮ್ಮಿಬ್ಬರ ಈ ಹೆಗ್ಗುಣ !!

Wednesday, July 4, 2012

ನಾರಿ

ಓ ನನ್ನ ಪ್ರೀತಿಯ ಮದನಾರಿ.
ಇಷ್ಟ್ಯಾಕೆ ಕಾಡುತ್ತಿರುವೆ ಪ್ರತಿಸಾರಿ..
ಮರೆಯಲಾರೆ ನಿನ್ನ ಓ ನನ್ನ ಪೋರಿ...
ಬರೆದಿರುವೆನು ನಿನಗಾಗಿ ಎಷ್ಟೊಂದು ಸ್ಟೋರಿ....

ಹಾಡಿ ಹೊಗಳುವೆ ನಿನ್ನ ಮೈಸಿರಿ.
... ಹೊತ್ತಾಯಿತು ಮಲಗುವೆನು ಸಾರಿ..
ಮುದ್ದಾಡುವೆ ನಿದ್ದೆಯಲಿ ಓ ನನ್ನ ಚಕೋರಿ...
ಪಿಸುಮಾತಲಿ ಹೇಳುವೆನು ರಾಜರಾಣಿ ಸ್ಟೋರಿ....

ಹೋಗುವೆ ನಾನಿನ್ನು ಚಿತ್ತಚೋರಿ.
ಮುಂದೆಂದೂ ಸಿಗದಿರುವೆ ಎಂದೆನಿಸಿದೆ ಸಾರಿ..
ಮದುವೆಯಾಗಿ ಸುಕವಾಗಿರು ಓ ನನ್ನ ಮನಸಿರಿ...
ಮನತುಂಬಿ ಹಾಡುವೆನು,ನಿನ್ನಯ ಮ್ಯಾರೇಜ್ ಸ್ಟೋರಿ...

:- Sridhar Aithal D

Saturday, June 30, 2012

ಗೆಳೆಯರು

ಅಂಬಿಗನ ನೆನೆಯಲು ಹಲವರಿರುವರು,
ಕೆಲವರು ಹೇಳಲು ಬರೀ ಪರಿಚಯದವರು,
ಇನ್ನೂ ಹಲವರು ಆತ್ಮೀಯ ಗೆಳೆಯರವರು,
ನನ್ನ ಹೆಮ್ಮರದ ಚಿಗುರೆಲೆಯ ಕೊಂಬೆಗಳವರು !!

ಬಾಳ ಕಡಲಲಿ ತೀರದ ಬಯಕೆ ಮೂಡಿಸಿಹರು, 
ಜೊತೆ ಜೊತೆಯಲಿ ಸಾಗಿ ಬಂದಿರುವರು,
ಮುಸಿಕಿನ ಹಾರೈಕೆಯ ಆಶಾಕಿರಣಗಳು,
ನನ್ನ ಜೀವಿತದ ಸುಂದರ ಪುಷ್ಪ ಗೊಂಚಲುಗಳು !!

ಸೋಲಲ್ಲೂ ಗೆಲುವಿಗೆ ದಾರಿ ತೋರಿದವರು,
ಮನೆಯಲ್ಲೂ ನನ್ನನು ತಿದ್ದಿ ಬೆಳಸಿದವರು,
ಸದಾ ಏಳ್ಗೆಯನು ಬೆಂಬಲಿಸಿಹರು,ನನ್ನವರು
ಹೇಳಲು ಹಲವರಿಹರು ಈ ಪುಟ್ಟ ಹೃದಯದಲ್ಲಿಹರು !!

Friday, June 29, 2012

ನಮ್ಮಲ್ಲೇ ಪೈಪೋಟಿ

----------- ನಾನ ಇಲ್ಲ ನೀನಾ ??? -------------

ನಾನು ಪ್ರಥಮ ಬಂದರೆ ನೀನು ಅಪ್ರತಿಮೆ
ನಾನು ಪರೀಕ್ಷಕನಾದರೆ ನೀನು ಅಪರಿಚಿತೆ
ನಾನು ಮಾರೀಚನಾದರೆ ನೀನು ಮರೀಚಿಕೆ
ನಾನು ನರನಾದರೆ ನೀನು ನನ್ನ ನರನಾಡಿ !!

ನನ್ನ ಪ್ರೀತಿ ಮಿತವಾದರೆ ನಿನ್ನದು ಹಿತ
ನಾನು ಚಂಚಲನಾದರೆ ನೀನು ನಿಶ್ಚಲ
ನಂದು ಜಯವದರೆ ನಿನ್ನದೇ ವಿಜಯ
... ನಾನು ಅನುಭವಿಯಾದರೆ ನೀನೇ ಫಲಾನುಭವಿ !!!

ನಾನು ನೂರಾದರೆ ನೀನು ನೂರಾರು
ನಾನು ನಾನದಾರೆ ನೀನು ನೀನೆ
ಯಾಕೆ ಇಷ್ಟೊಂದು, ಇನ್ನಷ್ಟು ಮನನೊಂದು
ಒಂದಾಗೊಣವೇ ಇನ್ನಾದರೂ ನಾನು ನೀನು !!!!

ಕ್ರಿಕೆಟ್ ದೇವರು ವಾಮನ

ಜಗವ ಮೆಚ್ಚಿಪ ಜಯವ ಗಳಿಸಲು,
ವರುಷ ಕಳೆದಿದೆ ಹರುಷ ಮರೆಯಲು,
ಸರಣಿ ಶತಕ ಗಳಿಸಿದ ವೀರನೆನಲು,
ಸೋಲು ಶತಸಿದ್ದ ನೀನು ಶತಕಗಳಿಸಿರಲು !!

ನಮ್ಮ ನಾಡಿನ ಜನರ ನೆಚ್ಚಿನ ಕ್ರೀಡಾಳು
ಮರೆಯಲಾರಿಪೆವು ಆ ಹೊಡೆತದ ಭಂಗಿಗಳು,
ಮರಳು ಮನೆಗೆಂದು ಕೂಗಿ ಹೇಳಿರಲು,
ಹುರಿದುಂಬಿ ಉತ್ತರಿಸುವೆ ನೀನು ಚಲದೊಳು !!

ರಾಜ್ಯಸಭೆಯೋಳು ನಿನ್ನ ಆಗಮನ
ಬೇರೆ ಆಟಗಾರರಿಗೆ ಸಿಗದಿದ್ದ ಸನ್ಮಾನ
ನೋಡುವೆವು ವಾಮನನ ಚಾಣಾಕ್ಷತನ
ನೆಚ್ಚಿನ ಕ್ರಿಕೆಟ್ ದೇವರಿಗೆ ನನ್ನದೊಂದು ನಮನ !!

Monday, June 25, 2012

ವೃಂದಾವನ



ತರು ಲತೆಗಳು ಅಂಗಳದಲ್ಲಿ,
ಸುಮ ಅರಳಿದೆ ಕಂಗಳಲ್ಲಿ,
ಘಮ ಅಂದಿದೆ ಮಕರಂದದಲಿ,
ತನು ಮನಗಳ ಸಮ್ಮಿಲನದಲಿ !!

ತಿಳಿಯಿರಿ ಪಕ್ಕ್ಷಿಗಳ ಇಂಚರ,
ಅರಿಯಿರಿ ದುಂಬಿಗಳ ಝೇಂಕಾರ,
ಒಂದಕ್ಕಿಂತ ಒಂದು ಸುಮಧುರ,
ಹಾಡಿ ನಲಿಯುತಿದೆ ನೋಡಿರ !!

ಅರಳಿದೆ ಹೂವು ಮಂದಾರ,
ಜೊತೆಗೆ ನಿಲ್ಲುವುದೇ ಶ್ರಂಗಾರ,
ಬಣ್ಣ ಬಣ್ಣದ ಚಿಟ್ಟೆಯ ಅವತಾರ,
ಜಿಗಿದು ಹಾರುವುದು ಬಲ್ಲಿರ !!

ನಮ್ಮೀ ತೋಟದ ಸಂಪತ್ತು,
ಜಾಸ್ತಿ ಮಳೆ ಬಂದರೆ ಆಪತ್ತು,
ಸೂರ್ಯ ಚಂದ್ರರಿಗೂ ಗೊತ್ತು,
ಇದು ನಮ್ಮ ಮನೆಯ ಸೊತ್ತು !!

:- Sridhar Aithal D

Friday, June 22, 2012

ಬಾಲ್ಯದ ನೆನಪು

ಮರೆತುಹೋದ ಕ್ಷಣಗಳು
ಕಳೆದ ಬಾಲ್ಯದ ದಿನಗಳು
ಹೊಸ ಹೊಸ ಆಟಗಳು
ಮನೆಯತುಂಬ ಓಡಾಟಗಳು !!

ಊರ ತುಂಬಾ ಜಾತ್ರೆಗಳು
ಹೊಟ್ಟೆ ತುಂಬ ಊಟಗಳು
ಒಂದೇ ಎರಡೆ ಘಟನೆಗಳು
ನೆನೆದರೆ ಬರುವ ನಗುಗಳು !!

ನಾವೇ ಕಟ್ಟಿದ ನಾಟಕಗಳು
ಗೆಳೆಯರೊಂದಿನ ಶಪಥಗಳು
ನಮ್ಮ ಮದ್ಯವೇ ಯುದ್ದಗಳು
ಅಪ್ಪ ಅಮ್ಮನ ಹೊಡೆತಗಳು !!

ಅಜ್ಜ ಕೊಡುವ ನೋಟುಗಳು
ಅಜ್ಜಿ ತಿನ್ನಿಸುವ ಸಿಹಿತಿಂಡಿಗಳು
ಮತ್ತೆ ಸಿಗದ ನೆನಪುಗಳು
ನನ್ನ ಬಾಲ್ಯದ ವರುಷಗಳು !!

Wednesday, June 20, 2012

ಪ್ರೇಮ ದೀಕ್ಷೀತ

ಮನಸೋತುಹೋದೆ ನಿನ್ನ ತುಂಟ ನೋಟಕ್ಕೆ
ಕೂಗಿ ಕರೆಯುವೆ ಗುಡಿಯ ಮುಂದಿನ ತೋಟಕ್ಕೆ..
ಹಾಡಿ ಹೊಗಳುವೆ ನಮ್ಮ ಮದುರ ಸ್ನೇಹಕ್ಕೆ..
ಮನೆಯವರದೇ ತೊಂದರೆ ಸದ್ಯದ ಸಮಯಕ್ಕೆ.

ಅದೆಷ್ಟೋ ಸಾಲುಗಳು ಬರೆದೆ ನಿನ್ನ ವರ್ಣಿಸಲು..
ಕಷ್ಟ ಸಾದ್ಯ ನಿನ್ನನು ಬಣ್ಣಿಸಿ ಮತ್ತೆ ಮೆಚ್ಚಿಸಲು..
ಮರೆಯಲಾರದ ಆತುರಗಳ ಸಂಕೊಲೆಗಳವು..
ಒಂದರ ಮೇಲೊಂದು ಸುಂದರ ಕಲ್ಪನೆಗಳವು..

ಇನ್ನಾದರೂ ತಿಳಿಯದೆ ನಿನಗೆ ನನ್ನ ಆರ್ತನಾದ
ಪ್ರೇಮ ದೀಕ್ಷೆಯ ಬಿಕ್ಷುಕನ ಮನದಾಳದ ವಾದ
ಮಧುರ ಕಲ್ಪನೆಗೂ ಮಿಗಿಲಾದ ವಾಗ್ವಾದ
ಇಬ್ಬರಿಗೂ ನಿಲುಕದ ಸ್ವಾದ ಅದು ನಿರ್ವಿವಾದ

ಸರಿಯಾಗಿ ಪರೀಕ್ಷಿಸಿದ ಮೇಲಾದರೂ ಹೇಳು
ನಿನ್ನ ವಿನಃ ಇನ್ನಾರು ಕೊಡುವರು ಹೊಸ ಬಾಳು
ಕೊನೆಯಾಗಲಿ ನಮ್ಮಿಬ್ಬರ ಮನೆಯ ಗೋಳು
ಅಷ್ಟೇ ಹೇಳಿರಲು ನಾಚಿ ನೀರಾದಳಿವಳು ನನ್ನವಳು...

:-Sridhar Aithal D

Monday, June 18, 2012

ವರ್ಣನೆ

ಮುಗುಳ್ನಗು ನಿನ್ನ ಆಸ್ತಿ...
ಪ್ರೀತಿಯಲ್ಲಿ ನಾನೇ ಜಾಸ್ತಿ...
ಮನಸಿನಲ್ಲಿ ನಿಂದೆ ಕುಸ್ತಿ...
ಹೇಳೋದ್ರಲ್ಲೇ... ಒಂಥರಾ ಮಸ್ತಿ !!!

ಮಾತಿನಲ್ಲಿ ನೀನೆ ಮಹಾರಾಣಿ...
ಕನಸಿನಲ್ಲಿ ಬಂದ ತಾರಾಮಣಿ...
ಕರೆಯುವರು ನಿನ್ನ ಓ ತರುಣಿ...
ಆದರೆ ನೀ ನನ್ನ ರಮಣಿ,ಕಣ್ಮಣಿ !!!

ಮಳೆಗಾಲದಲ್ಲೆಲ್ಲಾ ನೀನೆ ಹನಿ...
ಮನೆಯಲ್ಲೆಲ್ಲಾ ನಿಂದೆ ದ್ವನಿ...
ಮರೆಯಬೇಡ ನನ್ನನು ನೀ...
ಮರುಭೂಮಿಯಲ್ಲಿ ಬಿದ್ದ ಇಬ್ಬನಿ !!!

Sunday, June 17, 2012

ಭಕ್ಷ್ಯ

ಶನಿವಾರದ ಸಂಪಿಗೆ ಇಂದ್ಯಾಕೆ ಸಪ್ಪಗೆ.
ಕೊಡು ನೀ ಒಪ್ಪಿಗೆ ತಂದಿರುವೆ ಸಜ್ಜಿಗೆ,
ಹೇಳಲು ಹಲವುಬಗೆ ಕೊಂಡಿರುವೆ ಒಟ್ಟಿಗೆ,
ಸಾಕು ಅಂತನ್ನದೆ ತಿನ್ನು ನೀ ತೆಪ್ಪಗೆ....

ಬೂಂದಿ ಕಾಳು, ಕಡ್ಲೆ ಕಾಳು ಎಲ್ಲವನ್ನು ತಿನ್ನುವೆ,
ರಾಗಿ ರೊಟ್ಟಿ ಗಟ್ಟಿ ಚಟ್ನಿ ಬೆಣ್ಣೆಯೊಂದಿಗೆ ಮುಕ್ಕುವೆ,
ಬೆಲ್ಲ ಹಾಕಿ ನೀರು ಕುಡಿದು ಮತ್ತೆ ರುಚಿಯ ಸವಿಯುವೆ,
ಒಂದು ಊಟ ತಿಂದು ನೋಡ ಮತ್ತೆ ಏನು ಹೇಳದೆ...

ಅನ್ನ ಸಾರು ಮಾಡುವಳು ನನ್ನವಳು ಮಂಜುಳಾ,
ದೊಣ್ಣೆ ಮೆಣಸು ತಿನ್ನಲು ಹಾಕುವಳು ಹಪ್ಪಳ,
ಅಬ್ಬಬ್ಬ ಹಲವುಬಗೆ ಮಾಡುವಳು ಒಬ್ಬಳೇ,
ಇಂತವಳು ಬದುಕಲಿ ಚಿರಕಾಲೆ ಸುಮಂಗಲೆ...

ಮೋಹ ಎನ್ನುವ ಮಾಯೆ

ಅಮ್ಮನ ಪ್ರೀತಿಗೆ ಕೊನೆಯಿಲ್ಲಾ...
ಅಕ್ಕನ ಅಕ್ಕರೆ ಸುಳ್ಳಲ್ಲ...
ಅಪ್ಪನ ಆಸೆರೆ ನಮಗೆಲ್ಲ..
ಕೊಟ್ಟ ಮಾತು ಮರೆತಿಲ್ಲ...

ಪ್ರೇಮ ಪಾಶವು ಬಿಗಿಯಿತಲ್ಲಾ....
ಇದು ಹೆತ್ತ ತಾಯಿಗೆ ಸಮನಲ್ಲ..
ಹೊತ್ತ ತಂದೆಗೆ ಮಿಗಿಲಿಲ್ಲ...
ಕೆಟ್ಟ ಬುದ್ದಿಯು ನನಗಿಲ್ಲ…

... ಇದು ನಮ್ಮ ನಿಮ್ಮಯ ಕಥೆಯಲ್ಲಾ...
ಹದಿ ಹರೆಯದ ಆಕರ್ಷಣೆಯು ಸರಿಯಲ್ಲ...
ಬದುಕಿ ಬಾಳುವುದೇ ಗೊತ್ತಿಲ್ಲ..
ಆತ್ಮ ಹತ್ಯೆಯೇ ಇದಕೆ ಕೊನೆಯಲ್ಲಾ...

Wednesday, May 23, 2012

ಪ್ರೇಮ ದೇವತೆ

ಬಂಗಾರದ ಹೊಳಪು ನಿನ್ನಲ್ಲೇ ಕಂಡೆ..
ಸಂಗೀತದ ಸ್ವರವು ನಿನದೇನೆ ಅಂದೆ..
ಸಿಂದೂರದ ಚೆಲುವು ಇನ್ನಿಲ್ಲ ಗೆಲುವು
ಒಂದಲ್ಲ ಎರಡಲ್ಲ ಹೇಳಲು ಹಲವು..|

ಅಪ್ಪಟ ರೀಶಿಮೆ ನಿನ್ನೆಯ ಮೈಸಿರಿ
ಕಪಟ ನೋಟವೆ ನನಗಿನ್ನು ಆಸರೆ
ಸಕಲ ಗುಣಗಳು ನಿನ್ನಲ್ಲೇ ಅಪ್ಸರೆ..
ಸೇರುವೆ ನಿನ್ನನು ಮತ್ತೆ ನೀ ಅತ್ತರೆ.... !!

ಮೊನ್ನೆಯ ತನಕವೂ ನಿಂದೇನೆ ಯೋಚನೆ...
ಕಂತೆಯ ಕೆಲಸವೂ ಮುಂದಿನ ಯಾತನೆ...
ನಿನ್ನೆಯ ಅಪ್ಪುಗೆ ಕೊಟ್ಟೆ ನೀ ಸೂಚನೆ...
ಕೆನ್ನೆಯ ತುಂಬೆಲ್ಲ ಕೊಡು ನೀ ಮಳೆಹನಿ...!!!

ಬಡತನ

ದೂರ ಸರಿ ನೀ ದುಷ್ಟ, ಬಡತನವೆ ನಮಗಿಷ್ಟ..
ಆಗದಿರು ರೋಗಿಷ್ಟ, ದುಡಿಯುವುದು ಬಲು ಕಷ್ಟ..
ಕರೆಯುವರು ಅನಿಷ್ಟ, ಅದೊಂತರಾ ವಿಶಿಷ್ಟ...
ನನ್ನಾಕೆಗೆ ಇದೇ ಇಷ್ಟ, ತಪ್ಪಿತು ನನಗೆ ಆ ಕಷ್ಟ...!!

ದೊಡ್ಡವರ ಆಡಂಬರ ನೋಡಲು ಸುಂದರ..
ಮಾಡುವರು ಶ್ರಂಗಾರ ಒಂದುದಿನದ ಸಡಗರ..
ನಮ್ಮವರ ಗಂಡಾಂತರ ಹೇಳಲು ಬಂದಿರಾ..
ಆಗುವುದು ಒಂತರಹ ಇನ್ನಿಲ್ಲದ ಮುಜುಗರಾ...!!

ಅಲ್ಪರು ನಾವೆಂದು ಸ್ವಲ್ಪವೂ ಬೇಸರಿಸು..
ದನಿಕನು ತಾನೆಂದು ದಿನದಿನವು ನೀ ಸ್ಮರಿಸು..
ಸಿರಿ ಲಕ್ಷ್ಮಿ ತಾ ಒಲಿದು ಬಂದಿರಲು ಬಲು ಸೊಗಸು..
ಆಗುವುದು ಬಾಳೆಲ್ಲ ಆನಂದದ ಹೊಂಗನಸು...!!

ಬೇಡುವೆ ನಿನ್ನೇ

-----------ನೊಂದ ಜೀವ-------------
ಒಮ್ಮೆಯೂ ಆಗದ ಬೇಸರ ಇಂದ್ಯಾಕೋ ಆಗಿದೆ...
ನಿದ್ದೆಯೂ ಬಾರದೆ ಮನವೆಲ್ಲಾ ನೊಂದಿದೆ..
ಸುತ್ತಲೂ ಕತ್ತಲೂ ಆದರೂ ಭಯವಿದೆ...
ಅತ್ತರೂ ಕರಗದ ನೋವೊಂದು ನನಗಿದೆ..
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

ಅಮ್ಮನ ಅಕ್ಕರೆ ಬೇಕೆಂದು ಅನಿಸಿದೆ...
ಸುಮ್ಮನೆ ಕರೆಯುವೆ ಬೇಸರ ಪಡದಿರೆ..
ಮನದಲಿ ತುಂಬಿದ ಆಸೆಯ ಹೇಳುವೆ...
ಮತ್ತೆ ಮತ್ತೆ ಕಾಡಿದೆ ನನ್ನ ನೋವು ನಗುತಿದೆ..
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

ಸುಖವ ಕಾಣುವ ಮನಸಿದೆ ದುಃಖ ದೂರ ಹೋಗದೆ...
ಜಯವು ಸಿಗುವ ಹೊತ್ತಿಗೆ ಮತ್ತೆ ಸೋಲು ಬಂದಿದೆ..
ಶಕ್ತಿ ಮೀರಿ ಚಲಿಸುವೆ ಮುಂದೆ ದಾರಿ ಕಾಣದೆ...
ಧೈರ್ಯ ಬರದೆ ಹೋಗಿದೆ ಮುಂದೆ ಏನೋ ಕಾದಿದೆ..
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

ಹಲವು ಬಾರಿ ಬೇಡಿದೆ ಕರುಣೆ ತೋರು ದೇವಿಯೇ..
ನಿನ್ನ ಮಗನು ಬಂದಿಪೆ ಕ್ಷಮಿಸಿ ಹರಿಸು ತಾಯಿಯೇ...
ಸ್ವಲ್ಪ ನಾನು ಕುಗ್ಗಿದೆ ಮತ್ತೆ ಶಿಕ್ಷೆ ಕೊಡುವಿಯೇ...
ತಿದ್ದು ನನ್ನ ಮನವನು ಮುಂದೆ ಹೀಗೆ ಮಾಡೆನು...
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

Monday, May 14, 2012

ಶೃಂಗಾರ

ಒಮ್ಮೆ ನೋಡಬಯಸಿದೆ ನಿನ್ನ ನಾ ಸಿಂಗರಿಸಿ..

ಮತ್ತೊಮ್ಮೆ ನೋಡಬಯಸಿದೆ ನಿನ್ನ ನಾ ಅನುಸರಿಸಿ..!

ಒಮ್ಮೊಮ್ಮೆ ಹಾಡಬಯಸಿದೆ ನಿನ್ನ ನಾ ಹೆಸರಿಸಿ..

ಮುಂದೊಮ್ಮೆ ಆಗುವೆ ನೀ ಯನ್ನ ಪಟ್ಟದರಸಿ...!!
Below 4 lines,, means a lot...

ಅಂದು ಹೇಳಿದ್ದೆ ನಿನಗಾಗಿ ನಾನು,

ಇಂದು ಹೇಳ್ತಿನಿ ನನ್ನಲ್ಲಿ ನೀನು,

ಮುಂದೆ ಹೋಗ್ತಿನಿ ನಿಂತಲ್ಲೇ ನಾನು,

ಬಂದೆ ಬರ್ತೀಯ ನನ್ನವಳು ನೀನು.!!!
ಅಂದು ಹೇಳ್ತಾ ಇದ್ದರು.. "ಶಂಖದಿಂದ ಬಂದರೆ ತೀರ್ಥ..."

ಇಂದು ಹೇಳ್ತಾ ಇದ್ದಾರೆ.. "ಶುಕ್ರವಾರ ಬಂದರೆ ತೀರ್ಥ..."

ನನ್ನ ಈ ಕನಸು

ಅಮೃತ ಸಿಂಚನ ನಿನ್ನ ಈ ಚುಂಬನ..
ವಿಸ್ತ್ರತ ಜೀವನ ನಮ್ಮ ಈ ಚಿಂತನ..
ಸರ್ವತ್ರ ಸಾದನ ಮೌನವೇ ಮಾಪನ..
ಸಮಗ್ರ ಬದುಕಿಗೆ ಶಾಂತಿಯೇ ಕಾರಣ!!

ಬಣ್ಣದ ಮಾತಿಗೆ ಬಿದ್ದೆ ನೀ ಸುಮ್ಮನೆ..
ಮೌನದ ಮಾತಲ್ಲೇ ಕದ್ದೆ ನೀ ನನ್ನನೆ..
ಸತತ ಸೋಲಲು ಬೆಂಬಲಿಸಿದೆ ನೀ ನನ್ನನೆ..
ಮತ್ತೆ ಮತ್ತೆ ಆಗುತಿದೆ ನಿನ್ನದೇ ಯೋಚನೆ!!

ಕದವ ತೆರೆಯಲು ಕೂಗುತಿದೆ ಮನಸ್ಸು..
ಹದವಾಗಿ ಬೇಯುತಿದೆ ಪ್ರೀತಿಯ ಹವಿಸ್ಸು ..
ಸದಾ ನಿನಗಾಗಿ ಮೀಸಲು ನನ್ನ ಈ ಕನಸು ..
ಮಿಂಚಿ ಮರೆಯಾಗಿ ಹೋಗಲು ಬರಬಾರದೇ ಮುನಿಸು!!

:-Sridhar Aithal D