Monday, May 14, 2012

ನನ್ನ ಈ ಕನಸು

ಅಮೃತ ಸಿಂಚನ ನಿನ್ನ ಈ ಚುಂಬನ..
ವಿಸ್ತ್ರತ ಜೀವನ ನಮ್ಮ ಈ ಚಿಂತನ..
ಸರ್ವತ್ರ ಸಾದನ ಮೌನವೇ ಮಾಪನ..
ಸಮಗ್ರ ಬದುಕಿಗೆ ಶಾಂತಿಯೇ ಕಾರಣ!!

ಬಣ್ಣದ ಮಾತಿಗೆ ಬಿದ್ದೆ ನೀ ಸುಮ್ಮನೆ..
ಮೌನದ ಮಾತಲ್ಲೇ ಕದ್ದೆ ನೀ ನನ್ನನೆ..
ಸತತ ಸೋಲಲು ಬೆಂಬಲಿಸಿದೆ ನೀ ನನ್ನನೆ..
ಮತ್ತೆ ಮತ್ತೆ ಆಗುತಿದೆ ನಿನ್ನದೇ ಯೋಚನೆ!!

ಕದವ ತೆರೆಯಲು ಕೂಗುತಿದೆ ಮನಸ್ಸು..
ಹದವಾಗಿ ಬೇಯುತಿದೆ ಪ್ರೀತಿಯ ಹವಿಸ್ಸು ..
ಸದಾ ನಿನಗಾಗಿ ಮೀಸಲು ನನ್ನ ಈ ಕನಸು ..
ಮಿಂಚಿ ಮರೆಯಾಗಿ ಹೋಗಲು ಬರಬಾರದೇ ಮುನಿಸು!!

:-Sridhar Aithal D

No comments:

Post a Comment