Sunday, August 12, 2012

ಬಡತನ



ಅದು ಸುಮ್ಮನೆ ಹೇಳಿದರೆ ಮನುಜನಿಗೆ ಅರ್ಥವಾಗದು,
ನೊಂದು ಬಂದವನಿಗೆ ಅದನ್ನು ತಡೆದು ಕೊಳ್ಳಲಾಗದು,
ಹಸಿವು ಅರ್ಧ ಬೆಂದ ಜೀವನದಲ್ಲಿ ಉಸಿರಾಗುವುದು,
ಆಸೆಯೆಂಬ ಕನಸಿನ ಗೂಪುರವ ತನ್ನಲ್ಲೇ ಕಟ್ಟುವುದು !!

ಅದು ಬಂದಾಗ ರೋಗ ರುಜಿನವು ಕೂಡ ಅಂಜುವುದು,
ಸಾವು ನೋವುಗಳ ಜೊತೆ ಅನುದಿನ ಹೋರಾಡುವುದು,
ನೆಮ್ಮದಿ ಅದರ ಇರುವಿಕೆಗೆ ಕೊನೆಗೂ ತಿಳಿಯದಾಗದು,
ಮನಸೆಂಬ ನಾಕವನ್ನೇ ಎಂದೋ ದಾಟಿ ಬಂದಿರುವುದು !!   

ಧೈರ್ಯ ಸಾಹಸಗಳಿಗೆ ಅದುವೇ ಪ್ರಥಮ ಪಾಠಶಾಲೆ ,
ಪ್ರಯತ್ನಮಾಡಿ ಗೆದ್ದರೆ ಕಳೆಯುವುದು ಕಷ್ಟಗಳ ಸಂಕೋಲೆ,
ಸೋತವರು ಸೇರುವರು ಜನಸಾಮಾನ್ಯರ ಗುಂಪಿನಲ್ಲೇ,
ಕರೆಯೋ ಇದನ್ನ "ಬಡತನ" ಸಿರಿವಂತನಿಗೆ ಸಿಗದ ಓಲೆ !!

No comments:

Post a Comment