ನನ್ನ ಅಂತರಂಗದ ಕೂಗು ಎಲ್ಲಿ ಕೇಳಿಸುವುದೋ,
ಭಾವ ತರಂಗಗಳಲ್ಲಿ ಯಾಕೆ ನುಸುಳುವುದೋ,
ಜೀವನಕ್ಕೆ ಹೊಸ ಅರ್ಥವ ಕಲ್ಪಿಸಲಿರುವುದೋ,
ಸ್ವಾರ್ಥ ಚಿಂತನೆಗೆ ತಿಲಾಂಜಲಿಯಾಗುವುದೋ ?
ವಿಚಾರ ವಿಮರ್ಶೆಗೆ ಸಿಲುಕಿಕೊಂಡಿರುವುದೇ,
ಆಚಾರ ಪದ್ದತಿಯನ್ನು ಮೀರಿ ನಿಂತಿರುವುದೇ,
ನೊಂದ ಜೀವಕೆ ಸಂತ್ವಾನವ ಸುರಿಸುತಲಿರುವುದೇ,
ಹೇಳು ನನ್ನ ಒಳಮನಸ್ಸೇ ಏನು ಸದಾ ಚಿಂತಿಸುತ್ತಲಿರುವೆ ?
ತುಂತುರು ಮಳೆಯಂತೆ ಹೊಯ್ಯುತಿರುವುದೇ,
ಅತ್ತರು ಕಾಣಿಸದಂತೆ ಮರೆಮಾಚುತಲಿರುವುದೇ,
ಸಪ್ತ ಸ್ವರಗಳಲ್ಲಿ ನಾದ ಹೊಮ್ಮಿ ವಿಲೀನವಾಗುವುದೇ,
ಹೇಗೆ ನಿನ್ನ ನಾ ಅರಿಯಲಿ ಹೇಳು, "ಓ ನನ್ನ ಮನಸೇ" ?
ಭಾವ ತರಂಗಗಳಲ್ಲಿ ಯಾಕೆ ನುಸುಳುವುದೋ,
ಜೀವನಕ್ಕೆ ಹೊಸ ಅರ್ಥವ ಕಲ್ಪಿಸಲಿರುವುದೋ,
ಸ್ವಾರ್ಥ ಚಿಂತನೆಗೆ ತಿಲಾಂಜಲಿಯಾಗುವುದೋ ?
ವಿಚಾರ ವಿಮರ್ಶೆಗೆ ಸಿಲುಕಿಕೊಂಡಿರುವುದೇ,
ಆಚಾರ ಪದ್ದತಿಯನ್ನು ಮೀರಿ ನಿಂತಿರುವುದೇ,
ನೊಂದ ಜೀವಕೆ ಸಂತ್ವಾನವ ಸುರಿಸುತಲಿರುವುದೇ,
ಹೇಳು ನನ್ನ ಒಳಮನಸ್ಸೇ ಏನು ಸದಾ ಚಿಂತಿಸುತ್ತಲಿರುವೆ ?
ತುಂತುರು ಮಳೆಯಂತೆ ಹೊಯ್ಯುತಿರುವುದೇ,
ಅತ್ತರು ಕಾಣಿಸದಂತೆ ಮರೆಮಾಚುತಲಿರುವುದೇ,
ಸಪ್ತ ಸ್ವರಗಳಲ್ಲಿ ನಾದ ಹೊಮ್ಮಿ ವಿಲೀನವಾಗುವುದೇ,
ಹೇಗೆ ನಿನ್ನ ನಾ ಅರಿಯಲಿ ಹೇಳು, "ಓ ನನ್ನ ಮನಸೇ" ?
No comments:
Post a Comment