Wednesday, March 27, 2013

ಜನುಮದಿನ


 
 
 
ಇನಿಯನ ಜೀವನದ ಪ್ರತಿ ಕ್ಷಣದಲಿ
ಸುಖದಲ್ಲಾಗಲಿ ದುಃಖದಲ್ಲಾಗಲಿ
ನಗುವಲ್ಲಾಗಲಿ ಅಳುವಲ್ಲಾಗಲಿ
ಪಾಲು ಪಡೆಯುವವಳು ನೀನಲ್ಲವೇ !!!

ಪತಿಯ ಬದುಕಿನ ಪ್ರತಿ ಹೆಜ್ಜೆಯಲಿ
ಜೊತೆಯಾಗಿ ಪ್ರಿಯ ಸಖಿಯಾಗಿ
ಹೆಗಲಾಗಿ ಬಾಳಿನ ಗುರಿಯಾಗಿ
ಕಾಲು ಇಟ್ಟವಳು ನೀನೆಯಲ್ಲವೇ !!!

ಕಷ್ಟಗಳು ಹನಿಯಾಗಿ ನಿನ್ನ ಕಣ್ಣಿನಲಿ
ಕಾಣಿಸದಾದವು ನನ್ನ ಮೆಚ್ಚಿಸಲು
ಹೇಳಲಾರದನು ಮರೆಯಾಗಿಸಲು
ಮೆತ್ತಗೆ ನಗುವವಳು ನೀನಲ್ಲವೇ !!!

ಸಂಸಾರದ ಜವಾಬ್ದಾರಿಯ ಹೊತ್ತು
ಸಂಬಂಧದ ಬೆಸುಗೆಯನು ಕೊಟ್ಟು
ಸಂತೋಷವ ಉಣಬಡಿಸುವ ನಿನಗೆ
ಮರಳಿ ಬರುತಲಿರಲಿ ಈ "ಜನುಮದಿನ" !!!

Friday, March 22, 2013

ಮತದಾನ

ಮತ್ತೇ ಬಂದಿದೆ ಸಾರ್ವತ್ರಿಕ ಮತದಾನ
ಪುಂಡ ಪುಕಾರಿಗಳಿಗದುವೆ ಬಲಪ್ರದರ್ಶನ
ಜಿದ್ದಾ ಜಿದ್ದಿನ ಹೋರಾಟಕ್ಕಾಗಿ ಕ್ಷಣಗಣನ !!!

ಪಕ್ಷದಿಂದ ಪಕ್ಷಕ್ಕೆ ಜಿಗಿವುದು ಸರ್ವೇಸಾಮಾನ್ಯ
ಕರಡು ನೀತಿ ಸಂಹಿತೆ ಹೇಳಲು ಮಾತ್ರ ಸೀಮಿತ
ಅಶ್ವ ಕರೀದಿಗೆ ಬೇಕಿಲ್ಲ ಕಿಂಚಿತ್ತೂ ಮೌಲ್ಯ ಮಾಪನ !!!

ಅಪ್ಪನಿಂದ ಮಗನಿಗೆ ಸಿಗುವುದು ಪಕ್ಷದ ಹಸ್ತಾಂತರ 
ಕಣ್ಣುಮುಚ್ಚಿ ಬೆಂಬಲಿಸುವುದು ಮೂಡ ಕಾರ್ಯಕರ್ತಾರ
ಇನ್ನೆಲ್ಲಿ ಸಾಗುವುದು ಇಂತಹ ನಮ್ಮ ರಾಜಕೀಯ ಭವಿಷ್ಯ !!!

ಜಾತಿ ಜಾತಿಗಳಿಗೊಂದು ಪಕ್ಷ ಇದನ್ನ ಕೇಳುವವರಾರು
ಹೆಂಡ ಸರಾಯಿ ಕೊಟ್ಟರೆ ಸಾಕು ಮರೆಯಲಾರರಿವರು ?
ಮುಂದೆ ಏಷ್ಟೇ ದುಡ್ಡು ಕೊಳ್ಳೆಹೊಡೆದರು ಕೊರಗುವವರಾರು  !!!

ಮಂತ್ರಿಗಿರಿಗಾಗಿ ನಡೆಯುವುದು ಒಳಗೊಳಗೆ ಕರಾಮತ್ತು
ಮಠಾಧಿಪತಿಗಳು ಸಹ ಹಿಡಿಯುವರು ನೀಚರ ವಕಾಲತ್ತು
ದುಡ್ಡು ಜಾಸ್ತಿ ಇದ್ದರೆ ಸಾಕು ಒಲಿಯುವುದು ಅಪ್ಪನಮನೆಯ ಸ್ವತ್ತು !!!


ಮೈಸೂರ

ನಿತ್ಯ ಬದುಕಿನ ಜಂಜಾಟದಲಿ
ವಾರಾಂತ್ಯದ ಈ ಬಿಡುವಿನಲಿ
ಚಾಮುಂಡಿಯ  ಸಾನಿಧ್ಯದಲಿ
ಮೈಸೂರಿನ ಆಕರ್ಷಣೆಯಲಿ
ಅರಮನೆಯ ರಾಜಾಂಗಣದಲಿ
ಮೈಮರೆತಿದ್ದೆ ನಾ ಆನಂದದಲಿ!!

ನಿಮಿಶಾಂಭೆಯ ದರ್ಶನವನ್ನು
ರಂಗನಾಥಸ್ವಾಮಿ ಭಂಗಿಯನ್ನು
ನಂದಿಯ ವಿಹಂಗಮ ನೋಟವನ್ನು
ಶ್ರೀಕಂಠೇಶ್ವರನ ಆಶೀರ್ವಾದವನ್ನು
ಕಾವೇರಿ ನೀರಾವರಿ ಭೂಮಿಯನ್ನು 
ಸವಿಯುತ್ತಿದ್ದೆ ನಾ ಸಾಂಸ್ಕೃತಿಕ ನಗರವನ್ನು !!