Thursday, December 6, 2012

ಮುಪ್ಪು




ಬಾಳ ಇಳಿ ಸಂಜೆಯಲಿ
ಮೂಡಿದೊಂದೊಂದು ಕನಸು
ಮನಸಿನ ಸುಪ್ತ ಭಾವನೆಯ
ಅಲ್ಲೋಲ ಕಲ್ಲೋಲ ಗೊಳಿಸಿತೇಕೆ ?

ತುಂಬಿದ ಮನೆಗೆ ಕತ್ತರಿ
ನುಂಗಲಾರದ ತುತ್ತು ತಟ್ಟೆಯಲಿ
ಆಳುವ ನನ್ನೀ ಕೈಗಳೇ ಅಂದೇಕೆ
ಅಳುವ ಕಣ್ಣಿನ ಮೇಲೆ ನರ್ತಿಸುತಿದೆ ?

ಆರದ ಆಸ್ತಿಯ ಬಯಸದೆ
ಕೊಟ್ಟಮೆಲೂ, ತೀರದ ಆಯುಷ್ಯಕ್ಕೆ
ಜರಿದು ಮೂಲೆಗುಂಪಾಗಿಸುವ ಪ್ರಯತ್ನಕೆ
ಹಿರಿಯ ಜೀವವದು ಕುಗ್ಗಿ ನೊಂದಿತೇಕೆ ?

ಮುಪ್ಪಿನ ಬಂದನಕ್ಕೆ ನೆಚ್ಚಿ
ಮಕ್ಕಳ ಪ್ರೀತಿಯ ಆರೈಕೆಯಲಿ
ಉಳಿದ ನಾಲ್ಕುದಿನ ಕಳೆಯುವ
ಸದ್ಬಯಕೆಗೆ ತಿಲಾಂಜಲಿ ಬಿಟ್ಟಿರಬೇಕೆ ?

No comments:

Post a Comment