Monday, June 25, 2012

ವೃಂದಾವನ



ತರು ಲತೆಗಳು ಅಂಗಳದಲ್ಲಿ,
ಸುಮ ಅರಳಿದೆ ಕಂಗಳಲ್ಲಿ,
ಘಮ ಅಂದಿದೆ ಮಕರಂದದಲಿ,
ತನು ಮನಗಳ ಸಮ್ಮಿಲನದಲಿ !!

ತಿಳಿಯಿರಿ ಪಕ್ಕ್ಷಿಗಳ ಇಂಚರ,
ಅರಿಯಿರಿ ದುಂಬಿಗಳ ಝೇಂಕಾರ,
ಒಂದಕ್ಕಿಂತ ಒಂದು ಸುಮಧುರ,
ಹಾಡಿ ನಲಿಯುತಿದೆ ನೋಡಿರ !!

ಅರಳಿದೆ ಹೂವು ಮಂದಾರ,
ಜೊತೆಗೆ ನಿಲ್ಲುವುದೇ ಶ್ರಂಗಾರ,
ಬಣ್ಣ ಬಣ್ಣದ ಚಿಟ್ಟೆಯ ಅವತಾರ,
ಜಿಗಿದು ಹಾರುವುದು ಬಲ್ಲಿರ !!

ನಮ್ಮೀ ತೋಟದ ಸಂಪತ್ತು,
ಜಾಸ್ತಿ ಮಳೆ ಬಂದರೆ ಆಪತ್ತು,
ಸೂರ್ಯ ಚಂದ್ರರಿಗೂ ಗೊತ್ತು,
ಇದು ನಮ್ಮ ಮನೆಯ ಸೊತ್ತು !!

:- Sridhar Aithal D

No comments:

Post a Comment