Thursday, May 29, 2014

ಆಮೇಲೆ

ಒಮ್ಮೆ ಬಯಸಿದ್ದು
ನಲ್ಲೆಯ ಪ್ರೀತಿ
ಆಮೇಲೆ ನಂದು ಬರೀ ಪಚೀತಿ.....

ಒಮ್ಮೆ ನೋಡಿದ್ದು
ಹುಡುಗಿಯ ನೋಟ
ಆಮೇಲೆ ತಿಳಿಯಿತು ಅದರ ಹಿಂದಿನ ಕಪಟ ...

ಒಮ್ಮೆ ಕೇಳಿದ್ದೆ
ಆಕೆಯ ಸುಶ್ರಾವ್ಯ ಹಾಡು
ಆಮೇಲೆ ಬೈಗುಳ ಕೇಳೋದೇ ನನ್ನ ಪಾಡು ...

---ಶ್ರೀಧರ ಐತಾಳ ದೇವಳಿ

Tuesday, May 27, 2014

ಭಾಗ್ಯದ ಸಿರಿ



ಬಯಕೆಯ ತೋಟದ ಬಳ್ಳಿಯೇ
ನೀ ಬೆಳೆಯಬೇಕಾಗಿದೆ ಅಲ್ಲಿಯೇ
ನಮ್ಮಯ ನವ ಭಾಗ್ಯದ ಸಿರಿಯೇ
ನೀ ಎಂದು ಕಾಲಿಡುವೆಯೊ ಈ ಭುವಿಗೆ ?

ಕ್ಷಣ ಕ್ಷಣಕೂ ಆ ಸುದಿನವ ಲೆಕ್ಕಿಸುವೆ 
ಮನದಲ್ಲೇ ಏನೇನೋ ಯೋಚಿಸುವೆ
ನಿನ್ನ ಆಗಮನಕ್ಕಾಗಿ ನಾ ಕಾದಿರುವೆ
ಪ್ರೀತಿಯ ಆಲಿಂಗನವ ಬಯಸಿರುವೆ !!

ಅಮ್ಮನ ಉದರದಿ ನೀ ಮಲಗಿರುವೆ
ನವಮಾಸವ ಅಲ್ಲೇ ಕಳೆಯಲಿರುವೆ
ಪ್ರತಿ ನಿಮಿಷವೂ ನಿನ್ನನು ನೆನಪಿಸುವೆ
ಆಕೆಗೆ ಕಚಗುಳಿ ನೀನಲ್ಲಿ ಕೊಡುತಿರುವೆ !!

ಬಯಕೆಯ ತೋಟದ ಬಳ್ಳಿಯೇ
ನೀ ಬೆಳೆಯಬೇಕಾಗಿದೆ ಅಲ್ಲಿಯೇ
ನಮ್ಮಯ ನವ ಭಾಗ್ಯದ ಸಿರಿಯೇ
ನೀ ಎಂದು ಕಾಲಿಡುವೆಯೊ ಈ ಭುವಿಗೆ ?

--ಶ್ರೀಧರ ಐತಾಳ ದೇವಳಿ

Tuesday, May 13, 2014

ಬಂತಪ್ಪೋ ಬಂತು ಚುನಾವಣೆ ಬಂತು

ಬಂತಪ್ಪೋ ಬಂತು ಚುನಾವಣೆ ಬಂತು
ತಂತಪ್ಪೋ ತಂತು ಕಳ್ಳಹಣ ಹೊರ ತಂತು !!

ಕುಮಾರಣ್ಣ ಅತ್ತಾಯಿತು
ಹೆಂಡತಿ ಮಕ್ಕಳು ನಿಂತಾಯಿತು
ಗೌಡ್ರ ಹೆಂಡತಿಯೊಬ್ರೆ ಮರೆತುಹೊದ್ರು !!

ಯೆಡ್ಡಿ ರಾಮುಲು ಬಂದ್ರು
ಬಿಜೆಪಿ ಗುಂಪಿಗೆ ಆನೆಬಲ ತಂದ್ರು
ಮೋದಿ ಹವಾ ಒಂದೇ ಮಾತಾಗಿತು !!

ರಮ್ಯಾ ಗೀತಾ ನಿಂತ್ರು
ಸಿನಿಮಾ ನಾಟಕ ಶುರು ಮಾಡಿದ್ರು
ಉಪ್ಪಿ ಕೂಡ ಬಂದು ಕುಣಿದು ಹೋದರು !!

ಸೋನಿಯಾ ಪಾಪು ಬಂತು
ಪ್ರಧಾನಿ ನಾನೇ ಆಗೋದಂತೂ
ಟಿವಿ ಮುಂದೆ ಮಾತಾಡಿ ಸೋತು ಬಿಡ್ತು !!

ಕೇಜ್ರಿ ಸರ್ಕಸ್ ಮುಗಿತು
ತ್ರತೀಯ ರಂಗ ಮುಳುಗಿತು
ದೇಶಕ್ಕೊಂದು ಹೊಸ ಮೋಡಿ ಬೇಕಾಗಿದೆ !!

ಜನ ನೀವು ಮರಿ ಬೇಡಿ
ಓಟು ಮಾತ್ರ ತಪ್ಪದೆ ಹಾಕಿ ಬಿಡಿ
ದೇಶಕ್ಕೊಂದು ಹೊಸ ನಾಯಕನ್ ತಂದ್ ಬಿಡಿ !!

ನೋಟ




ಹಲವು ನೋಟವ ಕಂಡ ನನಗೆ
ನಿನ್ನ ಒಲವು ತಿಳಿಯಲಾರದೆ

ನಿನ್ನ ನಗುವ ನಯನದ ಹೊಳಪದು
ನಕ್ಕಾಗ ಸುಕೋಮಲ
ನೇತ್ರಗಳನು ಒಮ್ಮೆಲೇ
ನಾಚಿ ಮುದುಡಿಸಿದ
ತಾವರೆಯ ಎಸಳಿನಂತೆ
ಆಕರ್ಷಿಸುತಿವುದು ನನ್ನನೇ !!

ನೀ ನುಡಿದ ಮುತ್ತಿನ ಮಾತದುವೆ
ಸಪ್ತ ಲೋಕದಲ್ಲಿಯೂ
ಕೇಳರಿಯದ ಶಬ್ದಗಳೋ
ಎಂಬಂತೆ ಭಾಸವಾಗಿ
ನಿನ್ನ ಸಾಂಗತ್ಯವನ್ನು
ಮೊದಲು ಪಡೆಯ ಬಯಸಿದೆ !!

ಶ್ರೀಧರ ಐತಾಳ ದೇವಳಿ