Saturday, July 28, 2012

ಪ್ರಯಾಣ

ರಘು ಎಂದೂ ಇಷ್ಟೊಂದು ವಿಚಲಿತನಾಗಿರಲಿಲ್ಲ, ಅವನ ಕಾರ್ ಡ್ರೈವಿಂಗ್ ಅದೊಂದು ಕೌಶಲ್ಯ, ಅಲ್ಲಿ ಅವಿರತ ಶ್ರದ್ದೆ ಇತ್ತು, ಪ್ರಯಾಣಿಕರ ಜೀವದ ಮೌಲ್ಯ ಮುಖ್ಯವಾಗಿತ್ತು. ರಘು ಒಮ್ಮೆಯೂ ಶಿಸ್ತನ್ನ ಉಲ್ಲಂಗಿಸಿದವನಲ್ಲ. ಕಾನೂನು ಇರುವುದು ಪಾಲನೆಗಾಗಿ ಅನ್ನುವಷ್ಟು ತತ್ವ ಸಿದ್ದಾಂತಕ್ಕೆ ಜೋತು ಬಿದ್ದಿದ್ದ. ಸದಾ ತಾನು ಇನ್ನೊಬ್ಬರಿಗೆ ಮಾರ್ಗದರ್ಶನವಾಗಬೇಕು ಅನ್ನುವಷ್ಟು ಮುಂದೆ ಸಾಗಿದ್ದ. ಅವನ ಜೀವನ ಶೈಲಿ ಈ ಘಟ್ಟಕ್ಕೆ ಬರಲು ತಂದೆಯೇ ಸ್ಪೂರ್ತಿ. ದೇಶದ ರಕ್ಷಣೆಗೆ ತನ್ನ ಜೀವ ಕೊಟ್ಟ ಮಹಾನ್ ದೇಶ ಸೇವಕ. ಅಂದು ಯುದ್ದಕ್ಕೆ ಕರೆ ಬಂದಿತ್ತು, ಮೇಜರ್ ರಾಜೇಶ್ ತನ್ನ ಸಂಸಾರದ ಜೊತೆಗೆ ಕೊಡಗು ನೋಡಲು ಸಿದ್ದರಾಗಿದ್ದರು. ರಘು ಇನ್ನು ಪ್ರಾಥಮಿಕ ಶಾಲೆಗೇ ಹೋಗುವ ಹುಡುಗ ಅವನಿಗೆ ತನ್ನ ರಜೆಯ ಸವಿಯುವ ಕಾತರ. ತಂದೆಗೆ ನಾವು ಹೋಗುವ ಸ್ತಳಗಳ ಕುರಿತು ಅದಾಗಾಲೆ ಹಲವುಬಾರಿ ಕೇಳಿ ತಿಳಿದಿದ್ದ.. ಅಚಾನಕವಾಗಿ ಬಂದ ತಂತಿ ನೋಡಿ ರಾಜೇಶ್ ಧಂಗಾದರು. ಅವರ ಸೇವೆ ಸೈನ್ಯಕ್ಕೆ ತುರ್ತಾಗಿ ಅವಶ್ಯಕವಾಗಿತ್ತು. ದೇಶಸೇವೆಗೆ ಮುಡಿಪಾಗಿಟ್ಟ ಜೀವ, ಧ್ಯೇಯ ಸಾದನೆಗೆ ಪ್ರಾಮುಖ್ಯತೆ ಕೊಟ್ಟಿದ್ದರು. ತಮ್ಮ ಬಹು ನಿರೀಕ್ಷಿತ ಪ್ರವಾಸ ಮೊಟಕು ಗೊಳಿಸಿ ದೇಶ ಸೇವೆಗೆ ಹೋದವರು. ರಘು ಅಳುವನ್ನು ನೋಡಿ ಮತ್ತೆ ಇನ್ನೊಮ್ಮೆ ನಿನ್ನ ಜೊತೆ ಕಂಡಿತ ಹೋಗೋಣವೆಂದು ಆಶ್ವಾಸನೆ ಕೊಟ್ಟಿದ್ದರು. ಹೆಂಡತಿಯ ಭಯವ ನೋಡಿ ಅವರಿಗೆ ಆಶ್ಚರ್ಯವಾಗಿತ್ತು. ಆಕೆಯ ಜೊತೆ ಹತ್ತು ನಿಮಿಷ ಮಾತಾಡಿ.. ಪ್ರೀತಿಯ ಸ್ಪರ್ಶದಿಂದ ಕುಶಿಗೊಳಿಸಿದ್ದರು.

ರಾಜೇಶ್ ಸಂಸಾರ ಊರಿಗೆ ಆದರ್ಶಪ್ರಾಯವಾಗಿತ್ತು. ರಾಜೇಶ್ ವರ್ಷಕ್ಕೊಮ್ಮೆ ಬಂದಾಗ ಊರಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗೆ ಊಟಕ್ಕೆ ಕರೆಯೋದನ್ನ ಮರೆಯುತ್ತಿರಲಿಲ್ಲ. ರಾಜೇಶ್ ಗೂ ಅಷ್ಟೇ ಪ್ರೀತಿ ಊರಜನರ ಮೇಲೆ. ಪ್ರತಿ ಬಾರಿ ಬಂದಾಗ ಯಲ್ಲರ ಜೊತೆ ಸಮಯ ಕಳೆಯುತ್ತಿದ್ದ. ಓಡಿ ಆಡಿದ ಊರು, ತಿದ್ದಿ ಬೆಳೆಸಿದ ಶಾಲೆ, ಸುತ್ತ ಮುತ್ತಲಿನ ಪರಿಸರ ಅವನಿಗೆ ಸದಾ ಪ್ರಿಯವಾಗಿತ್ತು. ತನ್ನ ನಿವ್ರತ್ತಿ ಬದುಕಿನ ಬಗ್ಗೆಯೂ ಸಾಕಷ್ಟು ಕನಸು ಕಂಡಿದ್ದ. ಊರನ್ನ ದಾಟಿ ವೇಗವಾಗಿ ಚಲಿಸುತ್ತಿದ್ದ ಬಸ್ ಬಂದು ತಲುಪಿದ್ದು ರೈಲ್ವೆ ಸ್ಟೇಷನ್ ಗೆ. ಅಲ್ಲಿಂದ ಬೆಂಗಳೂರಿಗೆ ಬಂದು ವಿಮಾನ ನಿಲ್ದಾಣಕ್ಕೆ ಹೋಗುವುದರಲ್ಲಿ ಅವನ ಮನ್ನಸ್ಸು ವಿಚಲಿತ ಗೊಂಡಿತ್ತು. ಮನೆಯನ್ನು ಬಿಟ್ಟು ಹೊರಟಾಗ ರಘು ಕೋಪ ಗೊಂಡಿದ್ದ ಅವನಿಗೆ ಮಾತನಾಡಲು ಸಿಟ್ಟು ಬಂದಿತ್ತು. ಅಪ್ಪ ನನಗೆ ಮೋಸ ಮಾಡಿದರು ಅಂತ ಪಕ್ಕದಮನೆಯಲ್ಲಿ ದೂರು ಕೊಟ್ಟಿದ್ದ. ಅವನ ದುರನ್ನ ಪಡೆದು ವಕೀಲರು ವಿಚಾರಣೆಗೆ ಆಗಮಿಸಿದ್ದರು. ವಿಷಯ ತಿಳಿದು ವಿಷಾದ ವ್ಯಕ್ತ ಪಡಿಸಿದ್ದರು.

ರಾಜೇಶ್ ಸೈನ್ಯದ ಕ್ಯಾಂಪ್ ತಲುಪಿದಾಗ ಅವನಿಗಾಗಿ ಸಾಕಷ್ಟು ಸಂದೇಶಗಳು ಬಂದಿತ್ತು. ಪ್ರತಿಯೊಂದು ಸಂದೆಶಕ್ಕು ಉತ್ತರ ಕೊಟ್ಟು ಅವನು ಸಾಕಾಗಿದ್ದ. ಪ್ರಯಾಣದ ಬೇಗೆ ಅವನನ್ನು ಕುಸಿದು ಕೂಡಿಸಿತ್ತು. ರಾಜೇಶ್ ಗೆ ಸಹಾಯಕನಾಗಿ ಮಂಜುನಾಥ್ ಹೆಸರುವಾಸಿಯಾಗಿದ್ದ. ರಾಜೇಶ್ ನ ಪ್ರತಿಯೊಂದು ಕೆಲೆಸವನ್ನು ತಾ ಕಲಿತಿದ್ದ. ಅದಾಗಲೇ ಶತ್ರು ಸೈನ್ಯ ತುಂಬಾ ಹತ್ತಿರ ಬಂದಿತ್ತು. ಮಂಜುನಾಥ್ ತಾನು ಮಾಡುತಿದ್ದ ಪ್ರತಿಯೊಂದು ಕೆಲೆಸವನ್ನು ರಾಜೇಶ್ ಗೆ ವರದಿ ಒಪ್ಪಿಸಿ, ಮುಂದಿನ ಆದೇಶಕ್ಕೆ ಕಾಯುತ್ತಿರುವ ಬಗ್ಗೆ ಹೇಳುತ್ತಾನೆ. ರಾಜೇಶ್ ಗೆ ಒಮ್ಮೆ ಜೀವ ಕೈಗೆ ಬಂದ ಅನುಭವ. ಶತ್ರು ಸೈನ್ಯ ಅದಾಗಲೇ ನಮ್ಮ ಬಳಿ ಬಂದಾಗಿತ್ತು. ಮೇಲಿನಿಂದ ಇನ್ನು ಆದೇಶ ಬರಲಿಲ್ಲ ಅನ್ನೋದೇ ನೋವಿನ ಸಂಗತಿ. ಮಂಜುನಾಥ್ ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿರಬೇಕು. ಕೂಡಲೇ ರಾಜೇಶ್ ಗೆ ಹೆಡ್ ಆಫೀಸಿಗೆ ಹೋಗಿ ವಿಶ್ರಾಂತಿ ಪಡೆಯಲು ವಿನಂತಿಸಿದ. ರಾಜೇಶ್ ತನ್ನ ಅಸಹಾಯಕತೆ ಕೆಲೆಸದಲ್ಲಿ ಎಂದೂ ತೋರಿಸಿದವನಲ್ಲ. ತಾನು ಚುರುಕಾಗಿ ಏನು ಆಗಿಲ್ಲ ಅನ್ನುವಂತೆ ನಟಿಸಿದ. ಮೇಲಿನ ಅದಿಕಾರಿಗಳಿಗೆ ವಿಷಯ ತಿಳಿಸಿ ಆದೇಶವನ್ನು ಪಡೆದು, ಸದಾ ಸೈನ್ಯಕ್ಕೆ ಆದೇಶ ಕೊಟ್ಟ. ಹಗಲು ರಾತ್ರಿಯನ್ನದೆ ನಿದ್ದೆ ಕೆಟ್ಟು ಕೆಲೆಸ ಮಾಡಬೇಕಾಯಿತು. ಯುದ್ದ ಅಂತಿಮವಾಗಿ ವಿಜಯಲಕ್ಷ್ಮಿ ಬಂದಿದ್ದಳು. ರಾಜೇಶ್ ಸೈನ್ಯದ ತುರ್ತು ಆಸ್ಪತ್ರೆಯಲ್ಲಿ ಬಂದು ಸೇರುತ್ತಾನೆ. ಅವನಿಗೆ ವಿಪರೀತ ಜ್ವರ ಬಾದಿಸಿತ್ತು. ಮರುದಿನ ಪ್ರಜ್ಞೆಯನ್ನು ಕಳೆದುಕೊಂಡು ಮಲಗಿದ್ದ ವಿಷಯ ತಂತಿ ಮುಖೇನ ರಘು ಕೈ ಸೇರುತ್ತೆ. ಅಪ್ಪನಿಗೆ ಹುಷಾರಿಲ್ಲ ಅಂತೆ ಅನ್ನೋದರಲ್ಲೇ ಅಲ್ಲಿ ರಾಜೇಶ್ ನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಘು ತಾಯಿ ಜೊತೆ ಹೊರಡಲು ಸಿದ್ದರಾದಾಗ, ಪಕ್ಕದಮನೆ ವಕೀಲರು ಬಂದು ವಿಷಯ ಹೇಳುತ್ತಾರೆ. ರಘು ಮಹಡಿಯೇ ತನ್ನ ಮೇಲೆ ಬಿದ್ದಂತೆ ಅಳುತ್ತಾನೆ. ತಾಯಿ ಅರೆ ಪ್ರಜ್ನಾವಸ್ಥೆಯಲ್ಲೇ ೨ ತಿಂಗಳು ಹಾಸಿಗೆ ಹಿಡಿಯುತ್ತಾಳೆ. ರಘು ೨ ತಿಂಗಳೊಳಗೆ ತಂದೆ ತಾಯಿಯನ್ನು ಕಳೆದು ಕೊಂಡಿದ್ದ. ಊರ ಜನರ ಆರೈಕೆಯಿಂದನೆ ಅವನು ದೊಡ್ಡವನಾಗಿದ್ದ. ತಂದೆಯಂತೆ ಕೆಲೆಸದಲ್ಲಿ ಶ್ರದ್ದೆ ಇರಬೇಕು ಅನ್ನೋದನ್ನ ಕಲಿತು ಬಿಟ್ಟಿದ್ದ.

ವಿದ್ಯಾಭ್ಯಾಸ ಮೊಟಕು ಗೊಳಿಸಿ ಸ್ವಯಂ ಉದ್ಯೋಗ ಪ್ರಾರಂಬಿಸುವ ಕನಸು ಕಂಡಿದ್ದ. ಅದರಂತೆ ಒಂದು ಕಾರ್ ಕೊಂಡು ಹೆಸರುವಾಸಿಯಾಗಿದ್ದ. ರಘು ಯಾವತ್ತು ಪಡದ ನೋವು ಇಂದು ಅವನ ಕಾಡಿತ್ತು, ಕಾರಣ ಅವರ ಪ್ರಯಾಣ. ಹಿಂದಿನ ಸೀಟ್ ನಲ್ಲಿ ಚಿಕ್ಕ ಸಂಸಾರ ಕೊಡಗು ನೋಡ ಹೊರಟಿತ್ತು. ತಾನು ಚಿಕ್ಕವನಾಗಿದ್ದಾಗ ನಡೆದ ಪ್ರತಿಯೊಂದು ಘಟನೆ ಅವನ ಮನ ಪಟಲವನ್ನು ದಾಟಿ ಸಾಗಿತ್ತು. ಹಿಂದಿನ ಸೀಟ್ ನಲ್ಲಿ ಕೂತ ಮಹೇಶ್ ಕಾರಿನ ವೇಗವನ್ನು ಗಮನಿಸಿ ಸಂಶಯ ಪಡುತ್ತಾನೆ. ಇಲ್ಲಿಯ ತನಕ ತಾನು ಹೆಮ್ಮೆ ಪಟ್ಟ ಚಾಲಕ ಇವನೇನಾ ಅನ್ನುವಷ್ಟು ಗೊಂದಲನಾಗಿದ್ದ. ಕೂಡಲೇ ರಘುವಿಗೆ ಕಾರ್ ಪಕ್ಕಕ್ಕೆ ನಿಲ್ಲಿಸಲು ಸೂಚನೆ ಕೊಟ್ಟ. ರಘು ತಾನು ಏನು ಮಾಡುತ್ತಿರುವೆ ಅನ್ನೋದನ್ನೇ ಮರೆತು ಹೋಗಿದ್ದ. ಅದೃಷ್ಟವಶಾತ್ ಅವರ ಕಾರ್ ಸುರಕ್ಷಿತವಾಗಿ ನಿಂತಿತ್ತು. ಮಹೇಶ್ ರಘುವನ್ನ ಹೊರಗಡೆ ಕರೆದು ವಿಚಾರಿಸುತ್ತಾನೆ. ರಘು ತನಗೇನು ಆಗಲಿಲ್ಲ ಎನ್ನುವಂತೆ ನಟಿಸುತ್ತಾನೆ. ಎಷ್ಟಾದರೂ ರಾಜೇಶ್ ನ ಮಗ ತಾನೇ. ಕೊನೆಗೆ ಮಹೇಶ್ ನ ಆಪ್ತತೆಗೆ ಮನಸೋತು ತನ್ನೆಲ್ಲ ಕಥೆಯನ್ನು ಹೇಳುತ್ತಾನೆ. ಮಹೇಶ್ ಮಾನಸಿಕ ತಜ್ಞ. ಪೂರ್ಣ ಕಥೆಯನ್ನು ಕೇಳಿ ರಘುವಿನ ಮೇಲೆ ಅಂತ ಕರುಣೆ ಹೆಚ್ಚಾಗುತ್ತೆ. ರಘುವನ್ನು ಪಕ್ಕಕ್ಕೆ ಕೂರಿಸಿ ತಾನು ಡ್ರೈವ್ ಮಾಡುತ್ತಾನೆ. ಮಹೇಶ್ ರಘು ತನ್ನ ತಮ್ಮನೇನೋ ಅನ್ನುವಷ್ಟು ಸಲಿಗೆ ಕೊಟ್ಟು ಕೊಡಗಿನ ಸವಿಯನ್ನ ಸವಿಯುತ್ತಾರೆ. ರಘು ಕೇವಲ ಡ್ರೈವರ್ ಆಗಿರಲಿಲ್ಲ ಮಹೇಶ್ ನ ಮೆಚ್ಚಿನ ಗೆಳೆಯನಾಗುತ್ತಾನೆ.

ರಘು ಒಂದು ಕಾಲ್ಪನಿಕ ವ್ಯಕ್ತ್ತಿ, ರಘುವಿನಂತೆ ಸಾವಿರಾರು ನೊಂದ ಜೀವ ನಮ್ಮ ಕಣ್ಣು ಮುಂದಿದ್ದಾರೆ. ಆದರೆ ಮಹೇಶ್ ನಂತಹ ಕೆಲವೇ ಮಂದಿ ಕಾಣಸಿಗುತ್ತಾರೆ. ಮಹೇಶ್ ತಾನು ಅಷ್ಟೊಂದು ದೊಡ್ಡ ಪಧವಿಯಲ್ಲಿದ್ದರು ರಘುವನ್ನು ಕೆಲೆಸದ ಆಳಿನಂತೆ ನೋಡಲಿಲ್ಲ. ಅವನಲ್ಲಿನ ಅಂತ ಕರಣ ಜಾಗ್ರತವಾಗಿತ್ತು. ಪ್ರತಿಯೊಬ್ಬರಿಗೂ ಸ್ಪಂದಿಸುವ ಮನೋಬಾವ ತುಂಬಿತ್ತು. ಪ್ರಿಯರೆ ನಮ್ಮ ಸುತ್ತ ಮುತ್ತ ಅದೆಷ್ಟೋ ಜನರಿದ್ದಾರೆ. ಬರಿ ಪ್ರಿಯವಾದ ಒಂದೆರೆಡು ಮಾತು ನಮ್ಮನ್ನು ಬಡವನಾಗಿಸೋಲ್ಲ. ಸಮಯ ಸಂದರ್ಬ ಸಿಕ್ಕಾಗ ಮೂಕನಂತೆ ಕುಳಿತಿರುವ ಬದಲು ಉಭಯ ಕುಶಲೋಪರಿ ಮಾತನಾಡೋಣ. ಸದಾ ಜೀವನವೆಂಬ ಪ್ರಯಾಣವನ್ನು ಆನಂದಿಸಿ, ಬದುಕುವುದು ಎರೆಡೆ ದಿನವನ್ನಾದರೂ ಅದನ್ನ ಸವಿಯೋಣ ಬನ್ನಿ.


ಈ ಸಾಲುಗಳನ್ನು ಬರೆಯುವಾಗ ನನಗೆ ನೆನಪಾದ ಅದೆಷ್ಟೋ ಮಂದಿ ಡ್ರೈವರ್ಗಳು, ಅದರಲ್ಲೂ ಸದಾ ನೆನೆಪಾಗುವೋರು ಡ್ರೈವರ್ "ಆನಂದ್" ಮತ್ತು "ದೀಪು".

No comments:

Post a Comment