ದೂರ ಸರಿ ನೀ ದುಷ್ಟ, ಬಡತನವೆ ನಮಗಿಷ್ಟ..
ಆಗದಿರು ರೋಗಿಷ್ಟ, ದುಡಿಯುವುದು ಬಲು ಕಷ್ಟ..
ಕರೆಯುವರು ಅನಿಷ್ಟ, ಅದೊಂತರಾ ವಿಶಿಷ್ಟ...
ನನ್ನಾಕೆಗೆ ಇದೇ ಇಷ್ಟ, ತಪ್ಪಿತು ನನಗೆ ಆ ಕಷ್ಟ...!!
ದೊಡ್ಡವರ ಆಡಂಬರ ನೋಡಲು ಸುಂದರ..
ಮಾಡುವರು ಶ್ರಂಗಾರ ಒಂದುದಿನದ ಸಡಗರ..
ನಮ್ಮವರ ಗಂಡಾಂತರ ಹೇಳಲು ಬಂದಿರಾ..
ಆಗುವುದು ಒಂತರಹ ಇನ್ನಿಲ್ಲದ ಮುಜುಗರಾ...!!
ಅಲ್ಪರು ನಾವೆಂದು ಸ್ವಲ್ಪವೂ ಬೇಸರಿಸು..
ದನಿಕನು ತಾನೆಂದು ದಿನದಿನವು ನೀ ಸ್ಮರಿಸು..
ಸಿರಿ ಲಕ್ಷ್ಮಿ ತಾ ಒಲಿದು ಬಂದಿರಲು ಬಲು ಸೊಗಸು..
ಆಗುವುದು ಬಾಳೆಲ್ಲ ಆನಂದದ ಹೊಂಗನಸು...!!
ಆಗದಿರು ರೋಗಿಷ್ಟ, ದುಡಿಯುವುದು ಬಲು ಕಷ್ಟ..
ಕರೆಯುವರು ಅನಿಷ್ಟ, ಅದೊಂತರಾ ವಿಶಿಷ್ಟ...
ನನ್ನಾಕೆಗೆ ಇದೇ ಇಷ್ಟ, ತಪ್ಪಿತು ನನಗೆ ಆ ಕಷ್ಟ...!!
ದೊಡ್ಡವರ ಆಡಂಬರ ನೋಡಲು ಸುಂದರ..
ಮಾಡುವರು ಶ್ರಂಗಾರ ಒಂದುದಿನದ ಸಡಗರ..
ನಮ್ಮವರ ಗಂಡಾಂತರ ಹೇಳಲು ಬಂದಿರಾ..
ಆಗುವುದು ಒಂತರಹ ಇನ್ನಿಲ್ಲದ ಮುಜುಗರಾ...!!
ಅಲ್ಪರು ನಾವೆಂದು ಸ್ವಲ್ಪವೂ ಬೇಸರಿಸು..
ದನಿಕನು ತಾನೆಂದು ದಿನದಿನವು ನೀ ಸ್ಮರಿಸು..
ಸಿರಿ ಲಕ್ಷ್ಮಿ ತಾ ಒಲಿದು ಬಂದಿರಲು ಬಲು ಸೊಗಸು..
ಆಗುವುದು ಬಾಳೆಲ್ಲ ಆನಂದದ ಹೊಂಗನಸು...!!
No comments:
Post a Comment