ಚಮತ್ಕಾರ ಏನು ಇಲ್ಲಾ
ನನ್ನದು ಸಹಜತನ
ನಿಮ್ಮೆಲ್ಲರ ನಡುವೆಯೂ ನನಗೆ
ಇನ್ನೂ ಕಾಡುತಿದೆ ಒಂಟಿತನ !!
ಮನೆಯ ಬಾಗಿಲು ತೆಗೆದಾಗ
ಸುತ್ತಲೂ ಕತ್ತಲು
ಮನೆಯಾಕೆ ಊರಲ್ಲಿದ್ದರೆ
ಯಾರಿರುವರು ದೀಪ ಹಚ್ಚಲು !!
ಊಟದ ಕೋಣೆಗೆ ಹೋದಾಗ
ಎಲ್ಲೆಲ್ಲೂ ಬಟ್ಟಲು
ಮನೆಕೆಲೆಸ ಮಾಡದಿದ್ದರೆ
ಆಗುವುದು ಅಡಿಗೆಮನೆ ಬಚ್ಚಲು !!
ಕಸವ ತೆಗೆಯಲು ಹೋದರೆ
ಮನೆತುಂಬಾ ಬಾಟಿಲು
ಹೆಂಡತಿ ತವರಲ್ಲಿದ್ದರೆ
ಗಂಡನಿಗಿದೆ ನೂರಾರು ಸವಾಲು !!
--ಶ್ರೀಧರ ಐತಾಳ ದೇವಳಿ
ಅವಳಿಲ್ಲದ ಮನೆ ಸಹಸ್ರ ಅಪರಾಧಗಳ ಕಾರ್ಯಾಗಾರ.
ReplyDeleteಹಿಂದಿರುಗಿದ ಮೇಲೆ ತಿಪ್ಪೆ ಸಾರಿಸುವ ಫಜೀತಿ ನಮಗೆ! ಹ್ಹ ಹ್ಹ ಹ್ಹ ಸೂಪರ್ರೂ...
ಹೌದು ಯಾರಿಗೆ ಹೇಳೋಣ ನಮ್ಮ ಪ್ರಾಬ್ಲೆಮ್ಮು
ReplyDelete