ರವಿಯ ಸುಂದರ ರಶ್ಮಿಗೆ
ಅರಳಿ ನಿಂತ ಮಲ್ಲಿಗೆಯು
ಬಳಿಗೆ ಬಂದ ಚಿಟ್ಟೆಯಲಿ
ಬೇಡಿತು ತನ್ನ ಇಂಗಿತವ
ಪರಮಾತ್ಮನ ಪಾದಸೇರುವ !!
ಬೇಡಿದ ವರವ ಕೊಡುವ
ಜಗದೀಶ್ವರನ ಕೃಪೆಯಿಂದ
ಭಕ್ತನ ಶ್ರದ್ದೆಯ ಸಾಧನವಾಗಿ
ಹೂವ ಬಯಕೆಯು ತೀರಿತು
ದೇವರ ದೇವನ ಶಿರವ ಸೇರಿತು !!
ಪರಮ ಭಕ್ತರಿಗೆ ಕೊಡಲು
ಹೂವು ಪ್ರಸಾದದ ತಟ್ಟೆಗೆ
ಕ್ಷಣ ಮಾತ್ರದಿ ತೆಗೆಯಲ್ಪಟ್ಟಿತ್ತು
ಪೂಜಾರಿಯ ಮನವ ಸೆಳೆದ
ಸುಂದರ ತರುಣಿಗದುವೆ ಲಭಿಸಿತು !!
-- ಶ್ರೀಧರ ಐತಾಳ ದೇವಳಿ
No comments:
Post a Comment