ನಿನ್ನ ನವಿರಾದ ಮೇಲ್ತುಟಿ
ಅಂಚಿನಲಿ ನೀರಾಗಿ ಕಾದಿದ್ದೆ
ಎಂದು ನನ್ನ ಮಧುರ ಸಿಹಿ
ನಿನ್ನ ಇನಿಯನಿಗೆ ಹಂಚಲೆಂದು
ಅವನಲ್ಲಿ ಆಸೆಯ ವ್ರದ್ದಿಸಲೆಂದು !!
ಅವಸರದಿ ನೀಯನ್ನ ವರಸಿ ಬಿಟ್ಟೆ
ಗೊಂದಲದಿ ನಿನ್ನ ಕರವಸ್ತ್ರಕ್ಕೆ
ನಾ ಸೆರೆಯಾಗಿ ಸೋತು ಬಿಟ್ಟೆ
ನಾನಿರದ ನಿನ್ನ ತುಟಿ ಅಂಚಿಗೆ
ಬಣ್ಣ ಹಚ್ಚಿ ನನ್ನ ನೀ ಮರೆತು ಬಿಟ್ಟೆ !!
---ಶ್ರೀಧರ ಐತಾಳ ದೇವಳಿ
ಚಿತ್ರಕ್ರಪೆ : ಅಂತರ್ಜಾಲ
( ವರಸಿ = ದ್ರವ ವಸ್ತುವನ್ನ ಆ ಸ್ಥಳದಿಂದ ತೆಗೆಯುವುದು )
No comments:
Post a Comment