ಹಿಂದೆ ಕಷ್ಟಪಟ್ಟು ಬೆವರುಸುರಿಸಿ ದುಡಿದು
ಮನೆಯನ್ನ ಸಾಗಿಸುತ್ತಿದ್ದರು
ಇವಾಗ ಕಷ್ಟಕೊಟ್ಟು ಅವರಿಂದಲೇ ದುಡಿದು
ಮನೆಯಿಂದ ಸಾಗಿಸುತ್ತಿದ್ದಾರೆ...
ಹಿಂದೆ ದೇಹಶ್ರಮವನ್ನ ಮರೆಯಲು ಕುಡಿದು
ಜೀವನವನ್ನು ನಡೆಸುತ್ತಿದ್ದರು
ಇವಾಗ ವಯಸ್ಸಿಗೆ ಮನಸೋಯಿಚ್ಚೆ ಕುಡಿದು
ಜೀವವನ್ನೇ ಕಡೆಗಣಿಸುತ್ತಿದ್ದಾರೆ...
ಹಿಂದೆ ಕಾನೂನು ಇತಿಹಾಸವನ್ನು ಕಲಿತು
ರಾಜಕೀಯಕ್ಕೆ ಬರುತ್ತಿದ್ದರು
ಇವಾಗ ಜನರ ಮನಸ್ತಿತಿಯನ್ನು ಕಲಿತು
ರಾಜಕೀಯ ಮಾಡುತಿದ್ದಾರೆ....
ನೀವೇನಂತೀರಿ ???
--ಶ್ರೀಧರ ಐತಾಳ ದೇವಳಿ
ಅವರೇ ಇಂದಿನ ವಿಪಾರ್ಯಾಸವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರ.
ReplyDelete