ಎಲ್ಲೆಂದು ಹುಡುಕಲಿ ನಿನ್ನ
ಬರಿ ಕನಸಲ್ಲೇ ಕಾಡುತಿರುವೆ ಯನ್ನ
ಕೊಡಬಾರದೇ ಮುನ್ಸೂಚನೆ ನೀ ಬರುವ ಮುನ್ನ !!
ಕಲ್ಲೆಂದು ಕರೆದರು ನನ್ನ
ಹೃದಯ ವೇದನೆಯ ಪಟ್ಟಿತ್ತು ಚಿನ್ನ
ಕೂಡಬಾರದೇ ನೀ ಇಂದಾದರೂ ನನ್ನ ಪ್ರೀತಿಯನ್ನ !!
ಇನ್ನೆಂದು ಸೇರುವಿಯೇ ನನ್ನನ್ನ
ನೀ ನನ್ನ ಹೃದಯಕ್ಕೆ ಇಟ್ಟೆಯಲ್ಲ ಕನ್ನ
ಕೆಡಬಾರದು ನಿನ್ನ ವಿನಃ ನಾನು ಹೃದಯ ಪ್ರೀತಿ ಸಂಪನ್ನ !!
--ಶ್ರೀಧರ ಐತಾಳ ದೇವಳಿ
No comments:
Post a Comment