Monday, December 30, 2013

ಆಮ್ ಆದ್ಮಿ



ಚುನಾವಣೆಯಲ್ಲಿ ಕಾಂಗ್ರೆಸ್ಸ್ ದ್ವೇಷ
ಅಧಿಕಾರಕ್ಕೆ ಬರಲು ಅದೇ ಕಾಂಗ್ರೆಸ್ಸ್ ಸಖ್ಯ
ಎಲ್ಲಿದೆ ನಿಮಗೆ ನೈತಿಕತೆ
ಗದ್ದುಗೆ ಪಡೆಯಲು ಮಾಡಿದ ಸಾಹಸಕತೆ ??

ಸದ್ದಿಲ್ಲದೇ ವಿದೇಶದಿಂದ ಹರಿದು ಬಂತು
ಕಪ್ಪೋ ಬಿಳುಪಿನ ರಾಶಿ ಹಣ
ಇಂದಲ್ಲ ನಾಳೆಗೆ ಕಾದಿದೆ ನಿಮ್ಮಯ ಹೊಸ ಹಗರಣ !!

ಹೆಸರು ಪಡೆಯಲು ಬೇಕಾಗಿತ್ತು ಅಣ್ಣನ ಕೃಪೆ
ಹೋರಾಟದ ಹೆಸರಿನಲ್ಲಿ
ನಡೆಯಿತು ಹೊಸ ರಾಜಕೀಯ ಪಕ್ಷದ ನೀಚ ಅರಾಜಕತೆ !!

ಬಡವನ ಹೆಸರಲಿ ಬೇಕಾಗಿತ್ತೆ ಬಂಡಾಯ
ಅಹಂಕಾರದ ಗುಂಪಿಗೆ
ಅವಶ್ಯಕವಾಗಿತ್ತು ಅಧಿಕಾರದ ಆಸೆಯ ರಾಜಕೀಯ ಜಯ !!

-- ಶ್ರೀಧರ ಐತಾಳ ದೇವಳಿ

2 comments:

  1. ನಾಳೆ ಬೆಳಗು ಹರಿದರೆ ಕ್ರಾಂತಿ ಆಗಿ ಹೋಗುತ್ತದೆ ಎನ್ನುವ ಭ್ರಮೆ ನಮ್ಮಲ್ಲೂ ಇರಬಾರದು ಸಾರ್. ಯಾಕೆಂದರೆ, ಈ ಹಿಂದೆಯೂ ಅಲ್ಲಲ್ಲಿ ಸಂಪೂರ್ಣ ಬದಲಾವಣೆ ಬಯಸಿ, ರಾಜಕೀಯ ಪಕ್ಷಗಳು ಹುಟ್ಟಿಕೊಂಡಿದ್ದವು. ಅಸ್ಸಾಂ ಗಣ ಪರಿಷತ್ ಈಗ ಎಲ್ಲಿದೆ ಎನ್ನುವುದೇ ಒಂದು ಪ್ರಶ್ನೆ.
    ಒಳ್ಳೆಯದೇ ಆಗಲಿ, ಪೊರಾಕೆ ಗುಡಿಸಿ ಹಾಕಲಿ.

    ReplyDelete
  2. ನಿಜ ಕಾದು ನೋಡುವ..

    ReplyDelete