Saturday, May 25, 2013

ಯಾರರಿಯರು ಸ್ವಾಮೀ

ಕಾವೇರಿ ನಾಮಧೇಯ
ಬೆಂಗಳೂರಿಗರ ಜೀವಜಲ
ಕಾರ್ಪೋರೇಶನ್ ಕೊಳ
ಯಾರರಿಯರು ಸ್ವಾಮೀ ಇದರ ಮೂಲ ?

ಉದ್ಯಾನ ನಗರಿಯ ಗರಿ
ಕಸದ ತೊಟ್ಟಿ ವಿಲೇವಾರಿ ಪರಿ
ಸರ್ವನಾಶವಾಗುತಿದೆ ಸ್ವಾಸ್ತ್ಯದ ಸಿರಿ
ಇನ್ನೆಲ್ಲಿದೆ ಸ್ವಾಮೀ ಇದಕೆ ಪರಿಹಾರದ ಗುರಿ ?

ತಲೆಯತ್ತುತ್ತಿದೆ  ಬಹುಮಹಡಿ
ಬೆಲೆಯೇರಿದೆ ಪ್ರತಿ ಮನೆಕೊಠಡಿ
ಐಟಿ ಬಿಟಿ ವಿನಃ ಬದುಕು ಬಲು ದುಸ್ತರ
ಹೇಗಿರುವುದು ಸ್ವಾಮೀ ಸಾಮಾನ್ಯರ ದಿನಚರಿ ?

1 comment:

  1. ಇಂದಿನ ಕಟು ವಾಸ್ತವದ ಚಿತ್ರಣ :(

    ReplyDelete