ಗೆದ್ದೇ ಗೆಲ್ಲುವೆಯಂಬ ವಿಶ್ವಾಸ
ಮಣ್ಣಾಗಿ ಹೋಗಿತಲ್ಲಾ !
ಪಕ್ಷ ಕಟ್ಟುವ ಘೋಷಣೆ ಮಾಡಿದ್ದು
ತಪ್ಪಾಗಿ ಹೋಯಿತಲ್ಲಾ !!
ಗೆದ್ದಾಗ ಗದ್ದುಗೆ ಏರಿದ್ದು ಏಕಾಗಿ
ಗಳಿಸಿದ್ದು ತಮಗಾಗಿ !
ಮನೆ ಮಂದಿಯ ಸಿರಿವಂತಿಕೆಗಾಗಿ
ಆಸ್ತಿಪಾಸ್ತಿಗಳ ವೃದ್ದಿಗಾಗಿ !!
ಮಾಡಿದ್ದು ಅನಾಚಾರ ಹೇಳಲಸಾದ್ಯ
ರಾಜಕಾರಣ ಹಳಿಸಿತು !
ಮರೆಯಲಸಾದ್ಯ ರಾಜ್ಯಜನತೆ ಇದನು
ವಿನಾಕಾರಣದ ಕಚ್ಚಾಟವ !!
ಹೊಸ ಪಡೆಯ ಕಟ್ಟಿದ್ದು ತಪ್ಪಾಯಿತು
ಕಾಂಚಾಣ ಬರಿದಾಯಿತು !
ಭ್ರಷ್ಟರ ಗುಂಪಿನ ನಾಯಕನಿಗೆನಾಯಿತು
ಸನ್ಯಾಸ ಬಂದು ಸಮೀಪಿಸಿತು !!
ತಪ್ಪು ದಾರಿಯಲಿ ನಡೆದು ಗದ್ದುಗೆ ಏರಲು ಹಾರ ಸಾಹಸ ಮಾಡಿದ ವೀರನಿದೆ ಸಿಕ್ಕಿದ್ದು ತೆಂಗಿನ ಕಾಯಲ್ಲ, ಬರೀ ಚಿಪ್ಪೇ...
ReplyDeleteಇಲ್ಲಿನ ನಿಮ್ಮ ಪ್ರತಿ ಸಾಳಲ್ಲೂ ಅವರ ಆತ್ಮ ಚರಿತ್ರೆಯ ಕರಾಳ ಮುಖವಿದೆ.
http://badari-poems.blogspot.in