ಗೆಳತಿ ನೀನು ಸನಿಹ ಬಂದು
ನನ್ನ ಜೀವಕಾದೆ ಆಸರೆ
ಒಡತಿ ನೀನು ಆಜನ್ಮ ಬಂಧು
ನಿನ್ನ ಮನಕಾದೆ ಕೈಸೆರೆ !!
ಬರುವ ನನ್ನ ಕೋಪ ತಡೆಯಲು
ನಿನ್ನ ನಗುವಿನ ಅಲೆಯು
ಒಡನೆ ಕಂಡು ತಡೆಯದಾದೆನು
ನನ್ನ ನಗುವಿನ ಪಾಳಿಯು !!
ಹಲವು ಚಿಂತೆಯೂ ನನ್ನ ಕಾಡಿ
ಹೆಚ್ಚಿತು ಮನದ ಬೇಗೆಯು
ಒಲವು ನಿನ್ನದು ಬಂತು ನೋಡಿ
ತಣಿದು ತಂದಿತು ಬೆಸುಗೆಯ !!
ಮರೆತೇ ನಾನು ಚಿಂತೆಯನ್ನೇ
ನಿನ್ನ ಪ್ರೀತಿಯ ಬಲೆಯಲಿ
ಚಿಮ್ಮುವುದು ಹೊಸ ಕಾಂತಿಯನ್ನೇ
ನಿನ್ನ ಕ್ಷಣಿಕ ಮಮತೆಯಲಿ !!
--ಶ್ರೀಧರ ಐತಾಳ ದೇವಳಿ
ಈ ನಡುವೆ ನಾನು ಓದಿದ ಆತ್ಮೀಯ ದಾಂಪತ್ಯ ಗೀತೆ ಇದು.
ReplyDeleteಧನ್ಯವಾದ. ನಿಮ್ಮ ಮೆಚ್ಚುಗೆಯೇ ನನಗೆ ಸಾಧನೆಯ ಸಂಬ್ರಮ
ReplyDelete