ತಂಪಾದ ತಂಗಾಳಿಯ ವಾತಾವರಣ
ಉದರದಲ್ಲಿ ತಿನ್ನುವ ಆಸೆಯ ಅವತರಣ
ತ್ವರಿತ ತಿಂಡಿಗೆ ಮನದಲ್ಲಿ ಬಯಕೆಯ ಹೂರಣ
ಮನೆಮುಂದೆ ನಿಂತಿರುವ ಅಂಗಡಿಯೇ ಇದಕೆಲ್ಲ ಕಾರಣ !
ಸಿಹಿಯ ಸ್ವಾದವನ್ನು ಅನುಭವಿಸಿ
ನೀರಿನ ರೂಪವನ್ನು ಮರೆಯಾಗಿಸಿ
ಖಾರದ ಘಾಟಿನಿಂದ ಅವತರಿಸಿ
ಪಾನಿಪುರಿ ನಾಮದಿ ಹೆಸರುವಾಸಿ !
ಪೂರಿಯ ಜೊತೆ ಖಾರದ ಸಮ್ಮಿಶ್ರಣ
ತಟ್ಟೆಯ ಮೇಲೆ ಮಸಾಲೆಯ ನರ್ತನ
ನೀರುಳ್ಳಿ ಟೊಮೇಟೊಗೂ ಆಮಂತ್ರಣ
ಅಲ್ಲಿಯೇ ಈ ಮಸಾಲಪುರಿಯ ಜನನ !
ಒಂದೇ ಎರೆಡೆ ತಿಂಡಿ ತಿನಿಸುಗಳು
ಪೇಟೆಯ ಮಂದಿಯ ನಿತ್ಯ ಖಾದ್ಯಗಳು
ಕೇಳಿಸದು ಇವರಿಗೆ ವೈದ್ಯನ ವಾದ್ಯಗಳು
ಸಂಜೆಯಾಗುತ್ತಲೇ ಕಾಡುವ ಈ ಸಮಸ್ಯೆಗಳು !!
!! ನೀವೇನಂತೀರಿ ?
No comments:
Post a Comment