Saturday, August 10, 2013

ತ್ವರಿತ ತಿಂಡಿ


ತಂಪಾದ ತಂಗಾಳಿಯ ವಾತಾವರಣ
ಉದರದಲ್ಲಿ ತಿನ್ನುವ ಆಸೆಯ ಅವತರಣ  
ತ್ವರಿತ ತಿಂಡಿಗೆ ಮನದಲ್ಲಿ ಬಯಕೆಯ ಹೂರಣ
ಮನೆಮುಂದೆ ನಿಂತಿರುವ ಅಂಗಡಿಯೇ ಇದಕೆಲ್ಲ ಕಾರಣ !

ಸಿಹಿಯ ಸ್ವಾದವನ್ನು ಅನುಭವಿಸಿ
ನೀರಿನ ರೂಪವನ್ನು ಮರೆಯಾಗಿಸಿ
ಖಾರದ ಘಾಟಿನಿಂದ ಅವತರಿಸಿ
ಪಾನಿಪುರಿ ನಾಮದಿ ಹೆಸರುವಾಸಿ !

ಪೂರಿಯ ಜೊತೆ ಖಾರದ ಸಮ್ಮಿಶ್ರಣ
ತಟ್ಟೆಯ ಮೇಲೆ ಮಸಾಲೆಯ ನರ್ತನ
ನೀರುಳ್ಳಿ ಟೊಮೇಟೊಗೂ ಆಮಂತ್ರಣ
ಅಲ್ಲಿಯೇ ಈ ಮಸಾಲಪುರಿಯ ಜನನ !

ಒಂದೇ ಎರೆಡೆ ತಿಂಡಿ ತಿನಿಸುಗಳು
ಪೇಟೆಯ ಮಂದಿಯ ನಿತ್ಯ ಖಾದ್ಯಗಳು
ಕೇಳಿಸದು ಇವರಿಗೆ ವೈದ್ಯನ ವಾದ್ಯಗಳು
ಸಂಜೆಯಾಗುತ್ತಲೇ ಕಾಡುವ ಈ ಸಮಸ್ಯೆಗಳು  !!

!! ನೀವೇನಂತೀರಿ ?

No comments:

Post a Comment