Tuesday, January 29, 2013

ಅಂತಿಮ ನುಡಿ



ಮನದಾಳದ ಗುಹೆಯಲ್ಲಿ ಹೇಳಲಾರದ ನೋವೊಂದು
ಕಡಲಾಚಿನ ತೀರದಲಿ ಭೋರ್ಗರೆಯುವ ರಣಹದ್ದಿನಂತೆ
ಘೋರ ಗುಡುಗು ಮಿಂಚುಗಳ ಸೋಲಿಸುವ ತವಕದಲಿ
ಮುನ್ನುಗ್ಗಿ ಬರುತಲಿದೆ ತನ್ನ ಇಂದೇ ಕೊನೆಯಾಗಿಸಲೆಂದು !!

ರಮ್ಯ ಸೌಂದರ್ಯವ ಗುರುತಿಸಿ ನಗುವ ನನ್ನೀ ನಯನಗಳು
ರಮಣನ ಆತ್ಮದ ಕಂಪನಕ್ಕೆ ಬೆರಗಾಗಿ ಕಂಬನಿ ಸುರಿಸಿಹುದು
ಜಗವ ಬೆಳಗಿಸುವ ಸೂರ್ಯ ದೇವನಿಗೆ ಕತ್ತಲಾವರಿಸಿದಂತೆ
ಮುಸ್ಸಂಜೆ ಗಾಳಿಯಲಿ ಮೌನ ತನ್ನ ತಾಂಡವ ನರ್ತನದಲಿದೆ !!

ಕರ್ಜೂರದ ಸವಿಯುಂಡ ದೇಹವಿದು ಜರ್ಜರಿದು ನಡುಗುತಿದೆ
ಕಷ್ಟ ಸುಖಗಳನು ದಾಟಿ ಬಂದ ಕಾಲುಗಳಿಂದು ಸೊಲುತಲಿದೆ
ಚೈತನ್ಯದ ಗೂಡಾದ ಚಿಂತನೆಗಳು ಚೂರು ಚೂರಾದಂತಿದೆ
ಜೀವವಾಯು ತನ್ನ ವೇಗವ ತಗ್ಗಿಸಿದಂತೆ ಭಾಸವಾಗುತಲಿದೆ !!

ಇದೇನು ದಿಡೀರನೆ ಸಾವು ಸಮೀಪಿಸುವ ಮುನ್ಸೂಚನೆಯೋ
ಪಂಚಬೂತಗಳೊಂದಿಗೆ ದೇಹ ಲೀನವಾಗುವ ಚಲನವಲನವೋ
ದೈಹಿಕ ಜೀವನ ತಿಲಾಂಜಲಿಯ ಸ್ವಕಪೋಲಕಲ್ಪಿತ ಆಲೋಚನೆಯೋ
ಮುಂದಿನದನ್ನು ನನಗೆ ತಿಳಿಸದೇ ದಕ್ಷಿಣಾಧಿಪತಿಯ ಆಗಮನವೋ ?


No comments:

Post a Comment