ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!
ಕಾಶ್ಮೀರದ ಕಣಿವೆಯಲ್ಲಿ ಸಲ್ಲದ ಉಗ್ರರ ಉಪಟಳ
ಕಣ್ಣ ಮುಂದೆ ದಹನವಾಗುತಿದೆ ಯೋಧನ ಬಿಸಿದೇಹ
ಕಣ್ಣು ಮುಚ್ಚಿ ಕೂರುತಿದೆ ಸ್ವಾತಂತ್ರ್ಯ ಪಡೆದ ಸಶಕ್ತ ಭಾರತ ದೇಶ !! ಪ !!
ರಾಜ್ಯ ರಾಜ್ಯಗಳ ಮಧ್ಯೆ ಗಡಿ ಭೂಮಿಗಾಗಿ ಹಾರಾಟ
ನಿರಂತರ ಸಾಗುತಿದೆ ಕಾವೇರಿಯ ಕಾನೂನು ಕಾದಾಟ
ನಿತ್ಯ ನೀರಿಗಾಗಿ ಪರದಾಡುತಿದೆ ಬೆಂಗಳೂರಿಗನ ಜೀವನದ ಪುಟ !! ಪ !!
ಬೇಸಿಗೆ ಬಂತೆಂದರೆ ಬರಿದಾಗುವುದು ನಮ್ಮ ಆಣೆಕಟ್ಟು
ಮಳೆಗಾಲ ಬಂದರು ಬರಲಾಗದು ಹೊಸ ಮಳೆಯ ಹುಟ್ಟು
ಸತ್ಯ, ಅಂದು ನಿಂತೇ ಹೋಗುವುದು ಯಾಂತ್ರಿಕನ ಜೀವನದ ಗುಟ್ಟು !! ಪ !!
ಬೇಕೆ ಸ್ವಾಮೀ ಇತನ್ಮಧ್ಯೆ ಜಾತಿ ಮತಗಳಿಗಾಗಿ ಕಾದಾಟ
ರಾಜಕೀಯ, ಅಧಿಕಾರ, ಭಾಷೆ, ಪಂಥಗಳಿಗಾಗಿ ಹೊಡೆದಾಟ
ಎಂದೋ ನಿರ್ಧರಿಸಿಹನು ಅದಾಗಲೇ ವಿಧಿ ತಾನಾಡುವ ಕೋನೆಯ ಆಟ !!
ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!
No comments:
Post a Comment