Tuesday, July 1, 2014

ಮಳೆರಾಯ

ಬಾರಯ್ಯ ಬಾರೋ ಮಳೆರಾಯ
ಹಸಿರಾಗಿಸು ನಮ್ಮೂರ ಮಹರಾಯ
ನಿನಗಾಗಿ ಕಾದಿರುವರ ಗೋಳು ಕೇಳಯ್ಯ !!

ಬಿಸಿಲ ಬೇಗೆಗೆ ಕಾದಿದೆ ಧರೆಯು
ಇನ್ನೂ ತುಂಬಲಿಲ್ಲ ನಮ್ಮೂರ ಕೆರೆಯು
ಬೀಳಲಿದೆ ಬಡವನಿಗೆ ಮತ್ತೊಂದು ಬರೆಯು !!

ನಿನ್ನಯ ನಂಬಿ ಮೊದಲ ಮಳೆಗೆ
ಸಂಭ್ರಮದಿ ಬೆವರಸೂಸಿ ಹೊಲವ ಹೂಳಿ
ಬೀಜವ ಬಿತ್ತ ರೈತರ ಪಾಡು ಕೇಳುವವರಾರು !!

ನಿನ್ನನು ಆಶ್ರಯಿಸಿದ ತಂತ್ರಜ್ಞಾನ
ಸ್ತಬ್ದವಾಗಿಹುದು ನಿನ್ನ ಕಾಯುವಿಕೆಯಲ್ಲಿ
ಇನ್ನಾದರು ಮುನಿಸ ತೊರೆದು ಬಾರಯ್ಯ ಮನೆಗೆ !!

ಕುಡಿಕೆ ನೀರಿಲ್ಲದೆ ಕಂಗಾಲಾಗಿಹರು ಜನ
ಅತಿವೃಷ್ಟಿ ಅನಾವೃಷ್ಟಿ ಬದಿಗೊತ್ತಿ ಸಮವೃಷ್ಟಿ
ತಾರಯ್ಯ ನಮ್ಮೂರ ತಾಯಿ ಭುವಿದೇವಿ ಪಾಲಿಗೆ !!


--ಶ್ರೀಧರ ಐತಾಳ ದೇವಳಿ

1 comment:

  1. ಇದೇ ಮೊರೆ ನಮ್ಮದೂ ಭಗವಂತ, ಕನಿಕರಿಸು...

    ReplyDelete