Wednesday, June 4, 2014

ಸಾರ್ಥಕ

ಬಡತನವೇ ಸಾಕೆಮೆಗೆ
ಮೂರು ಹೊತ್ತು ಊಟಕ್ಕಿರಲು ...
ಮನೆ ಮಂದಿ ಜೊತೆಗೆ ಕೂಡಿರಲು ...
ಕಿತ್ತಾಡಲು ನಮಗೆ ಆಸ್ತಿಪಾಸ್ತಿ ಇರದಿರಲು ...

ಸಿರಿತನವು ಬೇಕೆಮಗೆ
ಮೂರು ಬಗೆಯ ಊಟತಿನ್ನಲು ..
ಮನೆಯ ಮೇಲೊಂದು ಮನೆಯಿಡಲು   ...  
ಮನದ ಇಚ್ಚೆಯನು ಬೇಕೆಂದಾಗ ಪಡೆಯಲು ..

ಜಾಣತನ ಕೊಡುಯನಗೆ
ಮೂರು ಲೋಕವ ಗೆದ್ದುಬರಲು ...
ಮನೆಯ ಕೀರ್ತಿಯ ಎತ್ತಿಹಿಡಿಯಲು ...
ಮಾನವ ಜನ್ಮವನು ಸಾರ್ಥಕ ಗೊಳಿಸಲು ...

--ಶ್ರೀಧರ ಐತಾಳ ದೇವಳಿ

1 comment:

  1. ಅಸ್ತು ಎಂದರು ತಥಾಸ್ತು ಎಂದರು.

    ReplyDelete