Tuesday, May 27, 2014

ಭಾಗ್ಯದ ಸಿರಿ



ಬಯಕೆಯ ತೋಟದ ಬಳ್ಳಿಯೇ
ನೀ ಬೆಳೆಯಬೇಕಾಗಿದೆ ಅಲ್ಲಿಯೇ
ನಮ್ಮಯ ನವ ಭಾಗ್ಯದ ಸಿರಿಯೇ
ನೀ ಎಂದು ಕಾಲಿಡುವೆಯೊ ಈ ಭುವಿಗೆ ?

ಕ್ಷಣ ಕ್ಷಣಕೂ ಆ ಸುದಿನವ ಲೆಕ್ಕಿಸುವೆ 
ಮನದಲ್ಲೇ ಏನೇನೋ ಯೋಚಿಸುವೆ
ನಿನ್ನ ಆಗಮನಕ್ಕಾಗಿ ನಾ ಕಾದಿರುವೆ
ಪ್ರೀತಿಯ ಆಲಿಂಗನವ ಬಯಸಿರುವೆ !!

ಅಮ್ಮನ ಉದರದಿ ನೀ ಮಲಗಿರುವೆ
ನವಮಾಸವ ಅಲ್ಲೇ ಕಳೆಯಲಿರುವೆ
ಪ್ರತಿ ನಿಮಿಷವೂ ನಿನ್ನನು ನೆನಪಿಸುವೆ
ಆಕೆಗೆ ಕಚಗುಳಿ ನೀನಲ್ಲಿ ಕೊಡುತಿರುವೆ !!

ಬಯಕೆಯ ತೋಟದ ಬಳ್ಳಿಯೇ
ನೀ ಬೆಳೆಯಬೇಕಾಗಿದೆ ಅಲ್ಲಿಯೇ
ನಮ್ಮಯ ನವ ಭಾಗ್ಯದ ಸಿರಿಯೇ
ನೀ ಎಂದು ಕಾಲಿಡುವೆಯೊ ಈ ಭುವಿಗೆ ?

--ಶ್ರೀಧರ ಐತಾಳ ದೇವಳಿ

3 comments:

  1. "ನಮ್ಮಯ ನವ ಭಾಗ್ಯದ ಸಿರಿಯೇ
    ನೀ ಎಂದು ಕಾಲಿಡುವೆಯೊ ಈ ಭುವಿಗೆ ?"
    ಸ್ವಾಗತಕ್ಕೆ ನಾವು ಕಾಯುತ್ತಿದ್ದೇವೆ.

    ಎಲ್ಲ ಒಳ್ಳೆಯದಾಗಲಿ, ನಾಮಕರಣಕ್ಕೆ ಮರೆಯಬೇಡಿ! :)

    ReplyDelete
  2. ಕರುಳಕುಡಿಯ ಆಗಮನಕ್ಕೆ ಕಾಯುವಿಕೆಯ ಈ ಪರಿ ಇಷ್ಟವಾಯಿತು... ಶುಭವಾಗಲಿ...

    ReplyDelete
  3. ತುಂಬಾ ಧನ್ಯವಾದ... ನಿಮ್ಮೆಲ್ಲರ ಸವಿನುಡಿಗೆ

    ReplyDelete