ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!
ದಾರಿ ತಪ್ಪಿ ಹೋಗಿದೆ
ಕಾರಣ ತಿಳಿಯದಾಗಿದೆ
ನಿನ್ನ ನಗುವ ನೋಡಿದೆ
ಮನಸು ನಿನ್ನೇ ತಾ ಬಯಸಿ...
ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!
ನಿನ್ನ ಸ್ನೇಹ ಕೋರಿದೆ
ಪ್ರೇಮ ಸಂದೇಶ ಕಳಿಸಿದೆ
ಅಂಗಲಾಚಿ ನಿನ್ನನು ಬೇಡಿದೆ
ಮನಸಾರೆ ನಿನ್ನೇ ನಾ ಸೇರಲು...
ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!
ನಿನ್ನ ಪ್ರೀತಿ ತಿಳಿಯದೆ
ಹಲವು ಬಾರಿ ನೊಂದೆನು
ನಿನ್ನ ಒಲವಿನ ಸಿಂಚನದಿ
ನನ್ನ ಇರುವಿಕೆಯನೇ ಮರೆತೆನು...
ಊರ ಸುತ್ತಿ ಬಂದೆ
ನಿಂತೇ ನಿನ್ನ ಮುಂದೆ !!
--ಶ್ರೀಧರ ಐತಾಳ ದೇವಳಿ
ನಿರಾಕರಣೆ ಮತ್ತು ಅವಗಣನೆ ಒಲವಿಗೆ ಶಾಪಗಳು.
ReplyDeleteನೊಂದ ಜೀವಕ್ಕೆ ಸದಾ ವ್ಯಥೆಯ ಫಲಗಳು
ReplyDelete