Friday, October 11, 2013

ನಾನೇ ಇಂಜಿನಿಯರ್




ಅನುದಿನದ ಬಾಳಿದುವೆ
ಬಂಧನದ ಅನುಭವವೇ
ಸುತ್ತಲೂ ಗೋಡೆಗಳು
ಮೌನದ ಕರಿ ನೆರಳು !!

ಕಾಣಿಸದ ಗುರಿಗಳನು
ಲೆಕ್ಕಿಸದೆ ಕೊಟ್ಟವನು
ಹೆಸರಿಗೆ ಸಾಹುಕಾರನು
ನಮ್ಮಂತೆಯ ಕೂಲಿಯವನು !!

ತಂಪಿನ ಗಾಳಿಯದುವೆ
ಕೊಂಕಿನ ಮಾತುಗಳೊಡನೆ
ನೆಚ್ಚಿದ ಉದ್ಯೋಗವನ್ನು
ಮೆಚ್ಚದೆ ಮಾಡಿಸುವುದು !!

ತಿಂಗಳಿಗೊಮ್ಮೆ ನಗುವುದು 
ವಾರದ ಕೊನೆಗೆ ಕೊರಗುವುದು 
ಜನರ ಕಣ್ಣಿಗೆ ಮಾತ್ರ ಸಿರಿವಂತ
ತಿಳಿದವನಿಗೆ ಗೊತ್ತು ಇವನೆನಂತ !!

No comments:

Post a Comment